tag:blogger.com,1999:blog-82096305317504486552024-03-13T16:41:29.647-07:00ಕುವೆಂಪು ನಗರದಿಂದ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger207125tag:blogger.com,1999:blog-8209630531750448655.post-62518827370635558652011-08-23T21:32:00.000-07:002011-08-23T21:33:04.594-07:00ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ<a href="http://www.vartamaana.com">ವರ್ತಮಾನ</a>ದಲ್ಲಿ ಬರೆದಿರುವ ಲೇಖನ:<br />
<br />
<a href="http://www.vartamaana.com/2011/08/23/%e0%b2%85%e0%b2%a3%e0%b3%8d%e0%b2%a3%e0%b2%be-%e0%b2%b9%e0%b2%9c%e0%b2%be%e0%b2%b0%e0%b3%86-%e0%b2%b9%e0%b3%8b%e0%b2%b0%e0%b2%be%e0%b2%9f%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%97/">ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…</a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-43008223211650111892011-08-23T21:30:00.000-07:002011-08-23T21:30:33.860-07:00ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?<a href="http://www.vartamaana.com">ವರ್ತಮಾನ</a>ದಲ್ಲಿ ಬರೆದಿರುವ ಲೇಖನ:<br />
<br />
<a href="http://www.vartamaana.com/2011/08/18/%e0%b2%88-%e0%b2%9a%e0%b2%b3%e0%b2%b5%e0%b2%b3%e0%b2%bf-%e0%b2%95%e0%b3%87%e0%b2%b5%e0%b2%b2-%e0%b2%a8%e0%b2%97%e0%b2%b0-%e0%b2%ae%e0%b2%a7%e0%b3%8d%e0%b2%af%e0%b2%ae%e0%b2%b5%e0%b2%b0%e0%b3%8d/">ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?</a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-3218989255875641282011-08-23T21:21:00.000-07:002011-08-23T21:34:19.593-07:00www.vartamaana.com - ವರ್ತಮಾನ - ಇಂದಿನ ಸವಾಲು ಮತ್ತು ಭವಿಷ್ಯದ ಕನಸುಸ್ನೇಹಿತರೆ,<br />
<br />
<a href="http://www.vartamaana.com">www.vartamaana.com</a><br />
<br />
<a href="http://www.vartamaana.com">ವರ್ತಮಾನ - ಇಂದಿನ ಸವಾಲು ಮತ್ತು ಭವಿಷ್ಯದ ಕನಸು</a><br />
<br />
ಇಂತಹುದೊಂದು ಪ್ರಯತ್ನ ಆರಂಭವಾಗಿದೆ. ಕೇವಲ ನಮ್ಮ ಬದ್ಧತೆ ಮತ್ತು ನಾವು ಒಂದಷ್ಟು ಜನ ಕೊಡಬಹುದಾದ ಬಿಡುವಿನ ಸಮಯದ ಮೇಲೆ ಈ ಪ್ರಯತ್ನ ಸಾಗುತ್ತದೆ. ಇದು ವೈಯಕ್ತಿಕ ನೆಲೆಯಲ್ಲಿ ಆರಂಭವಾದದ್ದೇ ಆದರೂ ಇದು ಅಂತಿಮವಾಗಿ ಸಂಘಟಿತ ಯತ್ನ. ಇದನ್ನು ಆರಂಭಿಸಿದಾಗ <a href="http://www.vartamaana.com/2011/08/10/%e0%b2%b5%e0%b2%b0%e0%b3%8d%e0%b2%a4%e0%b2%ae%e0%b2%be%e0%b2%a8%e0%b2%95%e0%b3%8d%e0%b2%95%e0%b3%8a%e0%b2%82%e0%b2%a6%e0%b3%81-%e0%b2%aa%e0%b3%80%e0%b2%a0%e0%b2%bf%e0%b2%95%e0%b3%86/">ಬರೆದ ಪೀಠಿಕೆ ಇಲ್ಲಿದೆ.</a> ಭೇಟಿ ಕೊಡಿ.<br />
<br />
ಇನ್ನು ಮೇಲೆ, ನನ್ನ ಲೇಖನಗಳು ವರ್ತಮಾನದಲ್ಲಿಯೇ ಪ್ರಕಟವಾಗಲಿವೆ. ಸಾಧ್ಯವಾದಾಗ ಅದರ ಕೊಂಡಿ ಇಲ್ಲಿ ಕೊಡುತ್ತೇನೆ.<br />
<br />
ನಮಸ್ಕಾರ,<br />
ರವಿ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-15698888680954303992011-06-28T07:32:00.000-07:002011-06-28T07:32:55.567-07:00ಕರ್ನಾಟಕ ಪ್ರಜಾ ಮಂಡಲ - ಸಂವಿಧಾನದ ಮೇಲಾಣೆಸ್ನೇಹಿತರೆ,<br />
<br />
ನಾವು ಒಂದಿಷ್ಟು ಸಮಾನಮನಸ್ಕರು (ಸುಜಾತ ಕುಮಟ, ಸೂರ್ಯ ಮುಕುಂದರಾಜ್, ಶಾಂತವೇರಿ ರಾಮಮನೋಹರ್, ಮುಕುಂದರಾಜ್, ನಾನು, ಮತ್ತು ಇನ್ನೂ ಹಲವರು) "ಕರ್ನಾಟಕ ಪ್ರಜಾ ಮಂಡಲ" ಎಂಬ ವೇದಿಕೆಯೊಂದನ್ನು ಹುಟ್ಟುಹಾಕಿದ್ದೇವೆ. (ಇದರ ಹುಟ್ಟು ಹೇಗಾಯಿತು ಎಂದು ಮುಂದೊಮ್ಮೆ ಬರೆಯುತ್ತೇನೆ.) ಈ ಸಂಘಟನೆಯ ಮೂಲ ಉದ್ದೇಶ, ’ಕರ್ನಾಟಕದ ಸಮಾಜ, ಸಂಸ್ಕೃತಿ, ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ’ ಕಾರ್ಯಕ್ರಮಗಳನ್ನು ರೂಪಿಸುವುದು. ಕರ್ನಾಟಕ ರಾಜಕಾರಣದ ಇತ್ತೀಚಿನ ಕ್ಷುದ್ರ ಪ್ರಹಸನವಾದ ಆಣೆ-ಪ್ರಮಾಣದ ವಿರುದ್ಧವಾಗಿ "ಸಂವಿಧಾನದ ಮೇಲಾಣೆ" ಎಂಬ ಪ್ರತಿಭಟನಾ ಕಾರ್ಯಕ್ರಮ (27/6/2011)ಮಾಡುವುದರ ಮೂಲಕ ನಾವು ಮೊದಲು ಮಾಡಿದ್ದೇವೆ. ಅಂದು ನಮ್ಮ ಜೊತೆಗೆ ಹಲವಾರು ಹಿರಿಯರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಂಗಳೂರಿನ ಪುರಭವನದ ಮೆಟ್ಟಿಲುಗಳ ಮೇಲೆ ನಡೆದ ಅದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.<br />
<img src="http://www.ravikrishnareddy.com/blog/wp-content/uploads/2011/06/prajamandala-11june27.jpg" align="center" width="100%"><br />
<br />
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಮತ್ತು ನ್ಯಾಯಾಲಯದಿಂದ ತೀರ್ಮಾನವಾಗಬೇಕಾದದ್ದನ್ನು ದೇವಸ್ಥಾನವೊಂದರಲ್ಲಿ ಆಣೆ-ಪ್ರಮಾಣ ಮಾಡಿಕೊಳ್ಳುವುದರ ಮೂಲಕ ತೀರ್ಮಾನಿಸಿಕೊಳ್ಳಲು ಬಯಸುವ ಮೂಢ-ಅವೈಚಾರಿಕ-ಅಪ್ರಬುದ್ಧ ನಡವಳಿಕೆಯ ವಿರುದ್ಧ ಘೋಷಣೆ ಕೂಗಿ, ಒಂದಷ್ಟು ಒಳ್ಳೆಯ ಕವನಗಳನ್ನು ಹಾಡಿ, ಕೆಲವು ಕವಿಗಳು ಕವನವನ್ನು ವಾಚಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಅದರ ಕುರಿತ ಚಿತ್ರಗಳು, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್ಗಳು ಇಲ್ಲಿವೆ. ನೀವು ಮುಂದಿನ ದಿನಗಳಲ್ಲಿ ನಮ್ಮೊಡನೆ ಕೈಜೋಡಿಸುವ ಆಸಕ್ತಿಯಿದ್ದಲ್ಲಿ (ದಯವಿಟ್ಟು ಜೊತೆಗೂಡಿ ಎಂದು ಕೇಳಿಕೊಳ್ಳುತ್ತೇನೆ) ದಯವಿಟ್ಟು ಮೇಲೆ ಹೆಸರಿಸಿದ ಯಾರನ್ನಾದರೂ ಸರಿ ಸಂಪರ್ಕಿಸಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)<br />
<br />
<b>ಉದಯವಾಣಿಯಲ್ಲಿ:</b><br />
<img src="http://www.ravikrishnareddy.com/blog/wp-content/uploads/2011/06/20110628_Udayavani.jpg" align="center" width="100%"><br />
<br />
<b>ಪ್ರಜಾವಾಣಿಯಲ್ಲಿ:</b><br />
<img src="http://www.ravikrishnareddy.com/blog/wp-content/uploads/2011/06/20110628a_Prajavani.jpg" align="center" width="100%"><br />
<br />
<b>ವಿಜಯ ಕರ್ನಾಟಕದಲ್ಲಿ:</b><br />
<img src="http://www.ravikrishnareddy.com/blog/wp-content/uploads/2011/06/20110628a_VijayKarnataka.jpg" align="center" width="100%"><br />
<br />
<img src="http://www.ravikrishnareddy.com/blog/wp-content/uploads/2011/06/20110628a_VijayKarnataka2.jpg" align="center" width="100%"><br />
<br />
<b>ಕನ್ನಡಪ್ರಭದಲ್ಲಿ:</b><br />
<img src="http://www.ravikrishnareddy.com/blog/wp-content/uploads/2011/06/20110628_Kannadaprabha.jpg" align="center" width="100%"><br />
<br />
ಚಿತ್ರ-ವರದಿ ಕೃಪೆ: ಮೇಲೆ ಹೆಸರಿಸಿರುವ ಪತ್ರಿಕೆಗಳದು.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-59779500731250343882011-06-28T04:41:00.000-07:002011-06-28T04:41:24.277-07:00ಮಾಧ್ಯಮ ಕರ್ನಾಟಕ : ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ...ಕಳೆದ ಶನಿವಾರ ಮತ್ತು ಭಾನುವಾರ (ಜೂನ್ 25-26, 2011) ಚಿತ್ರದುರ್ಗದಲ್ಲಿ ’ಮಾಧ್ಯಮ ಕರ್ನಾಟಕ" ಎಂಬ ವಿಚಾರ ಸಂಕಿರಣ ನಡೆಯಿತು. ’ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು’, ಮತ್ತು ’ಗೆಳೆಯರ ಬಳಗ, ಚಿತ್ರದುರ್ಗ’, ’ನಾವು-ನಮ್ಮಲ್ಲಿ’ ಸಹಯೋಗದೊಂದಿಗೆ ಆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದಕ್ಕೆ ಹೆಚ್ಚಾಗಿ ಕನ್ನಡದ ಕೆಲವು ಪ್ರಮುಖ ಪ್ರಗತಿಪರ ವಿಚಾರಧಾರೆಯ ಪತ್ರಕರ್ತರು, ಬರಹಗಾರರು, ಆಸಕ್ತರು ಬಂದಿದ್ದರು. ಆಯೋಜಕರಲ್ಲಿ ಬಹುಪಾಲಿನವರು ಚಿತ್ರದುರ್ಗದ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಯುವಕರೇ ಇದ್ದರು. (ಯುವಕರೇ ಅಂದರೆ ಯುವಕ ಮತ್ತು ಯುವತಿಯರು ಎಂದು ಭಾವಿಸಬೇಕಾಗಿ ವಿನಂತಿ.) ಆಯೋಜನೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಬಹಳ ಪ್ರೀತಿ, ಆಸಕ್ತಿ, ಮತ್ತು ಕಾಳಜಿಯಿಂದ ಸಂಯೋಜಿಸಲ್ಪಟ್ಟ ಕಾರ್ಯಕ್ರಮ. ಅವರೆಲ್ಲರಿಗೂ ನಾನು ಈ ಮೂಲಕ ಅಭಿಮಾನ, ಅಭಿನಂದನೆ ಮತ್ತು ಧನ್ಯವಾದ ತಿಳಿಸುತ್ತೇನೆ. ಈ ಗುಂಪಿನ ಮೇಲೆ ನನಗೆ ಬಹಳಷ್ಟು ಆಶಾವಾದವಿದೆ. ಇವರ ತಾಕತ್ತು ಅವರು ಹೊಂದಿರುವ ಪ್ರಾಮಾಣಿಕತೆ, ಕ್ರಿಯಾಶೀಲತೆ, ವೈಚಾರಿಕ ನಿಲುವುಗಳು, ಮತ್ತು ಆದರ್ಶಗಳಲ್ಲಿದೆ.<br />
<br />
ಮೊದಲ ದಿನದದ ಗೋಷ್ಠಿಯಲ್ಲಿ ನನ್ನದೂ ಒಂದು ವಿಷಯ ಮಂಡನೆಯಿತ್ತು. ವಿಷಯ, "ಆದರ್ಶ ಪತ್ರಿಕೋದ್ಯಮ". ಅದಕ್ಕೂ ಎರಡು ದಿನದ ಹಿಂದೆ ಬೆಂಗಳೂರಿನ ಗೆಳೆಯರಿಬ್ಬರ ಜೊತೆ ಗಂಭೀರವಾಗಿ ಮಾತನಾಡುತ್ತಿದ್ದಾಗ ನಾನು ಮಂಡಿಸಲಿರುವ ವಿಷಯವನ್ನು ಯಾವ ವಿಚಾರದ ಪ್ರಸ್ತಾಪದ ಮೂಲಕ ಕೊನೆಗೊಳಿಸಬೇಕು ಎನ್ನುವ ಸ್ಪಷ್ಟತೆ ಬಂದಿತ್ತು. ಅದು, ಕರ್ನಾಟಕದಲ್ಲಿ ಪರ್ಯಾಯ ಮಾಧ್ಯಮದ ಹುಡುಕಾಟದ ಮೂಲಕ ನಾವೊಂದು ಆದರ್ಶ ಮಾಧ್ಯಮ ಸಂಸ್ಥೆ/ಗುಂಪೊಂದರ ಸಾಕಾರ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು. ಆ ಪರ್ಯಾಯ ಮಾಧ್ಯಮ internet ಆಧಾರಿತವಾಗಿರುತ್ತದೆ. ಈ ಮಾಧ್ಯಮ ಉತ್ತಮ ಜೀವನ ಮೌಲ್ಯಗಳ, ಸ್ವಾತಂತ್ರ್ಯದ, ಸಮಾನತೆಯ, ಪ್ರಜಾಪ್ರಭುತ್ವದ ಪರ ಇದ್ದುಕೊಂಡೆ ಸಬಲ ಧ್ವನಿಯಾಗಿಯೂ ಬೆಳೆಯಲು ಸಾಧ್ಯವಿದೆ. ಇದಕ್ಕೆ ಬೇಕಿರುವುದು ದುಡ್ಡಿಗಿಂತ ಹೆಚ್ಚಾಗಿ ಬದ್ಧತೆಯುಳ್ಳ ಮತ್ತು ಹೆಚ್ಚಿನ ಮಟ್ಟದ ಹಣದ ಅವಶ್ಯಕತೆಯಿರದ ಒಂದಿಷ್ಟು ಯುವ ಪತ್ರಕರ್ತರು ಮತ್ತು ಬರಹಗಾರರು. ಇದು ಈ ಕೂಡಲೆ ಸಾಧ್ಯವಾಗುವ ಸಂಗತಿಯಲ್ಲ. ನಮ್ಮ ಕನ್ನಡದ-ಕರ್ನಾಟಕದ ಸಂದರ್ಭದಲ್ಲಿ ಬಹುಶ: ಐದಾರು ವರ್ಷಗಳನ್ನೆ ತೆಗೆದುಕೊಳ್ಳಬಹುದು. ಇದನ್ನೆ ನಾನು ಅಲ್ಲಿ ಪ್ರಸ್ತಾಪಿಸಿದ್ದೆ.<br />
<br />
ನನ್ನ ಮುಂದಿನ ದಿನಗಳ ಸುಮಾರು ನಾಲ್ಕನೆ ಒಂದು (ಎಚ್ಚರದ ಸ್ಥಿತಿಯ) ಸಮಯವನ್ನು ಮತ್ತು ನನ್ನ ಒಂದಷ್ಟು ಆದಾಯದ ಪಾಲನ್ನು ಇದರ ಸಾಕಾರಕ್ಕೆ ವಿನಿಯೋಗಿಸಲಿದ್ದೇನೆ. ಬಹುಶಃ ಕೈಗೆ ಸಿಗುವ ಸಮಾನಮನಸ್ಕರಿಗೆಲ್ಲ ಇದರ ಬಗ್ಗೆ ಪ್ರಸ್ತಾಪಿಸಲಿದ್ದೇನೆ. ಇದನ್ನು ಓದುವ ಗೆಳೆಯರು ಈ ನಿಟ್ಟಿನಲ್ಲಿ ನನಗೊಂದಿಷ್ಟು ಸಹಾಯ ಮಾಡಬಹುದು. ನೀವು ಈ ವಿಷಯದಲ್ಲಿ ಆಸಕ್ತರಾಗಿದ್ದರೆ ಮತ್ತು ಒಂದಿಷ್ಟು ಗಂಟೆಗಳ ಸಮಯವನ್ನು ಕೊಡಬಲ್ಲಿರಾದರೆ ದಯವಿಟ್ಟು ಸಂಪರ್ಕಿಸಿ (೯೬೮೬೦೮೦೦೦೫). ಅಥವ ನಿಮ್ಮ ಸ್ನೇಹಿತರ ಬಳಗದಲ್ಲಿ ಅಂತಹವರಿದ್ದರೆ ಅವರಿಗೆ ನನ್ನನ್ನು ಸಂಪರ್ಕಿಸಲು ತಿಳಿಸಿ. ಅವರು ಕರ್ನಾಟಕದ (ಅಥವ ದೇಶದ) ಯಾವುದೇ ಪ್ರದೇಶದಲ್ಲಿರಲಿ, ತೊಂದರೆಯಿಲ್ಲ. ಆದರೆ ಅವರಿಗೆ ಒಂದಿಷ್ಟು ಸವಲತ್ತುಗಳಿರಬೇಕು (ಕಂಪ್ಯೂಟರ್, ಇಂಟರ್ನೆಟ್). ಒಂದಿಷ್ಟು ಓದಿಕೊಂಡಿರಬೇಕು. ಹೊಸತನ್ನು ಓದುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ ಮತ್ತು ಅವುಗಳನ್ನು ವಿಮರ್ಶಿಸುವ ಬೌದ್ಧಿಕ ಸಾಮಗ್ರಿ ಇರಬೇಕು. ಅವರು ಹೇಳುವ ವಿಚಾರಕ್ಕೆ ಬದ್ಧರಾಗಿರಬೇಕು. ಪ್ರಾಮಾಣಿಕರಾಗಿರಬೇಕು. ಅವರ ಸಮಯಕ್ಕೆ ಮತ್ತು ಬರವಣಿಗೆಗೆ ಸೂಕ್ತ ಮಾಸಿಕ ಸಂಭಾವನೆಯನ್ನು ಕೊಡಲಾಗುವುದು. ಉಳಿದಂತೆ, ನನ್ನ ವಿಚಾರಗಳೇನು ಮತ್ತು ನಿಲುವುಗಳೇನು ಎಂದು ಈ ಬ್ಲಾಗ್ ಓದುವವರಿಗೆ ತಿಳಿದೇ ಇದೆ.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-17991492168330250812011-06-27T08:19:00.000-07:002011-06-27T08:19:40.381-07:00ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು<p>ಕಳೆದ ವಾರ (19/6/11) ನಡೆದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು ಇವು. ಬಿಡುಗಡೆಯಾದ ಪುಸ್ತಕಗಳ ಮುಖಪುಟ ಸಹ ಈ ಪೋಸ್ಟ್ಗೆ ಸೇರಿಸಿದ್ದೇನೆ. ಅಂದು ಬಂದಿದ್ದ ಗೆಳೆಯರಿಗೆ, ಹಿತೈಷಿಗಳಿಗೆ, ನೆರವಾದ ಮಿತ್ರರಿಗೆ, ಕವಿಗಳಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು.</p><a href="http://www.ravikrishnareddy.com/blog/wp-content/uploads/2011/06/anyway-cover.jpg"><img class="aligncenter size-full wp-image-298" title="anyway-cover" src="http://www.ravikrishnareddy.com/blog/wp-content/uploads/2011/06/anyway-cover.jpg" alt="" width="100%" /></a><br />
<br />
<a href="http://www.ravikrishnareddy.com/blog/wp-content/uploads/2011/06/desha-kaala-shrama.jpg"><img src="http://www.ravikrishnareddy.com/blog/wp-content/uploads/2011/06/desha-kaala-shrama-1024x626.jpg" alt="" title="desha-kaala-shrama" width="100%"></a><br />
<a href="http://www.ravikrishnareddy.com/blog/wp-content/uploads/2011/06/DSC09010.jpg"><img src="http://www.ravikrishnareddy.com/blog/wp-content/uploads/2011/06/DSC09010-1024x768.jpg" alt="" title="DSC09010" width="100%"></a><br />
<a href="http://www.ravikrishnareddy.com/blog/wp-content/uploads/2011/06/DSC09009.jpg"><img src="http://www.ravikrishnareddy.com/blog/wp-content/uploads/2011/06/DSC09009-1024x768.jpg" alt="" title="DSC09009" width="100%"></a><br />
<a href="http://www.ravikrishnareddy.com/blog/wp-content/uploads/2011/06/DSC09011.jpg"><img src="http://www.ravikrishnareddy.com/blog/wp-content/uploads/2011/06/DSC09011-1024x768.jpg" alt="" title="DSC09011" width="100%"></a><br />
<a href="http://www.ravikrishnareddy.com/blog/wp-content/uploads/2011/06/DSC09012.jpg"><img src="http://www.ravikrishnareddy.com/blog/wp-content/uploads/2011/06/DSC09012-1024x768.jpg" alt="" title="DSC09012" width="100%"></a><br />
<br />
<a href="http://www.ravikrishnareddy.com/blog/wp-content/uploads/2011/06/DSC09014.jpg"><img src="http://www.ravikrishnareddy.com/blog/wp-content/uploads/2011/06/DSC09014-1024x768.jpg" alt="" title="DSC09014" width="100%"></a><br />
<a href="http://www.ravikrishnareddy.com/blog/wp-content/uploads/2011/06/DSC09017.jpg"><img src="http://www.ravikrishnareddy.com/blog/wp-content/uploads/2011/06/DSC09017-1024x768.jpg" alt="" title="DSC09017" width="100%"></a><br />
<br />
<a href="http://www.ravikrishnareddy.com/blog/wp-content/uploads/2011/06/DSC09018.jpg"><img src="http://www.ravikrishnareddy.com/blog/wp-content/uploads/2011/06/DSC09018-1024x768.jpg" alt="" title="DSC09018" width="100%" class="aligncenter size-large wp-image-295" /></a><br />
<a href="http://www.ravikrishnareddy.com/blog/wp-content/uploads/2011/06/DSC09020.jpg"><img src="http://www.ravikrishnareddy.com/blog/wp-content/uploads/2011/06/DSC09020-1024x768.jpg" alt="" title="DSC09020" width="100%" class="aligncenter size-large wp-image-295" /></a><a href="http://www.ravikrishnareddy.com/blog/wp-content/uploads/2011/06/DSC09021.jpg"><img class="aligncenter size-large wp-image-295" title="DSC09021" src="http://www.ravikrishnareddy.com/blog/wp-content/uploads/2011/06/DSC09021-1024x768.jpg" alt="" width="100%" /></a><a href="http://www.ravikrishnareddy.com/blog/wp-content/uploads/2011/06/DSC09023.jpg"><img class="aligncenter size-large wp-image-295" title="DSC09023" src="http://www.ravikrishnareddy.com/blog/wp-content/uploads/2011/06/DSC09023-1024x768.jpg" alt="" width="100%" /></a><a href="http://www.ravikrishnareddy.com/blog/wp-content/uploads/2011/06/DSC09024.jpg"><img class="aligncenter size-large wp-image-295" title="DSC09024" src="http://www.ravikrishnareddy.com/blog/wp-content/uploads/2011/06/DSC09024-1024x768.jpg" alt="" width="100%" /></a><a href="http://www.ravikrishnareddy.com/blog/wp-content/uploads/2011/06/DSC09025.jpg"><img class="aligncenter size-large wp-image-295" title="DSC09025" src="http://www.ravikrishnareddy.com/blog/wp-content/uploads/2011/06/DSC09025-1024x768.jpg" alt="" width="100%" /></a><a href="http://www.ravikrishnareddy.com/blog/wp-content/uploads/2011/06/DSC09026.jpg"><img class="aligncenter size-large wp-image-295" title="DSC09026" src="http://www.ravikrishnareddy.com/blog/wp-content/uploads/2011/06/DSC09026-1024x768.jpg" alt="" width="100%" /></a><a href="http://www.ravikrishnareddy.com/blog/wp-content/uploads/2011/06/DSC09027.jpg"><img class="aligncenter size-large wp-image-295" title="DSC09027" src="http://www.ravikrishnareddy.com/blog/wp-content/uploads/2011/06/DSC09027-1024x768.jpg" alt="" width="100%" /></a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-71641592008717439572011-06-14T22:14:00.000-07:002011-06-14T22:14:03.723-07:00ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ : ದಿ. 19-6-2011ಸ್ನೇಹಿತರೆ,<br />
<br />
"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ", ಮತ್ತು "ದೇಶ-ಕಾಲ-ಶ್ರಮ," ಎಂಬ ನನ್ನ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಭಾನುವಾರದಂದು (19/6/11) ಬೆಳಗ್ಗೆ 10:30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತಿದ್ದೇನೆ.<br />
<br />
"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ," ಇಂಗ್ಲಿಷ್ನ "Anyway" ಕೃತಿಯ ಅನುವಾದ. ಮೂಲ ಲೇಖಕರು ಕೆಂಟ್ ಎಂ. ಕೀತ್. "ದೇಶ-ಕಾಲ-ಶ್ರಮ" ನಾನು "Outliers" ಬಗ್ಗೆ ಬರೆದಿದ್ದ ಲೇಖನಗಳ ಸಂಗ್ರಹರೂಪ.<br />
<p style="text-align: left;">ಅಂದು ವೇದಿಕೆಯಲ್ಲಿ ನಟರಾಜ್ ಹುಳಿಯಾರ್, ಪೃಥ್ವಿ ದತ್ತ ಚಂದ್ರ ಶೋಭಿ, ಮತ್ತು ವಿ.ಪಿ. ನಿರಂಜನಾರಾಧ್ಯರಿರುತ್ತಾರೆ. ಪುಸ್ತಕ ಬಿಡುಗಡೆಯ ನಂತರದ ಕವಿಗೋಷ್ಠಿಯಲ್ಲಿ ಮಂಜುನಾಥ ವಿ. ಎಂ., ಕಾರ್ಪೆಂಟರ್, ಕುಮಾರ್ ಎಸ್., ಜಯಶಂಕರ್ ಹಲಗೂರು, ರಶ್ಮಿ ಹೆಗಡೆ, ಸಿ. ರವಿಂದ್ರನಾಥ್, ಸುಜಾತಾ ಕುಮಟಾ, ಶಿವಸುಂದರ್, ನಾಗತಿಹಳ್ಳಿ ರಮೇಶ್, ದಿನೇಶ್ ಕುಮಾರ್, ಬಾಲ ಗುರುಮೂರ್ತಿ, ಮತ್ತು ಚೀಮನಹಳ್ಳಿ ರಮೇಶ್ ಬಾಬು ತಮ್ಮ ಕವನಗಳನ್ನು ಓದಲಿದ್ದಾರೆ.</p><br />
ಮತ್ತೊಮ್ಮೆ ತಮ್ಮನ್ನು ಆಹ್ವಾನಿಸುತ್ತ,<br />
<p style="text-align: right;">ಪ್ರೀತಿಯಿಂದ,<br />
ರವಿ ಕೃಷ್ಣಾ ರೆಡ್ಡಿ<br />
೯೬೮೬೦-೮೦೦೦೫</p><br />
<a href="http://www.ravikrishnareddy.com/blog/wp-content/uploads/2011/06/invitation_190611.jpg"><img class="aligncenter size-large wp-image-270" title="invitation_190611" src="http://www.ravikrishnareddy.com/blog/wp-content/uploads/2011/06/invitation_190611-682x1024.jpg" alt="Book Release event invitation" width="100%" /></a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-11178796159713447512011-01-21T20:26:00.001-08:002011-01-21T20:30:49.554-08:00ದಲಿತರ ಬಲವರ್ಧನೆ: ಬೇಕಿದೆ ಪೂನಾ ಒಪ್ಪಂದದ ಮರುಚಿಂತನೆಇಂದು ವಿಜಯ ಕರ್ನಾಟಕದಲ್ಲಿ <a href="http://vijaykarnatakaepaper.com/pdf/2011/01/22/20110122a_008101002.pdf">ಪ್ರಕಟವಾಗಿರುವ ಲೇಖನದ</a> ಕೊಂಡಿ...<br /><br /><a href="http://vijaykarnatakaepaper.com/pdf/2011/01/22/20110122a_008101002.pdf">http://vijaykarnatakaepaper.com/pdf/2011/01/22/20110122a_008101002.pdf</a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-79610131016204346162011-01-03T22:26:00.000-08:002011-01-05T05:28:52.124-08:00ಹೀಗೊಂದು ಆರು ದಿನದ ಕರ್ನಾಟಕ ಪ್ರವಾಸ...ಕಳೆದ ಡಿಸೆಂಬರ್ 26 ರಂದು ನಮ್ಮ ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆದಿದ್ದು. ಅಂದು ಬೆಳಗ್ಗೆಯೇ ಹೋಗಿ ಓಟು ಹಾಕಿದೆ. ನಾನು ಓಟು ಹಾಕಿದ ಇಬ್ಬರೂ ಗೆಲ್ಲುವುದಿಲ್ಲ ಎಂದು ಗೊತ್ತಿತ್ತು. ತಾಲ್ಲೂಕು ಪಂಚಾಯಿತಿಗೆ ನಿಂತಿದ್ದ ಅಭ್ಯರ್ಥಿಯೊಬ್ಬರು ಯಾವುದೇ ಕಾರಣಕ್ಕೂ ತನ್ನ ಚುನಾವಣೆಯ ಖರ್ಚಿನ ಮಿತಿ ದಾಟುವುದಿಲ್ಲ ಎಂದು ಗೊತ್ತಿತ್ತು. ಅವರಿಗೆ ನನ್ನ ಪರವಾಗಿ ರೂ.1000 ನೀಡಿ ಅವರ ಪರವಾಗಿ ಒಂದು ಸಣ್ಣ ಸಭೆಯಲ್ಲಿ ಭಾಷಣ ಸಹ ಮಾಡಿದ್ದೆ. ಇನ್ನು ಜಿಲ್ಲಾ ಪಂಚಾಯಿತಿಯಲ್ಲಿ ಕಡಿಮೆ ಕೆಟ್ಟ ಆಯ್ಕೆಯನ್ನು ಆರಿಸಿಕೊಂಡೆ. ಅಲ್ಲಿ ಓಟು ನೀಡುವ ಮನಸ್ಸಿರಲಿಲ್ಲ. ಆದರೆ ಆರಿಸಿಕೊಳ್ಳುವುದನ್ನು ನಿರಾಕರಿಸುವ ಆಯ್ಕೆ ಇರಲಿಲ್ಲ. ನೆನ್ನೆ ಫಲಿತಾಂಶ ಬಂದಾಗ ಇಬ್ಬರೂ ಗೆಲ್ಲಲಿಲ್ಲ. ಬೇರೆ ಆಯ್ಕೆ ಇಲ್ಲದೆ ನಾನು ಓಟು ಹಾಕಿದ್ದ ಅಭ್ಯರ್ಥಿ ಮನೆಯನ್ನು ಮಾರಿ ಚುನಾವಣೆಗೆ ನಿಂತಿದ್ದರಂತೆ. ಆಕೆ ಸೋತಿದ್ದಕ್ಕೆ ವಿಷಾದವಿಲ್ಲ. ಆದರೆ ನಾನು ಓಟು ಹಾಕಿದ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಗೆಲ್ಲಬೇಕಿತ್ತು. ಜನಕ್ಕೆ ಯೋಗ್ಯರು ಬೇಕಾಗಿಲ್ಲ.<br /><br />(ಇದು ಈ ಚುನಾವಣೆಯಲ್ಲಿ ನಾನು ಕೇಳಿದ ನನ್ನೂರಿನಲ್ಲಿ ನಡೆದ ಸತ್ಯಘಟನೆ. ಚುನಾವಣೆಯ ಹಿಂದಿನ ದಿನ ವ್ಯಕ್ತಿಯೊಬ್ಬ ಜನತಾದಳದ ಸ್ಥಳಿಯ ನಾಯಕನ ಮನೆಗೆ ಓಡಿ ಬರುತ್ತಾನೆ. ’ಅಣ್ಣಾ, ರಾತ್ರಿ ಕಾಂಗ್ರೆಸ್ನವರು ಮತ್ತು ಬಿಜೆಪಿಯವರು ಬಂದು ದುಡ್ಡು ಕೊಟ್ಟರಣ್ಣ. ದಳದವರೇ ಕೊಡಲಿಲ್ಲ. ಅದಕ್ಕೇ ಬಂದೆ ಅಣ್ಣ.’ ಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳೂ ದುಡ್ಡು ಹಂಚಿದ್ದರು. ಈ ಸಾರಿ ಕೇವಲ ಇಬ್ಬರೇ ಕೊಟ್ಟಿದ್ದಾರೆ. ನನಗೆ ಎಲ್ಲಿಯಾದರೂ ಮೂರನೆಯವರದು ತಪ್ಪಿ ಹೋಯಿತಾ ಎನ್ನುವುದು ಅವನ ಸಂಶಯ. ಆದರೆ ಈತ ಎಷ್ಟು ಪ್ರಜ್ಞಾವಂತ ಮತ್ತು ನಮ್ಮ ಚುನಾವಣೆ ವ್ಯವಸ್ಥೆ ಯಾರುಯಾರು ಚುನಾವಣೆಗೆ ನಿಂತಿದ್ದಾರೆ ಎನ್ನುವುದನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸೋಲುತ್ತಿದೆ ಅಂದರೆ, ಈ ಕ್ಷೇತ್ರದಲ್ಲಿ ಈ ಚುನಾವಣೆಗೆ ದಳ ತನ್ನ ಅಭ್ಯರ್ಥಿಗಳನ್ನೇ ಹಾಕಿರಲಿಲ್ಲ; ಕಾಂಗ್ರೆಸ್ನೊಡನೆ ಆದ ಅಲಿಖಿತ ಒಪ್ಪಂದದಿಂದಾಗಿ. ಬಹುಶ: ಇದು ಕರ್ನಾಟಕದ ಹಲವಾರು ಕಡೆ ಎಲ್ಲೆಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ನಡುವೆ ಒಪ್ಪಂದಗಳಾಗಿದ್ದವೊ ಅಲ್ಲೆಲ್ಲ ಸ್ಥಳೀಯ ನಾಯಕರಿಗೆ ಅಗಿರಬಹುದಾದ ಅನುಭವ. )<br /><br /><img src="http://sphotos.ak.fbcdn.net/hphotos-ak-snc6/hs011.snc6/166128_113947245344616_100001880229123_110791_609928_n.jpg" width="50%" align="left">ಓಟು ಹಾಕಿ ಬಂದ ನಂತರ ನನ್ನ ಮತ್ತು ನನ್ನ ಆರು ವರ್ಷದ ಮಗಳು ಅಮೃತಳ ಪ್ರಯಾಣ ಆರಂಭವಾಯಿತು. ಅವಳಿಗೆಂದು ಸುಮಾರು 20-30 ಪುಸ್ತಕಗಳನ್ನು, ಒಂದು ದಿಂಬು ಮತ್ತು ಬ್ಲಾಂಕೆಟ್ ಅನ್ನು ಕಾರಿನಲ್ಲಿ ಹಾಕಿಕೊಂಡಿದ್ದೆ. ನನ್ನೂರಿನಿಂದ ಹೊರಟು NICE ರಸ್ತೆಗೆ ಹೊರಳಿದೆವು. ಅದೇ ರಸ್ತೆಯಲ್ಲಿ ನಾನು ಮತ್ತು ಅವಳು ಕೇವಲ ಎರಡು ದಿನದ ಮುಂಚೆ ಹೋಗಿದ್ದರಿಂದ ಅವಳು ಈ ಸಾರಿ, ’ಈ ರಸ್ತೆಯಲ್ಲಿ ನಂದಿ ಯಾಕಿದೆ?’ ಎಂದು ಕೇಳಲಿಲ್ಲ. ಆದರೆ exit ಬಂದ ಕಡೆಯೆಲ್ಲ ಮೈಸೂರು ಮತ್ತು ತುಮಕೂರಿಗೆ ನೇರ ಹೋಗುತ್ತಿರಬೇಕು ಎಂದು ಹೇಳುತ್ತಿದ್ದಳು. ಮೈಸೂರು ರಸ್ತೆ ಜಂಕ್ಷನ್ನಿನಲ್ಲಿ ಮೈಸೂರಿನ ಗೆಳೆಯ <a href=http://www.landoflime.com>ಡಾ.ಪೃಥ್ವಿ </a> ಹತ್ತಿಕೊಂಡರು. ತುಮಕೂರು ರಸ್ತೆಯಲ್ಲಿ ಚಂಬೆ (ಚಂದ್ರಶೇಖರ್ ಬೆಳಗೆರೆ) ಮತ್ತವರ ಮಗಳು ಭೂಮಿಕ ಹತ್ತಿಕೊಂಡರು. ಭೂಮಿಕ ಅಮೃತಳಿಗೆ ಮುಂದಿನ ನಾಲ್ಕೈದು ಗಂಟೆ ಒಳ್ಳೆಯ ಕಂಪನಿ ನೀಡಿದಳು.<br /><br />ಹಿರಿಯೂರು ಮತ್ತು ಚಳ್ಳಕೆರೆ ಮಧ್ಯೆ ಇರುವ ಹೆದ್ದಾರಿಗೆ ಹೊಂದಿಕೊಂಡಂತೆ ಚಂಬೆಯವರ ಶಾಲೆ ಇದೆ. ಬಹಳ ಕಡಿಮೆ ಖರ್ಚಿನಲ್ಲಿ, ಸೃಜನಶೀಲತೆಯಿಂದ ಅವರು ಕಟ್ಟಡ ಕಟ್ಟಿದ್ದಾರೆ. ಬಹುಶಃ ನಮ್ಮ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಆಗುವ ಅರ್ಧ ಖರ್ಚೂ ಇವರ ಕಟ್ಟಡಗಳಿಗೆ ಆಗಿಲ್ಲ. <img src="http://sphotos.ak.fbcdn.net/hphotos-ak-snc6/hs036.snc6/166621_116319815107359_100001880229123_126935_2949128_n.jpg" width="50%" align="right">ಅದಾದ ನಂತರ ಅವರ ಊರಾದ ಹಿರಿಯೂರು ತಾಲ್ಲೂಕಿನ ರಾಮಜೋಗಿ ಹಳ್ಳಿಗೆ ಹೋಗಿ ಅಲ್ಲಿ ಊಟ ಮಾಡಿದೆವು. ಚಂಬೆ ತಮ್ಮ ಹುಟ್ಟೂರಿನಲ್ಲಿ ಓಟು ಹಾಕಿದ ನಂತರ ನಮ್ಮ ಪ್ರಯಾಣ ಬಳ್ಳಾರಿಯತ್ತ ಸಾಗಿತು. ಭೂಮಿಕ ನಮ್ಮ ಜೊತೆಗೆ ಬರಲಿಲ್ಲ. ಹಾಗಾಗಿ ಅಮೃತ ಕೂಡಲೆ ತನ್ನ ಪುಸ್ತಕಗಳನ್ನು ಹಿಡಿದು ಅವಳ ಪ್ರಪಂಚಕ್ಕೆ ಜಾರಿಕೊಂಡಳು. ಒಂದೆರಡು ಗಂಟೆ ಓದಿದ ನಂತರ ನಿದ್ದೆ ಮಾಡಿದಳು. ಮುಂದಕ್ಕೆ ಇದೇ ಅವಳ ದಿನಚರಿ.<br /><br />ನಾವು ಸಂಜೆ ಮೊಳಕಾಲ್ಮೂರು ತಾಲ್ಲೂಕಿನ ರಾಮಪುರ ತಲುಪಿದಾಗ ಅಮೃತ ನಿದ್ದೆ ಮಾಡುತ್ತಿದ್ದಳು. ಡಿಪ್ಲೊಮ ಓದಿರುವ ಹುಡಗನೊಬ್ಬ ನಡೆಸುತ್ತಿದ್ದ ಕಂಪ್ಯೂಟರ್ ಸೆಂಟರ್ನಲ್ಲಿ ಖಾರ-ಮಂಡಕ್ಕಿ ಮತ್ತು ಬಜ್ಜಿ ತಿಂದೆವು. ಆತನ ಉದ್ದಿಮೆ ಮತ್ತು ವಾಣಿಜ್ಯದ ಒಂದಷ್ಟು ಪರಿಚಯ ಆಯಿತು. ಸೆಲ್ಫೋನ್ಗಳಿಗೆ ಹಾಡು ತುಂಬಿಸುವ (!) ಕೆಲಸದಿಂದ ತನ್ನ ಉದ್ದಿಮೆ ಆರಂಭಿಸಿದವನು ಆತ. ಈಗ ಆತನ ಸೆಂಟರ್ನಲ್ಲಿ ಕಿಯಾನಿಕ್ಸ್ನವರು ಕಂಪ್ಯೂಟರ್ಗಳನ್ನು ಬಾಡಿಗೆ ತೆಗೆದುಕೊಂಡು ಸ್ಥಳೀಯ ಗ್ರಾಮಪಂಚಾಯಿತಿ ನೌಕರರಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ಈ ತಲೆಮಾರಿನ ಆಶಾವಾದ, ಕ್ರಿಯಾಶೀಲತೆ ಮತ್ತು ಉದ್ದಿಮೆಶೀಲತೆಯ ಪ್ರತೀಕ ಆತ. Not everything is lost.<br /><br /><img src="http://sphotos.ak.fbcdn.net/hphotos-ak-ash2/hs447.ash2/72026_114135521992455_100001880229123_112513_1475582_n.jpg" width="50%" align="left">ಮುಂದಕ್ಕೆ ನಮ್ಮ ಪ್ರಯಾಣ ಬಳ್ಳಾರಿಯ ತೋರಣಗಲ್ಲಿನತ್ತ. ಅಂದು ರಾತ್ರಿ ಅಲ್ಲಿ ಉಳಿದುಕೊಂಡೆವು. ಅಮೃತ ಖುಷಿಯಾಗಿದ್ದಳು. ಒಳ್ಳೆಯ ಸೂಪ್ ಕುಡಿದು ಊಟವನ್ನೂ ಚೆನ್ನಾಗಿಯೇ ಮಾಡಿದಳು. ರಾತ್ರಿ ಚೆನ್ನಾಗಿ ನಿದ್ದೆಯನ್ನೂ ಮಾಡಿದಳು. ಅವಳು ಈ ರೋಡ್ ಟ್ರಿಪ್ ಅನ್ನು ಹೇಗೆ ಸ್ವೀಕರಿಸುತ್ತಾಳೋ ಏನೋ ಎನ್ನುವ ಸಂದೇಹ ಕ್ರಮೇಣ ನನ್ನಲ್ಲಿ ಕರಗುತ್ತಿತ್ತು.<br /><br />ಡಿಸೆಂಬರ್ 27ರ ಬೆಳಗ್ಗೆ ಅಲ್ಲಿಯ ಜಿಂದಾಲ್ನ ಒಂದೆರಡು ಪ್ರದೇಶ ನೋಡಿದೆವು. ಒಂದು ಹೊಸ ಪರಿಸರವನ್ನೇ ಅವರು ಸೃಷ್ಟಿಸಿಕೊಂಡಿದ್ದಾರೆ.<br /><br />ಅಲ್ಲಿಂದ ನಮ್ಮ ಪ್ರಯಾಣ ಹಂಪಿ ಕನ್ನಡ ವಿಶ್ವವಿದ್ಯಾಲಯದತ್ತ. ಸ್ವಲ್ಪಹೊತ್ತು ಅಲ್ಲಿ ಅಡ್ಡಾಡಿದೆವು. ಈ ವಿಶ್ವವಿದ್ಯಾಲಯ ನನ್ನಲ್ಲಿ ಹುಮ್ಮಸ್ಸು ಹುಟ್ಟಿಸದೆ ನಿರಾಸೆ ಹುಟ್ಟಿಸುತ್ತದೆ. ಕಾರಣ ಹಲವಿವೆ. ಸದ್ಯಕ್ಕೆ ಇದು ಆಕಾಂಕ್ಷೆ, ಮಹತ್ವಾಕಾಂಕ್ಷೆಗಳಿಲ್ಲದ, ಇಂದು ಮತ್ತು ನಾಳೆಗೆ ಸಿದ್ಧವಾಗಿಲ್ಲದ ಕನ್ನಡ ವಿಶ್ವವಿದ್ಯಾಲಯ. ಬದಲಾದ ಈ ಕಾಲಘಟ್ಟದಲ್ಲಿ ಈ ವಿಶ್ವವಿದ್ಯಾಲಯ ತನ್ನ ಜವಾಬ್ದಾರಿ ಮತ್ತು ಆಶಯಗಳನ್ನು ಮತ್ತೊಮ್ಮೆ redefine ಮಾಡಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಹೆಸರಿಗೆ ಮತ್ತು ಆಶಯಕ್ಕೆ ಅಪಚಾರ.<br /><br />ನಂತರ ಉಪಕುಲಪತಿಗಳನ್ನು ಕಂಡೆವು. ಬಳಿಕ ಅಲ್ಲಿಯ ಜಾನಪದ ಮ್ಯೂಸಿಯಮ್ನತ್ತ ಹೊರಟೆವು. ದಾರಿಯಲ್ಲಿ ಅಚಾನಕ್ಕಾಗಿ ಮೊಗಳ್ಳಿ ಗಣೇಶ್ ಸಿಕ್ಕರು. ಅವರ ಜೊತೆಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಬಳಿ ಇರುವ "ಮ್ಯಾಂಗೊ ಟ್ರೀ"ಯಲ್ಲಿ ಊಟ. ತುಂಗಭದ್ರ ನದಿಯ ದಂಡೆಯ ಇಳಿಜಾರನ್ನೆ ಬಳಸಿಕೊಂಡು ನೆಲದ ಮೇಲೆ ಕುಳಿತು ಊಟ ಮಾಡುವ ವ್ಯವಸ್ಥೆ ಅಲ್ಲಿದೆ. ನಾವು ಹೋಗಿದ್ದೆ ತೀರಾ ತಡವಾಗಿ ಆಗಿದ್ದರಿಂದ ನಮಗೆ ದಕ್ಷಿಣ ಭಾರತೀಯ ಊಟ <img src="http://sphotos.ak.fbcdn.net/hphotos-ak-snc6/hs069.snc6/167989_114174441988563_100001880229123_112937_2867960_n.jpg" width="50%", align="right">ಸಿಗಲಿಲ್ಲ. ಆಗಲೂ ಬಹಳ ಜನ. ಹಾಗಾಗಿ ಸೇವೆ ಸಹ ನಿಧಾನ. ಆದರೆ ಆಹ್ಲಾದಕರ ವಾತಾವರಣ. ಅಮೃತ ಬಹಳ ಹೊತ್ತು ವಿಡಿಯೊ ತೆಗೆಯುತ್ತ ಓಡಾಡುತ್ತ ಕಾಲ ಕಳೆದಳು. ನಂತರ ದೇವಾಲಯದತ್ತ ಹೋದೆವು. ಮತ್ತೆ ವಿಶ್ವವಿದ್ಯಾಲಯಕ್ಕೆ ಪೃಥ್ವಿಯವರ ಪುಸ್ತಕದ ಬಂಡಲ್ ತೆಗೆದುಕೊಳ್ಳಲು ಬರಬೇಕಿದ್ದರಿಂದ ಒಳಗೆ ಹೋಗಲಿಲ್ಲ.<br /><br />ಅಂದು ರಾತ್ರಿ ಪೃಥ್ವಿ, ಅಮೃತ, ಮತ್ತು ನಾನು ಪ್ರಜಾವಾಣಿಯಲ್ಲಿ ಅಂಕಣ ಬರೆಯುವ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್ರವರನ್ನು ಅವರ ಹೊಸಪೇಟೆಯ ಮನೆಯಲ್ಲಿ ಕಂಡೆವು. ಬಹಳ ಹೊತ್ತು ಕರ್ನಾಟಕದ ರಾಜಕಾರಣ, ಅರ್ಥಿಕ ವಿಷಯಗಳು, ಪಾಲಿಸಿ ಮೇಕಿಂಗ್ ಬಗ್ಗೆ ಮಾತನಾಡಿದೆವು. ನಿದ್ದೆಯಿಂದ ಎಬ್ಬಿಸಿಕೊಂಡು ಹೋಗಿದ್ದರಿಂದ ಅಮೃತ ಸ್ವಲ್ಪ ಹೊತ್ತು ಅಲ್ಲಿ ಹೊಂದಿಕೊಳ್ಳಲಿಲ್ಲ. ನಂತರ ಟಿ.ಆರ್.ಚಂದ್ರಶೇಖರ್ರವರ ಪತ್ನಿಯ ಜೊತೆ ಮಾತನಾಡುತ್ತ, ಕತೆ ಹೇಳುತ್ತ, ಅವರಿಂದ ತಲೆ ಕೂಡ ಬಾಚಿಸಿಕೊಂಡಳು. ರಾತ್ರಿ ಹೊಸಪೇಟೆಯಲ್ಲಿ ಊಟ. ಅಂದು ಹೋಟೆಲ್ನಲ್ಲಿ ಊಟವಾದ ನಂತರ ಅಮೃತಳಿಗೆ ಅವಳು ಎಂದೂ ಹಾಡುವ ಅವಳ ಪಠ್ಯಪುಸ್ತಕದ ಪದ್ಯ "ನದಿಯಲೊಂದು ಬಕ, ಮುದುರಿಕೊಂಡು ಮೊಕ, ಕಾಲನೆತ್ತಿ ಕುಣಿಯುತಿತ್ತು, ಥಕ ಥಕ ಥಕ"ಗೆ ನಟನೆ ಸಮೇತ ಕುಣಿಯುತ್ತ ಹಾಡುವುದನ್ನು ಕಲಿಸಿದೆ. ಬಹಳ ಖುಷಿಯಿಂದ ಕಲಿತಳು. ಅಂದು ರಾತ್ರಿ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ (ಇದ್ದುದರಲ್ಲಿ ಸ್ವಲ್ಪ ತುಟ್ಟಿಯಾದ ಕೋಣೆಯಲ್ಲಿ) ಉಳಿದುಕೊಂಡೆವು.<br /><br />ಡಿಸೆಂಬರ್ 28ರ ಬೆಳಗ್ಗೆ ಹೊರಡುವ ಮುಂಚೆ ಮತ್ತೊಮ್ಮೆ ಉಪಕುಲಪತಿಗಳನ್ನು ಕಂಡೆವು. ಅಮೃತ ಅಲ್ಲಿ ತನ್ನ ತುಂಟಾಟ ಮತ್ತು ಮುಗ್ಧತೆಯಿಂದ ಉಪಕುಲಪತಿಗಳ ಶ್ರೀಮತಿಯವರಿಂದ ಒಂದು ಗೊಂಬೆಯನ್ನು (ಬ್ಯಾಂಗ್ಕಾಕ್ ರಾಜಕುಮಾರಿ) ಉಡುಗೊರೆಯಾಗಿ ಪಡೆದಳು. <img src="http://sphotos.ak.fbcdn.net/hphotos-ak-ash1/hs742.ash1/163452_116320371773970_100001880229123_126937_3680043_n.jpg" width="50%", align="left">ಮೊಗಳ್ಳಿಯವರು ತಮ್ಮ ಮಕ್ಕಳಿಗೆ ಅಮೃತಳನ್ನು ಪರಿಚಯಿಸಬೇಕು ಎಂದು ಹೇಳಿದ್ದರಿಂದ ನಾವು ಅವರ ಹೊಸಪೇಟೆಯಲ್ಲಿನ ಮನೆಗೆ ಹೋದೆವು. ನಾವು ಹೋಗಿದ್ದು ತಡವಾಗಿದ್ದರಿಂದ ಅವರ ಮೂವರು ಹೆಣ್ಣುಮಕ್ಕಳೂ ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದರು. ನಾನು ಕಾರಿನಿಂದ ಇಳಿಯುವಾಗ ಅವಸರ ಮಾಡಿದ್ದರಿಂದ ಮುನಿಸಿಕೊಂಡ ಅಮೃತ ಬಹಳ ಹೊತ್ತು ಯಾರನ್ನೂ ಸೇರಲಿಲ್ಲ. ನಂತರ ಮೊಗಳ್ಳಿಯವರ ಮಕ್ಕಳಾದ ಸಿರಿ, ಚಂದನ, ಮತ್ತು ವಂದನರ ಜೊತೆ ಆಡಿಕೊಂಡು ಕುಳಿತಳು. ಆ ಮಕ್ಕಳು ಉತ್ತಮ ಚಿತ್ರಕಾರರೂ ಸಹ. ಅವರ ಪ್ರತಿಯೊಂದು ಡ್ರಾಯಿಂಗ್ ಅನ್ನೂ ಬಿಡದೆ ನೋಡಿದಳು. ಸಿರಿಯ ಜೊತೆ ಎರಡನೆ ತರಗತಿಯ ಒಂದು ಇಂಗ್ಲಿಷ್ ಪದ್ಯ ಓದಿದಳು. ನದಿಯಲೊಂದು ಬಕವನ್ನು ಕುಣಿಯುತ್ತ ಹಾಡಿದಳು. ಹೋಗುವ ಸಮಯದಲ್ಲಿ ಆ ಮಕ್ಕಳಿಂದ ಒಂದು ಬಾರ್ಬಿ ಬೊಂಬೆಯನ್ನು ಉಡುಗೊರೆಯಾಗಿ ಪಡೆದಳು.<br /><br />ಅಲ್ಲಿಂದ ನಾವು ಹೊರಟಿದ್ದು ಗುಲ್ಬರ್ಗದೆಡೆಗೆ. ದಾರಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಸಿಗುತ್ತದೆ. ಇಲ್ಲಿ ಕತೆಗಾರ ಕಲಿಗಣನಾಥ ಗುಡದೂರು ಇದ್ದರು. ಅವರಿಗೆ ಫೋನ್ ಮಾಡಿ ಮಧ್ಯಾಹ್ನ ಊಟದ ಸಮಯಕ್ಕೆ ಅಲ್ಲಿರುತ್ತೇವೆ, ಒಂದು ಒಳ್ಳೆಯ ಜೋಳದ ರೊಟ್ಟಿ ಊಟಕ್ಕೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ. <img src="http://sphotos.ak.fbcdn.net/hphotos-ak-snc6/hs031.snc6/166119_114427515296589_100001880229123_114420_5341767_n.jpg" width="50%" align="right">ಅಲ್ಲಿ ಅಮೃತ ಬಹುಶಃ ಅವಳ ಮೊದಲ ಜೋಳದ ರೊಟ್ಟಿ ಊಟ ಉಂಡಳು. ಕಲಿಗಣನಾಥರೊಂದಿಗೆ ಸಾಕಷ್ಟು ಸಮಯ ಕಳೆದೆವು. ಅವರ ಇತ್ತೀಚಿನ ಕಥಾಸಂಕಲನ "ತೂತುಬೊಟ್ಟು"ವನ್ನು ಪೃಥ್ವಿ ಸಹ ಓದಿದ್ದರು. ಅದರ ಬಗ್ಗೆ, ಅವರ ಕೆಲಸದ ಬಗ್ಗೆ, ಜೀವನೋಪಾಯದ ಬಗ್ಗೆ ಒಂದಷ್ಟು ಮಾತನಾಡಿದೆವು. ನಂತರ ಅಲ್ಲಿಂದ ಗುಲ್ಬರ್ಗದತ್ತ. ದಾರಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣಾ ಪ್ರಚಾರ ಜೋರಿತ್ತು.<br /><br />ರಾತ್ರಿ ಗುಲ್ಬರ್ಗದ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಉಳಿದುಕೊಂಡೆವು. ಗುಲ್ಬರ್ಗದಲಿ "ಕಲ್ಬುರ್ಗಿ ಕಂಪು" ನಡೆಯುತ್ತಿತ್ತು. ಹೊರ ಊರು/ರಾಜ್ಯಗಳಿಂದ ಬಂದ ಖಾವಿಧಾರಿಗಳು ಮತ್ತು ಇತರೆ ಜನರಿಂದ ವಿಶ್ವವಿದ್ಯಾಲಯದ ಗೆಸ್ಟ್ಹೌಸ್ ತುಂಬಿಹೋಗಿತ್ತು. ಹಾಗಾಗಿ ರೂಮು ದೊರಕಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು. ಒಂದೇ ರೂಮ್ ಸಿಕ್ಕಿದ್ದು. ಅಮೃತ ಮತ್ತು ನಾನು ನೆಲದ ಮೇಲೆ ಎರಡು ಹಾಸಿಗೆ ಹಾಸಿಕೊಂಡು ಮಲಗಿದೆವು. ಅಲ್ಲಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಕತೆಗಾರ ವಿಕ್ರಮ್ ವಿಸಾಜಿಯವರ ಸ್ನೇಹಿತ ಶಾಂತಪ್ಪ ಡಂಬಳ ರಾತ್ರಿ ಬಂದು ಮಾತನಾಡಿಸಿಕೊಂಡು ಹೋಗಿದ್ದರು.<br /><br />ಅವರು ಡಿಸೆಂಬರ್ 29ರ ಬೆಳಗ್ಗೆ ತಿಂಡಿಯ ಸಮಯಕ್ಕೆ ಒಂದು ಜಾಗದಲ್ಲಿ ಸಿಕ್ಕರು. ನಮಗೆ ಗುಲ್ಬರ್ಗ ತೋರಿಸಲು ಅವರು ಉತ್ಸುಕತೆ ತೋರಿದರು. ಆದರೆ ನಮಗೆ ನಗರ ನೋಡುವ ಮನಸ್ಸಿರಲಿಲ್ಲ. ಅವರ ಜೊತೆ ತಿಂಡಿ ಮುಗಿಸಿ ಶರಣರ ಕರ್ಮಭೂಮಿ (ಬಸವ)ಕಲ್ಯಾಣದತ್ತ ಹೊರಟೆವು. ಅಲ್ಲಿ ವಿಕ್ರಮ ವಿಸಾಜಿಯವರ ಗೆಳೆಯ ಮಹಾಂತೇಶ್ ನವಲಕಲ್ ಮನೆಗೆ ಹೋದೆವು. ಅಲ್ಲಿಯ ಗ್ರಾಮೀಣ ಮಹಿಳಾ ಬ್ಯಾಂಕಿನಲ್ಲಿ ಎಮ್.ಡಿ.ಯಾಗಿರುವ ನವಲಕಲ್ ಕತೆಗಾರರೂ ಸಹ. ಪೃಥ್ವಿಯವರ ಥೀಸಿಸ್ ಬಗ್ಗೆ ಮತ್ತು ಅದಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಅವರಿಬ್ಬರೂ ಮಾತನಾಡಿದರು. ನನಗೆ ಆ ಊರಿನ ಪರಿಚಯ ಇಲ್ಲದ್ದರಿಂದ ಮತ್ತು ಅಲ್ಲಿ ಕಾರು ಓಡಿಸುವ ಇಚ್ಛೆ ಇಲ್ಲದ್ದರಿಂದ ಮಹಾಂತೇಶ್ರನ್ನು ಸಾಧ್ಯವಾದರೆ ಅವರ ಡ್ರೈವರ್ ಅನ್ನೇ ಕಳಿಸುವಂತೆ ಕೇಳಿದ. ಆತ ಆ ಊರಿನ ರಸ್ತೆಯಲ್ಲಿ ಕಾರನ್ನು ಆಕಾಶಮಾರ್ಗದಲ್ಲಿ ಓಡಿಸುವಷ್ಟು ಚಾಣಾಕ್ಷ. <img src="http://sphotos.ak.fbcdn.net/hphotos-ak-snc6/hs068.snc6/167826_114714595267881_100001880229123_116557_6478958_n.jpg" width="50%" align="left">ಕೋಟೆ ನೋಡಿದೆವು. ಅಮೃತ ಕೋಟೆಯನ್ನು ಮತ್ತು ಅಲ್ಲಿಯ ಕೋತಿಗಳನ್ನು ಖುಷಿಯಿಂದ ನೋಡಿದಳು. ನನಗೆ ಕೋಟೆಯೊಳಗಿನ ನೂರಾರು ಅಡಿ ಆಳದ ಭಾವಿ ಮತ್ತು ಅದಕ್ಕೆ ಯಾವೊಂದು ಅಡೆತಡೆ ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಅದು ಎದುರಾಗುವ ಸ್ಥಿತಿ ನೋಡಿ, ತುಂಟ ಮತ್ತು ಮುಗ್ಧ ಮಕ್ಕಳ ವಿಚಾರ ನೆನಪಾಗಿ ಭಯವಾಯಿತು. ಬೇಜವಾಬ್ದಾರಿ ಜನರ ಮೇಲುಸ್ತುವಾರಿ.<br /><br />ನಂತರ ಅಲ್ಲಿಯ ಬಸವಣ್ಣನ ದೇವಸ್ಥಾನಕ್ಕೆ ಹೋದೆವು. ಚಂಬೆ ಗರ್ಭಗುಡಿಯ ಬಾಗಿಲಿನ ಮೆಟ್ಟಿಲಿಗೆ ನಮಸ್ಕರಿಸಿ ಅದರತ್ತ ನನ್ನ ಗಮನ ಸೆಳೆದರು. ಅದರ ಮೇಲೆಲ್ಲಾ ದಾನಿಗಳ ಹೆಸರು. ಅಲ್ಲಿರುವ ಪ್ರತಿಯೊಂದು ಚಿತ್ರಪಟದಲ್ಲೂ ಎಲ್ಲಕ್ಕಿಂತ ದೊಡ್ಡದಾಗಿ ಕಾಣುವುದು ಅದನ್ನು ಮಾಡಿಸಿದವರ, ಧನಸಹಾಯ ಮಾಡಿದವರ ಹೆಸರು. ನಾಚಿಕೆಗೇಡು. ಇದೊಂದು ರೋಗ. ನಂತರ ಅಕ್ಕ ನಾಗಮ್ಮನ ಗುಹೆ, ಅನುಭವ ಮಂಟಪ ನೋಡಿದೆವು. ಅಲ್ಲಿ ಅಮೃತ ಹುಳಿಯಾದ ಹುಣಿಸೆಕಾಯಿಯನ್ನು ಮರದಿಂದ ಕಿತ್ತು ಸವಿದಳು. ದಾರಿಯಲ್ಲಿ ಮಾತೆ ಮಹಾದೇವಿ ಕಟ್ಟಿಸುತ್ತಿರುವ ಸುಮಾರು ನೂರು ಅಡಿ (ಇನ್ನೂ ಹೆಚ್ಚು?) ಇದ್ದಿರಬಹುದಾದ ಬಸವಣ್ಣನ ಕಾಂಕ್ರಿಟ್ ವಿಗ್ರಹದ ಕಾಮಗಾರಿ ಕಾಣಿಸಿತು. ಬಸವಣ್ಣ ಬಹಳ ಜನರಿಂದ ಬಂಧಿಸಲ್ಪಟ್ಟಿದ್ದಾನೆ. ಜಂಗಮ ಬಸವಣ್ಣನಿಗಿಂತ ಸ್ಥಾವರ ಬಸವಣ್ಣ ಜನಪ್ರಿಯ. ತನ್ನ ಹಿಂಬಾಲಕರೆಂದು ಹೇಳಿಕೊಂಡವರಿಂದ ಬಸವಣ್ಣನಷ್ಟು ದುರುಪಯೋಗಕ್ಕೆ, ಅಪಾರ್ಥಕ್ಕೆ, ಅಪಚಾರಕ್ಕೆ ಒಳಗಾದ ಕರ್ನಾಟಕದ ಮತ್ತೊಬ್ಬ ಚಾರಿತ್ರಿಕ ವ್ಯಕ್ತಿ ಇಲ್ಲ.<br /><br />ಮತ್ತೆ ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಟ್ರಕ್ಗಳು. ಸಾರಿಗೆ ಈ ಊರಿನ ಬಹುದೊಡ್ದ ಉದ್ದಿಮೆ.<br /><br />ನಂತರ ನವಲಕಲ್ ಕೆಲಸ ಮಾಡುವ GMASS ಮತ್ತು ಅದರ ಮಾತೃಸಂಸ್ಥೆ ಪ್ರವರ್ಧ (NGO) ಇರುವ ಹತ್ತಿರದ ಸಸ್ತಾಪುರಕ್ಕೆ ಹೋದೆವು. ಅಲ್ಲಿ ವಿಶಿಷ್ಟವಾದ ಸ್ಥಳೀಯ ಉಪ್ಪಿಟ್ಟು ತಿನ್ನುತ್ತ ಅವರ ಸಂಸ್ಥೆಗಳ ಬಗ್ಗೆ, micro-finance ಬಗ್ಗೆ, ಸ್ವಸಹಾಯ ಸಂಸ್ಥೆಗಳ ಬಗ್ಗೆ ಮಾತನಾಡಿದೆವು. ಮಧ್ಯದಲ್ಲಿ ಶಾಲೆ ನಿಲ್ಲಿಸಿದ ಸ್ಥಳೀಯ ಊರುಗಳ ಪ್ರಾಥಮಿಕ ಶಾಲಾ ವಯಸ್ಸಿನ ಗಂಡುಮಕ್ಕಳನ್ನು ಅಲ್ಲಿಯೇ ಒಂದು ವರ್ಷ ಇಟ್ಟುಕೊಂಡು ಅವರನ್ನು ಮತ್ತೆ regular ಶಾಲೆಗೆ ಸಿದ್ಧಪಡಿಸುವ ಶಿಕ್ಷಣವನ್ನೂ ಪ್ರವರ್ಧ ನೀಡುತ್ತಿದೆ. ಆ ಮಕ್ಕಳ ತರಗತಿಯಲ್ಲಿ ಒಂದೆರಡು ನಿಮಿಷ ಕಳೆದೆವು. ಹುಡುಗರು ಚೂಟಿ ಇದ್ದರು. ಅವರ ಕ್ಯಾಂಪಸ್ನಲ್ಲಿರುವ ನೂರಡಿ ಆಳದ ಭಾವಿ ನನ್ನನ್ನು ಬೆರಗುಗೊಳಿಸಿತು.<br /><br />(ನವಲಕಲ್ ಕತೆಗಾರರು ಎಂದಿದ್ದೆ. ಅವರ ಕಥಾಸಂಕಲನ "ನೀರಿನ ನೆರಳು" ವಿನ ಒಂದೊಂದು ಪ್ರತಿಯನ್ನು ನಮಗೆ ಕೊಟ್ಟಿದ್ದರು. ಅದರಲ್ಲಿ ’ಗಾಂಧಿ.... ಬಂದಾನೆ’ ಮತ್ತು ’ಅಕ್ರಾಂತ’ ಓದಿದೆ. ’ಅಕ್ರಾಂತ’ 2003ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಚಿನ್ನದ ಪದಕ ಹಾಗೂ ಪ್ರಥಮ ಬಹುಮಾನ ಪಡೆದ ಕತೆ. ಪಾಳೆಯಗಾರಿಕೆ ಹಿನ್ನೆಲೆಯಿಂದ ಬಂದ ಯುವಕರಿಗೆ ಆ ಪ್ರತಿಗಾಮಿ ಧೋರಣೆಯನ್ನು ಹತ್ತಿಕ್ಕುವುದು ಎಷ್ಟು ಕಷ್ಟ ಮತ್ತು ಅವರಿಗೆ ಎಷ್ಟೆಲ್ಲ ಓದಿದರೂ ಆ ಪರಿಸರದಲ್ಲಿ feudal ಧೋರಣೆ ಎಷ್ಟೊಂದು ಅಪ್ಯಾಯಮಾನವಾಗುತ್ತದೆ. ಮತ್ತು ಅದು ಹೇಗೆ ವಿಷಸುಳಿಯಾಗಿ ಸುತ್ತುತ್ತದೆ ಎನ್ನುವುದನ್ನು ನಿರೂಪಿಸುತ್ತದೆ. ನವಲಕಲ್ ಮನಸ್ಸು ಮಾಡಿದರೆ ನಮ್ಮ ಗ್ರಾಮೀಣ ಪರಿಸರ ಮತ್ತು SHG/NGOಗಳ ಸುತ್ತ ಇರುವ ವಿಶಿಷ್ಟ ಪ್ರಪಂಚವನ್ನು ಮತ್ತು ವಾಸ್ತವವನ್ನು ತೆರೆದಿಡಬಲ್ಲರು.)<br /><br />ನಾವು ಅಲ್ಲಿಂದ ರಾತ್ರಿಯ ಹೊತ್ತಿಗೆ ಆಲಮಟ್ಟಿಗೆ ಹೋಗಬೇಕಿತ್ತು. ಚಂಬೆಯವರು ಹೋಗುವ ದಾರಿಯಲ್ಲಿ ಅಮೃತಳಿಗೆ ವಿಜಾಪುರದ ಗೋಳಗುಮ್ಮಟವನ್ನು ತೋರಿಸೋಣ ಎಂದಿದ್ದರಿಂದ ನಾವು ನವಲಕಲ್ ಮತ್ತು ಅವರ ಸಹೊದ್ಯೊಗಿ ಬಸವರಾಜುರವರಿಂದ ಬೀಳ್ಕೊಂಡು ಮಹಾರಾಷ್ಟ್ರದ ಸೋಲಾಪುರದತ್ತ ಹೊರಟೆವು. <img src="http://sphotos.ak.fbcdn.net/hphotos-ak-snc6/hs031.snc6/166189_114717661934241_100001880229123_116563_4653241_n.jpg" width="50%" align="right">ಕಲ್ಯಾಣ ಮತ್ತು ಸೋಲಾಪುರದ ಮಧ್ಯೆ ಬರುವ ನಳದುರ್ಗದ ಕೋಟೆ ರಸ್ತೆಯಲ್ಲಿ ಕಣ್ಣಿಗೆ ಬಿತ್ತು. ಗಾಡಿ ನಿಲ್ಲಿಸಿ ಕಣಿವೆಯ ಆ ಬದಿಯಲ್ಲಿದ್ದ ಕೋಟೆಯ ಹಿನ್ನೆಲೆಯಲ್ಲಿ ಅಮೃತಳ ಹಲವು ಫೋಟೊ ತೆಗೆದೆ. ಸೋಲಾಪುರದಲ್ಲಿ ಗಾಡಿ ನಿಲ್ಲಿಸಿ ಪೃಥ್ವಿ ಮತ್ತು ಚಂಬೆ ಹಣ್ಣು ಮತ್ತು ಹಸಿಕಡಲೆಯ ಕಟ್ಟುಗಳನ್ನು ಖರೀದಿಸಿದರು. ನಾನು ಮತ್ತು ಅಮೃತ ಗೋಂಡ್ ಆದಿವಾಸಿಯೊಬ್ಬನ ಗಿಡಮೂಲಿಕೆ ಮದ್ದುಗಳನ್ನು ನೋಡುತ್ತ ಅವನೊಂದಿಗೆ ಮಾತನಾಡುತ್ತ ನಿಂತೆವು. ದಾರಿಯಲ್ಲಿ ಅಮೃತ ಮೊದಲ ಬಾರಿಗೆ ಹಸಿ ಕಡಲೆಯನ್ನು ಕಟ್ಟಿನಿಂದ ಬಿಡಿಸಿಕೊಂಡು ಸಿಪ್ಪೆ ಬಿಡಿಸಿಕೊಂಡು ತಿಂದಳು. ನನಗೆ ಏನೂ ಉಳಿಸಲಿಲ್ಲ.<br /><br />ಬಿಜಾಪುರ ಮುಟ್ಟುವಷ್ಟೊತ್ತಿಗೆ ಸಂಜೆ ಆರೂವರೆ. ಗೋಳಗುಮ್ಮಟ ಐದಕ್ಕೆ ಮುಚ್ಚುವುದರಿಂದ ಅತ್ತ ಹೋಗಲಿಲ್ಲ. ಹೆದ್ದಾರಿಯಲ್ಲಿ ಹೋಗುತ್ತಲೆ ಒಂದೆರಡು ಕಿಲೋಮೀಟರ್ ದೂರದಲ್ಲಿದ್ದ ಗುಮ್ಮಟವನ್ನು ಅಮೃತಳಿಗೆ ತೋರಿಸಿದೆವು. ಆ ಕಟ್ಟಡದ ಗುಮ್ಮಟದ ಆರಂಭವಾಗುವ ಜಾಗದಲ್ಲಿ ಓಡಾಡಬಹುದು ಎಂದಿದ್ದಕ್ಕೆ ಅವಳು ’ಅಬ್ಬಬ್ಬ’ ಎಂದಳು.<br /><br />ರಾತ್ರಿ ಆಲಮಟ್ಟಿಗೆ ಬಂದಾಗ ಅಣೆಕಟ್ಟೆಯ ಕೆಳಗಿನ ಉದ್ಯಾನವನಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಹೋಗುತ್ತಿದ್ದರು. ಬಹುಶಃ ಸಂಗೀತ ಕಾರಂಜಿಯ ಸಮಯ. ನಮಗೆ ವಸತಿಯ ಯೋಚನೆ. ಹಾಗಾಗಿ ಅತ್ತ ಹೋಗಲಾಗಲಿಲ್ಲ. ರಾತ್ರಿ ಐಬಿಯಲ್ಲಿ ವಸತಿ. ಅಮೃತಳಿಗೆ ಅಲ್ಲಿ ತಲೆಸ್ನಾನ ಮಾಡಿಸಿದೆ. ಮತ್ತೆ ರೂಮಿನ ಸಮಸ್ಯೆಯಿಂದಾಗಿ ನಮಗಿಬ್ಬರಿಗೂ ನೆಲದ ಮೇಲೆ ಎರಡು ಹಾಸಿಗೆಗಳು.<br /><br /><img src="http://sphotos.ak.fbcdn.net/hphotos-ak-snc6/hs020.snc6/167064_114853901920617_100001880229123_117453_3833849_n.jpg" width="50%" align="left">ಡಿಸೆಂಬರ್ 30 ರ ಬೆಳಗ್ಗೆ ಏಳೂವರೆಗೆಲ್ಲ ಬಾಗಲಕೋಟೆಯಿಂದ ಅಲ್ಲಿಯೇ ಆಲಮಟ್ಟಿಯ KPCL ನಲ್ಲಿ ಕೆಲಸ ಮಾಡುವ ಇಂಜಿನಿಯರಿಂಗ್ ಸಹಪಾಠಿ ಗುರು ಬಳ್ಳೂರು ಬಂದ. ಅಂದೇ ಕೃಷ್ಣಾ ನದಿಯ ನೀರು ಹಂಚಿಕೆಯ ತೀರ್ಪು ಹೊರಬರುವುದಿತ್ತು. ಹಾಗಾಗಿ ಭದ್ರತೆ ಸ್ವಲ್ಪ ಹೆಚ್ಚಿತ್ತು ಎನ್ನುತ್ತಿದ್ದರು. ಚಂಬೆ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಹಿಂದಿರುಗುವವರಿದ್ದರು. ಅವಸರವಸರವಾಗಿ ಅಮೃತಳಿಗೆ ತಿಂಡಿ ಮಾಡಿಸಿದೆ. ಆಗ ನನಗೂ ಅವಳಿಗೂ ಸಣ್ಣ ಜಟಾಪಟಿ ಆಯಿತು. ಮುನಿಸಿಕೊಂಡು ಹೊರಗೆ ಹೋದಳು. ಅಲ್ಲಿ ಒಬ್ಬಳೇ ಇದ್ದಾಗ ಅಂಗೈ ಮೇಲೆ "My daddy is very bad." ಎಂದು ಬರೆದುಕೊಂಡಿದ್ದಳು. ನಾನು ಹೋಗಿ ಮುದ್ದಿಸುತ್ತ ಕ್ಷಮೆಯಾಚಿಸುತ್ತ ರಾಜಿ ಪಂಚಾಯಿತಿಗೆ ಇಳಿದೆ. ಅಂಗೈ ಮೇಲಿದ್ದದ್ದನ್ನು ನೋಡಿ ಸ್ನೇಹಿತರಿಗೆ ತೋರಿಸಿದೆ. ಸ್ವಲ್ಪ ಹೊತ್ತಿಗೆ ಮುನಿಸು ಹೋಗಿ ಕಾರು ಹತ್ತಿದಳು. ಮತ್ತೆ ಕೆಲವೇ ನಿಮಿಷಗಳಲ್ಲಿ ಅಂಗೈ ಮೇಲಿನ "bad" ಹೊಡೆದು ಹಾಕಿ "My daddy is very <strike>bad</strike> good in this road trip." ಎಂದು ಬರೆದುಕೊಂಡಳು. ಹೀಗೆ ಆಲಮಟ್ಟಿಯಲ್ಲಿ ಏನೂ ನೋಡದೆ ಹೊರಟೆವು. ಗುರು ಸಹ ನಮ್ಮ ಜೊತೆ ಬಂದ. ಅಣೆಕಟ್ಟೆಯ ಕೆಳಗೆ ಕೃಷ್ಣೆಯನ್ನು ದಾಟುವ ಮೊದಲು ಕಾರು ನಿಲ್ಲಿಸಿ ಅಲ್ಲಿಂದಲೆ ಅಮೃತಳಿಗೆ ಅಣೆಕಟ್ಟೆ ತೋರಿಸಿದೆ. ಅದರ ಹಿಂದೆ ಇದ್ದಿರಬಹುದಾದ ಅಗಾಧ ಜಲರಾಶಿಯ ಬಗ್ಗೆ ಒಂದಷ್ಟು ವಿವರಿಸಿದೆ. ಅವಳಿಗೆ ಅದೆಷ್ಟು ಅರ್ಥವಾಯಿತೊ ತಿಳಿಯಲಿಲ್ಲ.<br /><br />ಕೂಡಲಸಂಗಮದ ಕ್ರಾಸಿನಲ್ಲಿ ಚಂಬೆ ಹೊಸಪೇಟೆ ಬಸ್ಸು ಹಿಡಿದರು. ನಾವು ಸಂಗಮಕ್ಕೆ ಹೋದೆವು. ನಾರಾಯಣಪುರ ಅಣೆಕಟ್ಟು ತುಂಬಿದ್ದರಿಂದ ಅದರ ಹಿನ್ನೀರು ಬಹಳ ಇತ್ತು. ಅಮೃತ ಅಲ್ಲಿ ಸಂಗಮದಲ್ಲಿ ಕೃಷ್ಣೆಯ ಭಾಗದಲ್ಲಿ ಜಳಕ ಮಾಡುತ್ತಿದ್ದವರನ್ನು ನೋಡುತ್ತ ನಿಂತಳು. <img src="http://sphotos.ak.fbcdn.net/hphotos-ak-snc6/hs016.snc6/166649_114867265252614_100001880229123_117592_7494200_n.jpg" width="50%" align="right">ನಂತರ ಬಸವಣ್ಣನ ಸಮಾಧಿ ಇರುವ ಜಾಗಕ್ಕೆ ಹತ್ತಿ-ಇಳಿದು ಹೋದೆವು. ಕಲ್ಯಾಣದಲ್ಲಿ ಅಮೃತಳಿಗೆ ಕಳಬೇಡ, ಕೊಲಬೇಡ ನೆನಪಿಸಿದ್ದೆ. ಆಕೆ ಮೂರು ವರ್ಷದವಳಿದ್ದಾಗ ಅದನ್ನು ಬಹಳ ಮುಗ್ಧವಾಗಿ ಬಾಲಭಾಷೆಯಲ್ಲಿ ಹೇಳುತ್ತಿದ್ಡಳು. ಈಗ ಅವಳಿಗೆ ಅದು ಮರೆತುಹೋಗಿದೆ. ಇಲ್ಲಿ ಬಸವಣ್ಣ ಕೊನೆಯ ಉಸಿರು ಎಳೆದಿರಬಹುದಾದ ಜಾಗದಲ್ಲಿ ನಾನು ಅವಳಿಗೆ ಮತ್ತೊಮ್ಮೆ ಹೇಳಿಕೊಟ್ಟೆ. ಎರಡು ಬಾರಿ ಉಚ್ಚರಿಸಿದಳು.<br /><br />ಅಲ್ಲಿಂದ ಮೇಲಕ್ಕೆ ಬಂದು ಹೊರಗೆ ಬರುವಷ್ಟರಲ್ಲಿ ಅಮೃತ ’ಕೊಕ್ಕ ಮಾಡಬೇಕು’ ಎಂದಳು. ಅಲ್ಲೆಲ್ಲಾ ಹುಡುಕಾಡಿ ಸುಮಾರು 300-400 ಮೀಟರ್ ದೂರವಿದ್ದ ಶಾಚಾಲಯದತ್ತ ಓಡಿದೆವು. ಯಾವನೊ ತಲೆಕೆಟ್ಟ ಮೂಢ ಮಾಡಿರುವ ವ್ಯವಸ್ಥೆ ಅದು. ಅದಕ್ಕಾಗಿಯೆ ಜನ ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಕಕ್ಕಸ್ಸು ಮಾಡಿ ಆ ಮೂಲಕ ಅವನ ಕಾರ್ಯಕ್ಕೆ ಪ್ರಶಂಸೆ ತೋರುತ್ತಿದ್ದಾರೆ; ಪ್ರತಿದಿನ. ಹೋಗುತ್ತಲೆ ಅಲ್ಲಿದ್ದವನೊಬ್ಬ ದುಡ್ದು ಕೇಳಿದ. ಬಂದೆ ಇರು ಎಂದು ಹೇಳಿ ಎರಡು ಅಂತಸ್ತು ಹತ್ತಿಹೋಗಿ ಅವಳನ್ನು ಟಾಯ್ಲೆಟ್ನಲ್ಲಿ ಬಿಟ್ಟೆ. ಯಾವನೊ ಸೂಕ್ಷ್ನತೆ ಇಲ್ಲದ ಮುಟ್ಟಾಳನ ಯೋಜನೆ ಕೂಡಲಸಂಗಮದಲ್ಲಿನ ಶೌಚಾಲಯ.<br /><br />ನಂತರ ಅಲ್ಲಿಂದ ಹೊರಟು ಅಲ್ಲಿಯ ಬೃಹತ್ ಸಭಾಂಗಣ ನೋಡಿದೆವು. ನಾನು ಅದನ್ನು ಈ ಮುಂಚೆಯೆ 2005ರಲ್ಲಿ ನೋಡಿದ್ದೆ. ಪೃಥ್ವಿಯವರು ನೋಡಿರಲಿಲ್ಲ. ಮತ್ತೆ ಅಲ್ಲಿಯ ಇನ್ನೊಂದು 80-100 ಅಡಿಯ ದೊಡ್ಡ ಗೋಪುರಾಕಾರದ ಕಟ್ಟಡದತ್ತ ಹೋದೆವು. ಅದು ಏನು ಎಂದು ಗೊತ್ತಾಗಲೇ ಇಲ್ಲ. ಎಲ್ಲಿಯೂ ಬೋರ್ಡ್ ಇರಲಿಲ್ಲ. ಕೆಲಸ ನಿಂತಿದ್ದ ಕಾರಣ ಜನರೂ ಕಾಣಿಸಲಿಲ್ಲ. ದೂರದಲ್ಲಿ ಉದ್ಯಾನದ ಕೆಲಸ ಮಾಡುತ್ತ ಇದ್ದ ಒಬ್ಬಾತನನ್ನು ಕೂಗಿ ಕರೆದು ಕೇಳಿದೆ. ಅದು ಮ್ಯೂಸಿಯಮ್ ಅಂದ. ಏನಿಲ್ಲವೆಂದರೂ ಅದಕ್ಕೀಗಾಗಲೆ ಆರೇಳು ಕೋಟಿ ಖರ್ಚಾಗಿರಬೇಕು. ಭೂತಕಟ್ಟಡವಾಗುವ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಈ ವ್ಯವಸ್ಥೆಯಲ್ಲಿ ಯಾರನ್ನು ಇದಕ್ಕೆ ಹೊಣೆಗಾರನಾಗಿಸುವುದು?<br /><br />ಸಂಗಮದಿಂದ ಹೊರಟು ಗುರುವನ್ನು ಹೆದ್ದಾರಿಯ ಕ್ರಾಸ್ನಲ್ಲಿ ಬಿಟ್ಟು ನಾವು ಮೂವರೆ ಐಹೊಳೆಯತ್ತ ಹೊರಟೆವು. ದಾರಿಯಲ್ಲಿ ಅಮೀನಗಡ ಪಟ್ಟಣದಲ್ಲಿ ಪೃಥ್ವಿ ಅಲ್ಲಿಯ ಪ್ರಸಿದ್ಧ ಕರದಂಟು ಕೊಂಡರು. <img src="http://sphotos.ak.fbcdn.net/hphotos-ak-snc4/hs1382.snc4/163470_114897205249620_100001880229123_117775_6855837_n.jpg" width="50%" align="left">ಐಹೊಳೆಯಲ್ಲಿ ಅಮೃತ ಅವಳ ಮೊದಲ ಗೋಲಿ ಸೋಡ ಕುಡಿದಳು. ಅಲ್ಲಿಯ ಶಿಲಾದೇಗುಲಗಳನು ನೋಡಿಕೊಂಡು ಪಟ್ಟದಕಲ್ಲಿಗೆ ಹೋದೆವು. ಅಮೃತ ಅಲ್ಲಿಯ ಸ್ಥಳ ಇತಿಹಾಸದ ಬೋರ್ಡ್ ಓದುತ್ತ ಬಹಳ ಕಾಲ ಕಳೆದಳು. ಅದೇ ಸಮಯದಲ್ಲಿ ಗೆಳೆಯ ಗುರು ಆಲಮಟ್ಟಿಯಿಂದ ಫೋನ್ ಮಾಡಿ ಕೃಷ್ಣಾ ನದಿನೀರಿನ ಐತೀರ್ಪು ಅಣೆಕಟ್ಟೆಯ ಎತ್ತರ 524 ಮೀಟರ್ಸ್ಗೆ ಏರಿಸಲು ಒಪ್ಪಿಗೆ ಕೊಟ್ಟಿದೆ ಎಂದು ಸುದ್ದಿ ಕೊಟ್ಟ. ನಾನು ಐಫೋನಿನಲ್ಲಿ ಟೈಮ್ಸ್ ಆಫ್ ಇಂಡಿಯಾ ತೆಗೆದು ನೋಡಿದೆ. ಅದರಲ್ಲಿ ಸುದ್ದಿ ಇನ್ನೂ ವಿವರವಾಗಿ ಪ್ರಕಟವಾಗಿರಲಿಲ್ಲ.<br /><br />ನಂತರ ಅಲ್ಲಿಂದ ಬಾದಾಮಿಗೆ ಹೋದೆವು. ಮೊದಲು ಅಲ್ಲಿಯ KSTDC ಹೋಟೆಲ್ಗೆ ಊಟಕ್ಕೆ ಹೋದೆವು. ಅಲ್ಲಿ ಅಮೃತ ಅವಳ ಪರಮಪ್ರಿಯ ಮೊಸರನ್ನವನ್ನು ಸವಿದಳು. ಅದು ನಿಜಕ್ಕೂ ಚೆನ್ನಾಗಿತ್ತು. ಅದರಲ್ಲಿದ್ದ ಉಳ್ಳಾಗಡ್ಡಿಯ ಪ್ರಮಾಣ ನೋಡಿ ಪೃಥ್ವಿ ಇವರಿಗೆ ಈರುಳ್ಳಿ ಬೆಲೆ ಹೆಚ್ಛಾಗಿರುವ ಸುದ್ದಿ ಇನ್ನೂ ತಲುಪಿಲ್ಲ ಎಂದು ತಮಾಷೆ ಮಾಡಿದರು.<br /><br />ನಂತರ ಬಾದಾಮಿಯ ಗುಹೆಗಳಿಗೆ ಹೋದೆವು. <img src="http://sphotos.ak.fbcdn.net/hphotos-ak-snc4/hs1375.snc4/164785_114952925244048_100001880229123_118101_682198_n.jpg" width="50%" align="right">ಅಲ್ಲಿ ಅಮೃತಳಿಗೆ ಕೂರ್ಮಾವತಾರದ ಮತ್ತು ನರಸಿಂಹ ವಿಗ್ರಹವನ್ನು ತೋರಿಸಿದೆ. ಕತೆ ಹೇಳಲಿಲ್ಲ. ಅವಳಿಗೆ ವಿಗ್ರಹ ಮತ್ತು ಶಿಲ್ಪಕಲೆಗಿಂತ ಅಲ್ಲಿದ್ದ ಮಕ್ಕಳು ಮತ್ತು ಕೋತಿಗಳ ಕಡೆಗೇ ಕಣ್ಣು. ಕೆಳಗೆ ಇಳಿದು ಚಹಾ ಕುಡಿಯುತ್ತ ಇದ್ದಾಗ ಬಾದಾಮಿಯ ಬಗ್ಗೆ ಏನನ್ನಿಸಿತು ಎಂದು ಕೇಳಿದೆ. "I will remember this place very well. Because it's name is Badami, no? Because I know badami milk, no? Then how will I forget? Badami is one word, means badami milk. So I will remember badami milk always, means, ’oh, we went to Badami’. I will never forget." ಎಂದು ಅವಳ ಮುಗ್ಧ ಭಾಷೆಯಲ್ಲಿ ಉತ್ಸುಕಳಾಗಿ ಹೇಳಿದಳು.<br /><br />ಅಲ್ಲಿಂದ ನಾವು ಗದಗ್ನತ್ತ ಹೊರಟೆವು. ಗದಗಿನ ತೋಂಟದಾರ್ಯ ಡಂಬಳ ಮಠದ ಮುಖ್ಯಸ್ಥರು ಪ್ರಗತಿಪರ ಮಠಾಧೀಶರಾಗಿ ಹೆಸರಾದವರು. ಗದಗಿನಲ್ಲಿರುವ ಸಾಹಿತಿ, ಮತ್ತು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ವಸ್ತ್ರದ ಮಠದ ಛತ್ರದಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಸಂಜೆ ಬೆಳಕಿರುವ ಹಾಗೇ ತಲುಪಿದ್ದರಿಂದ ಮಠದ ಮುಂದಿನ ರಸ್ತೆಯಲ್ಲಿ ತಿರುಗಾಡಲು ಹೋದೆವು. ನನಗೆ ಹಿಂದಿನ ದಿನ ಹಸಿಕಡಲೆ ತಿನ್ನಲು ಸಿಕ್ಕಿರಲಿಲ್ಲವಾದ್ದರಿಂದ ಅಲ್ಲಿ ಮಾರುತ್ತಿದ್ದ ಮರಳಿನಲ್ಲಿ ಉಪ್ಪು ಬೆರಸಿ ಬೇಯಿಸಿದ್ದ ಹಸಿರುಕಡಲೆಯನ್ನು ಕಾಲು ಕೇಜಿ ಕೊಂಡೆ. ಉಪ್ಪುಪಾಗಿದ್ದ ಅದನ್ನು ಅಮೃತ ಸಿಪ್ಪೆ ಸಮೇತ ಅಗಿಯಲು ಆರಂಭಿಸಿದಳು. <br /><br /><img src="http://sphotos.ak.fbcdn.net/hphotos-ak-snc6/hs025.snc6/165565_114957301910277_100001880229123_118130_3274407_n.jpg" width="50%" align="left">ಅಂದು ಕೋಣೆಯಲ್ಲಿ ಗಾರೆನೆಲದ ಮೆಲೆ ಕೊಳೆಯಾಗಿದ್ದಲ್ಲೆಲ್ಲ ಆಡುತ್ತ ಕೂರುತ್ತಿದ್ದ ಅವಳನ್ನು ಪೃಥ್ವಿ ಹಾಗೆಲ್ಲ ಎಲ್ಲೆಂದರಲ್ಲಿ ನೆಲದ ಮೆಲೆ ಕೂರಬೇಡ ಎಂದರು. ಅವಳು ಯಾಕೆ ಎಂದು ತನ್ನ ಮೂಲಭೂತ ಪ್ರಶ್ನೆ ಕೇಳುವ ಮೂಲಕ ತನ್ನ ಮೂಲಭೂತ ಹಕ್ಕನ್ನು ಚಲಾಯಿಸಿದಳು. ಪೃಥ್ವಿ ಪ್ರಾಧ್ಯಾಪಕರು. ತಾಳ್ಮೆಯಿಂದ ಅವಳಿಗೆ "ಕೊಳೆಯಾಗಿರುವ ಸ್ಥಳದಲ್ಲಿ germs ಇರುತ್ತವೆ. ಅವನ್ನು ಅಂಟಿಸಿಕೊಂಡರೆ ನಿನಗೆ ಕಾಯಿಲೆ ಬರುತ್ತದೆ," ಎಂದರೆ. "ಬಂದರೆ ಏನಾಗುತ್ತದೆ?", ಅವಳ ಪ್ರಶ್ನೆ. "ಆಗ ನಿನ್ನ ತಲೆ ಇಷ್ಟು ದೊಡ್ಡದಾಗಿ ಊದಿಕೊಳ್ಳುತ್ತದೆ," ಎಂದರು. ನನಗೆ ಅದರ ಹಿಂದಿನ ವಾರ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಎಂಡೋಸಲ್ಪಾನ್ ದುಷ್ಪರಿಣಾಮಗಳ ಲೇಖನ ಮತ್ತು ಅದರೊಂದಿಗೆ ಪ್ರಕಟವಾಗಿದ್ದ ಅಕರಾಳ-ವಿಕರಾಳವಾಗಿ ಊದಿಕೊಂಡಿದ್ದ ಮಗುವೊಂದರ ತಲೆ ಮತ್ತು ಮುಖ ರಪ್ಪನೆ ನೆನಪಾಯಿತು. "ಹೌದು ಚಿನ್ನ, ಹಾಗೆಲ್ಲ ಎಲ್ಲೆಂದರಲ್ಲಿ ಕೂರಬೇಡ," ಎಂದು ಗದರಿದೆ.<br /><br />ಸಂಜೆ ಏಳೂವರೆ ಸುಮಾರಿಗೆ ಚಂದ್ರಶೇಖರ ವಸ್ತ್ರದ ಛತ್ರದ ಕೋಣೆಗೆ ತಮ್ಮ ಸ್ನೇಹಿತರೊಡನೆ ಬಂದರು. ಅವರೊಂದಿಗೆ ಒಂದಷ್ಟು ಮಾತುಕತೆಯಾಯಿತು. ಅವರು ಹೋದ ಬಳಿಕ ನಾವು ಮಠಕ್ಕೆ ಹೋಗಿ ಊಟ ಮಾಡಿದೆವು. ಅಂದು ಅಮೃತ ಹಿಂದಿನ ಎಲ್ಲಾ ದಿನಗಳಿಗಿಂತ ಚೆನ್ನಾಗಿ ಉಂಡಳು. ಚಪಾತಿ, ಹುಚ್ಚೆಳ್ಳು (ಗುರೆಳ್ಳು)ಚಟ್ನಿ, ಮೊಸರನ್ನ ಮುಂತಾದವನ್ನು ಚಪ್ಪರಿಸಿಕೊಂಡು ಖಾಲಿ ಮಾಡಿದಳು.<br /><br />ಅಂದಿನ ರಾತ್ರಿಯ ನಿದ್ರೆ ಎಂದಿನಂತಿರಲಿಲ್ಲ. ಒಮ್ಮೆ ಮಲಗಿದ ಮೇಲೆ ಬೆಳಗ್ಗೆಯ ತನಕ ಸದ್ದುಗದ್ದಲ ಇಲ್ಲದೆ ಮಲಗುವ ನನ್ನ ಮಗಳು ಅಂದು ಬಹುಶಃ ನಡುರಾತ್ರಿಯಾದ ಮೇಲೆ ಹೊರಳಾಡಲು ಪದೆಪದೆ ತ್ಚು,ತ್ಚು ಎನ್ನಲು ಆರಂಭಿಸಿದಳು. ನಿದ್ದೆ ಬರುತ್ತಿಲ್ಲವೇನೊ ಎಂದು ನಾನು ಅವಳ ಬೆನ್ನು ತಟ್ತುತ್ತ, ಎದೆಯ ಮೇಲೆ ಎಳೆದುಕೊಳ್ಳುತ್ತ, ತಲೆ ಸವರುತ್ತ ಮಲಗಿಸಲು ಯತ್ನಿಸಿದೆ. ನನಗೂ ನಿದ್ದೆ ಕೆಡುತ್ತಿತ್ತು. ಒಮ್ಮೆ ಗದರಿದೆ ಕೂಡ. ಆಗ, ’ಅಬ್ಬು ಆಗಿದೆ ಅಬ್ಬ," ಎಂದು ಕತ್ತಲಿನಲ್ಲ್ಲಿ ನನ್ನ ಬೆರಳಿಡಿದು ಅವಳ ಕೆಳದುಟಿಯ ಮೇಲೆ ಬಲಗಣ್ಣಿನ ರೆಪ್ಪೆಯ ಮೇಲೆ ಆಡಿಸಿದಳು. ಅಲ್ಲೆಲ ಸ್ವಲ್ಪ ಊದಿಕೊಂಡಿತ್ತು. ಸೊಳ್ಳೆಪರದೆ ಇರಲಿಲ್ಲ. ಸೊಳ್ಳೆ ಕಡಿದಿರಬಹುದೆಂದು ಭಾವಿಸಿ ಏನೂ ಆಗಲ್ಲ, ಈಗ ನಿದ್ದೆ ಮಾಡು ಎಂದೆ. ಹಣೆ, ಕುತ್ತಿಗೆ ಮುಟ್ಟಿ ನೋಡಿದೆ. ಜ್ವರ ಇರಲಿಲ್ಲ. ನಂತರ ಯಾವುದೊ ಹೊತ್ತಿನಲ್ಲಿ ಹೊರಳಾಡುತ್ತ ಮಲಗಿಬಿಟ್ಟಳು.<br /><br /><img src="http://sphotos.ak.fbcdn.net/hphotos-ak-ash1/hs744.ash1/163666_115089825230358_100001880229123_118775_3778995_n.jpg" width="50%" align="right">ಡಿಸೆಂಬರ್ 31ರ ಬೆಳಗ್ಗೆ ಅವಳು ಬೇಗ ಏಳಲಿಲ್ಲ. ಮೈಮುಟ್ಟಿ ನೋಡಿದೆ. ಜ್ವರದ ಲಕ್ಷಣ ಕಾಣಿಸಲಿಲ್ಲ. ಬಲವಂತವಾಗಿ ಎಬ್ಬಿಸಿದೆ. ಏನಾಗಿದೆ ಎಂದು ನೋಡುವ ಅವಸರ ನನಗೆ. ಎಬ್ಬಿಸಿದರೂ ಕಣ್ಣು ಬಿಡಲಿಲ್ಲ. ಕೆಳದುಟಿ ಜೋರಾಗಿಯೇ ಊದಿಕೊಂಡಿದೆ. ಬಲಗಣ್ಣಿನ ಕೆಳಗೆ ಸೊಳ್ಳೆ ಕಡಿದಾಗ ಊದಿಕೊಳ್ಳುವ ಹಾಗೆ ಊದಿಕೊಂಡಿದೆ. ಬಲವಂತವಾಗಿ ಕಣ್ಣು ಬಿಡಿಸಿದೆ. ಭಯ ಆಯಿತು. ರೆಪ್ಪೆಗಳೆಲ್ಲ ಊದಿಕೊಂಡಿವೆ. ಅರ್ಧ ಕಣ್ಣು ಮಾತ್ರ ಕಾಣಿಸುತ್ತದೆ. ಮುಖವೆಲ್ಲ ಊದಿಕೊಂಡಿದೆ. ರಾತ್ರಿ ಮಲಗಿದ ಮಗುವಿನ ಮುಖ ಅಲ್ಲವೇ ಅಲ್ಲ ಅದು. ನನಗೆ ಏನೂ ಹೊಳೆಯಲಿಲ್ಲ. ಅವಳಿಗೆ ಈ ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಪೃಥ್ವಿ ಸಹ ನೋಡಿ ಅಲರ್ಜಿ ಆಗಿರಬೇಕು ಎಂದರು. ಸಾಧ್ಯವಾದರೆ ಬೇಗ ಹೊರಟು ವೈದ್ಯರಿಗೆ ತೋರಿಸೋಣ ಎಂದರು. ವೈದ್ಯರು ಅಂದ ತಕ್ಷಣ ನಾನು ಅವಳ ಮುಖದ ಒಂದೆರಡು ಪೋಟೊ ತೆಗೆದು ಬೆಂಗಳುರಿನಲ್ಲಿರುವ ನಮ್ಮ ಹಿತೈಷಿ ವೈದ್ಯರಿಗೆ ಫೋನ್ ಮಾಡಿದೆ. ಹೀಗೆಹೀಗೆ ಕಾಣಿಸುತ್ತಿದ್ದಾಳೆ, ಫೋಟೋಗಳನ್ನು ನಿಮ್ಮ ಮಗಳಿಗೆ ಇಮೇಲ್ ಮಾಡಲಾ ಎಂದೆ. ಅವರು ಆಗಲೆ ಮನೆ ಬಿಟ್ಟಿದ್ದರು. ’ಅದೇನೂ ಬೇಡ, ಇದು ಅಲರ್ಜಿ ಅಷ್ಟೆ. ಒಂದೋ ಯಾವುದಾದರೂ ಹುಳ/ಕೀಟ ಕಡಿದಿರಬೇಕು, ಇಲ್ಲವೆ ಊಟದ ತಿಂಡಿಯ ಅಲರ್ಜಿ ಆಗಿರಬೇಕು. ಈ ಕೂಡಲೆ ಈ ಮಾತ್ರೆ ಮತ್ತು ಸಿರಪ್ ಕೊಡು,’ ಎಂದು ಸಿಟ್ರಿಜಿನ್ ಸಿರಪ್ ಮತ್ತು ಇನ್ನೊಂದು ಮಾತ್ರೆ ಹೇಳಿ ಒಂದು ಸ್ಕಿನ್ ಕ್ರೀಮ್ ಸಹ ಹಚ್ಚಲು ಹೇಳಿದರು.<br /><br />ನಾವು ಕೂಡಲೆ ರೆಡಿಯಾಗಿ ಅವಳ ಮುಖ ತೊಳೆಸಿ ಹೊರಟೆವು. ತೋಂಟದಾರ್ಯರ ಭೇಟಿ ಮಾಡುವ ಮನಸ್ಸಿತ್ತು. ಮಠದ ಬಳಿ ಎಂಟಕ್ಕೆ ಹೋದೆವು. ಹತ್ತಕ್ಕೆ ಭೇಟಿ ಎಂದರು. ನಾವು ಅಲ್ಲಿಯ ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ತಿಂದು ಅಮೃತಳಿಗೆ ನನ್ನ ಬಳಿಯಿದ್ದ ಸಿಟ್ರಿಜಿನ್ ಮಾತ್ರೆ ಕೊಟ್ಟೆ. ನಂತರ ಡ್ರಗ್ ಹೌಸಿನಲ್ಲಿ ಮಾತ್ರೆ ಮತ್ತು ಕ್ರೀಮ್ ತೆಗೆದುಕೊಂಡು ಅವಳಿಗೆ ಉಪಚರಿಸಿದೆವು. ಮುಖ ಉದಿಕೊಂಡದ್ದು ಬಿಟ್ಟರೆ ಅವಳಿಗೆ ಯಾವುದೆ ನೋವು ಇರಲಿಲ್ಲ. ಮಾಮೂಲಿಯ ಹಾಗೆ ಇದ್ದಳು. ಅಲ್ಲಿ ಕಾಯುವ ಮನಸ್ಸಾಗಲಿಲ್ಲ. ಚಿತ್ರದುರ್ಗದತ್ತ ಹೊರಟೆವು. ಅಂದು ರಾತ್ರಿ ಚಂಬೆಯವರ ಊರಾದ ರಾಮಜೋಗಿ ಹಳ್ಳಿಯಲ್ಲಿ ಉಳಿಯುವ ಯೋಜನೆ ಇತ್ತು. ಆದರೆ ಯಾವುದೂ ನಿಶ್ಚಿತವಾಗಿರಲಿಲ್ಲ.<br /><br /><img src="http://sphotos.ak.fbcdn.net/hphotos-ak-ash1/hs739.ash1/163191_115138028558871_100001880229123_118992_4363716_n.jpg" width="50%" align="left">ದುರ್ಗದಲ್ಲಿ ಚಂಬೆಯವರ ಮತ್ತವರ ಸ್ನೇಹಿತರ ಕುಟುಂಬ ಸಿಕ್ಕರು. ಅಷ್ಟೊತ್ತಿಗೆ ಅಂದೇ ಊರಿಗೆ ಮರಳೋಣ ಎಂದು ತೀರ್ಮಾನಿಸಿದ್ದೆವು. ಹೊಸವರ್ಷದ ಆಗಮನವನ್ನು ನಾವು ಅವರ ಊರಿನಲ್ಲಿ ಸ್ವಾಗತಿಸಬೇಕು ಎಂದು ಚಂಬೆಯವರ ಅಪೇಕ್ಷೆ. ಆದರೆ ಬದಲಾದ ಪರಿಸ್ಥಿತಿಯಿಂದಾಗಿ ಹಾಗೆ ಮಾಡುವ ಧೈರ್ಯ ಆಗಲಿಲ್ಲ. ಅಮೃತಳ ಮುಖದ ಊತ ಹಾಗೆಯೇ ಇತ್ತು. ಚಂಬೆಯವರಿಗೆ ಸಮಜಾಯಿಷಿ ಹೇಳಿ ಬೆಂಗಳೂರಿನತ್ತ ಹೊರಟೆವು.<br /><br />ದಾರಿಯಲ್ಲಿ ಮೂರುನಾಲ್ಕು ಫೋನ್ ಮಾಡಿದೆ. ಅವುಗಳ ಪ್ರಭಾವದಿಂದಾಗಿ ಅಮೃತಳನ್ನು ಆ ಸ್ಥಿತಿಯಲ್ಲಿ ಮನೆಗೆ ಕರೆದುಕೊಂಡು ಹೋಗುವ ಮನಸ್ಸಾಗಲಿಲ್ಲ. ಹಾಗಾಗಿ ಹಿರಿಯೂರಿನಿಂದ ನೈಋತ್ಯಕ್ಕೆ ತಿಪಟೂರಿನತ್ತ ಹೊರಟೆವು. ಅಂದು ರಾತ್ರಿ ತಿಪಟೂರಿನ ನೆಂಟರ ಮನೆಯಲ್ಲಿ ಉಳಿದುಕೊಂಡು, ವೈದ್ಯರಿಗೆ ತೋರಿಸುವ ಹಾಗಿದ್ದರೆ ಅಲ್ಲಿಯೇ ತೊರಿಸೋಣ ಎಂದು ಯೋಜನೆ ಹಾಕಿಕೊಂಡೆ.<br /><br />ದಾರಿಯಲ್ಲಿ ಬರುವ ಹುಳಿಯಾರಿನಲ್ಲಿ ಅಮೃತಳಿಗೆ ಬ್ರೆಡ್ ಕೊಡಿಸಿದೆ. ಅವಳಿಗೆ ಊಟದ ವಿಷಯದಲ್ಲಿ ಇಂತಹುದೇ ಬೇಕು ಎನ್ನುವ ಹಟ ಇಲ್ಲ. ಬ್ರೆಡ್ ಅನ್ನು ನನ್ನೊಂದಿಗೆ ಹಂಚಿಕೊಂಡು ತಿಂದಳು. ಸಂಜೆ ತಿಪಟೂರು ತಲುಪಿದೆವು. ಅಲ್ಲಿ ತಿಂಡಿ ಮತ್ತು ಕಾಫಿ ಮುಗಿದ ನಂತರ ಪೃಥ್ವಿಯವರನ್ನು ಬಸ್ಸ್ಟ್ಯಾಂಡಿಗೆ ಕರೆದುಕೊಂಡು ಹೋದೆ. ಅಲ್ಲಿಂದ ಅವರು ಅರಸೀಕೆರೆ ಮಾರ್ಗವಾಗಿ ಮೈಸೂರಿಗೆ ಹೋದರು.<br /><br />ತಿಪಟೂರಿನ ನೆಂಟರನ್ನು ಅಮೃತ ನೋಡುತ್ತಿದ್ದದ್ದು ಮೊದಲ ಬಾರಿ. ನಾನು ಬಸ್ ಸ್ಟೇಷನ್ನಿಂದ ಬರುವಷ್ಟರಲ್ಲಿ ಅವಳು ಹೊಂದಿಕೊಂಡಿದ್ದಳು. ಅಲರ್ಜಿಗೆ ಹಸಿ ಈರುಳ್ಳಿ ಒಳ್ಳೆಯದು ಎಂದು ಅಲ್ಲಿ ನಾಟಿ ವೈದ್ಯ ಮಾಡಿದರು. ಅವಳು ಮೊದಮೊದಲು ಬೇಡ ಎಂದವಳು ಅದು ಒಳ್ಳೆಯದೆಂಬ ವಿಷಯ ಮನದಟ್ಟಾದ ಮೇಲೆ ತಿಂದಳು. ಅಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದಳು.<br /><br />ಆ ಮನೆಯೊಡತಿ ಪ್ರತಿಶನಿವಾರ ದೇವಸ್ಥಾನಕ್ಕೆ ಹೋಗುವವರಂತೆ. ಬೆಳಗ್ಗೆ ದೇವಸ್ಥಾನಕ್ಕೆ ಡ್ರಾಪ್ ಕೊಡು ಎಂದು ಕೇಳಿದ್ದರು. ಬೆಳಗ್ಗೆ ಅವರದು ನಿಧಾನ ಆಯಿತು. ಅಷ್ಟೊತ್ತಿಗೆ ಅಮೃತಳೂ ಎದ್ದಳು. ಬಹುಪಾಲು ಊತ ಹೋಗಿತ್ತು. ಗುಳ್ಳೆಗಳು ಮಾತ್ರ ಇದ್ದವು. ನಾನೂ ದೇವಸ್ಥಾನಕ್ಕೆ ಬರುತ್ತೇನೆ ಎಂದಳು. ನಾನು ಮುಖ ತೊಳೆದುಕೊಂಡು ಅವಳಿಗೆ ಸ್ನಾನ ಮಾಡಿಸಿ ಲಂಗ ಮತ್ತು ರವಿಕೆ ಹಾಕಿದೆ. <img src="http://sphotos.ak.fbcdn.net/hphotos-ak-snc6/hs046.snc6/167620_115313521874655_100001880229123_119927_6427767_n.jpg" width="50%" align="right">2011ರ ಮೊದಲ ದಿನ ಆ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಮುದ್ದಾಗಿ ಕಂಡಳು. ಒಟ್ಟು ಐದು ಹೆಂಗಸರನ್ನು ಕಾರಿನಲ್ಲಿ ಕೂರಿಸಿಕೊಂಡು ತಿಪಟೂರಿನ ಉಪ-ಕಾರಾಗೃಹದ ಮುಂದಿರುವ ದೇವಸ್ಥಾನಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಅಮೃತಳ ಹಲವಾರು ಫೋಟೊ ತೆಗೆದೆ. ಅವರು ಪೂಜೆಗೆ ಹೋದಾಗ ನಾನು ಹತ್ತಿರದಲ್ಲೇ ಇದ್ದ ಸಂತೆಯನ್ನು ನೋಡಿಕೊಂಡು ಬಂದೆ. ದೊಡ್ದವರು ಸಂತೆಗೆ ಹೋದಾಗ ಅಮೃತ ಮತ್ತವಳ ನಾಲ್ಕನೆ ತರಗತಿಯ ಸ್ನೇಹಿತೆ ಅಮಿತಳಿಗೆ ಬಾದಾಮಿ ಹಾಲು ಕುಡಿಸಿದೆ. ಮನೆಗೆ ಬರುವಾಗ ದಾರಿಯಲ್ಲಿ ಅಮಿತಳ ಮನೆಗೆ ಹೋದ ಅಮೃತ ಅಲ್ಲಿಯೇ ಒಂದಷ್ಟು ತಿಂದುಕೊಂಡು ಆಡಿಕೊಂಡು ಬಂದಳು. ನಾನು ಸಿರಪ್ ಮತ್ತು ಮಾತ್ರೆ ಕೊಟ್ಟು ಇನ್ನೊಮ್ಮೆ ಸ್ಕಿನ್ ಕ್ರೀಮ್ ಹಚ್ಚಿದೆ.<br /><br />ಮಧ್ಯಾಹ್ನ ಹನ್ನೆರಡಕ್ಕೆ ತಿಪಟೂರಿನಿಂದ ಅಲ್ಲಿಯೇ ಇದ್ದ ನನ್ನ ಚಿಕ್ಕಮ್ಮನ ಮಗನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೊರಟೆವು. ಹಿಂದಿನ ದಿನವೇ ಊರಿಗೆ ಹೋಗೋಣ ಎನ್ನುವ ಸಮಯದಲ್ಲಿ ಹೋಮ್ ಸ್ವೀಟ್ ಹೋಮ್ ಅಲ್ಲವಾ ಅಪ್ಪಾ ಅಂದಿದ್ದಳು ಅಮೃತ. ಹಾಗೆನ್ನುತ್ತಲೇ ನನಗೆ ಸೋಮವಾರದ ತನಕ ಶಾಲೆಯಿಲ್ಲ, ಭಾನುವಾರ ಮನೆಗೆ ಹೋಗೋಣ ಎಂದಿದ್ದಳು. ಎಲ್ಲೇ ಇರಲಿ, ಓದಲು ಪುಸ್ತಕ, ಪ್ರೀತಿಯಿಂದ ಮಾತನಾಡಿಸುವ ಜನ, ಆಗಾಗ ಆಡಲು ಸ್ನೇಹಿತರು ಇದ್ದರೆ ಇರುವ ಜಾಗದಲ್ಲೇ ಸಂತೋಷ ಕಾಣುವವಳು ಅವಳು. <img src="http://l1.sphotos.l3.fbcdn.net/hphotos-l3-snc6/hs076.snc6/168689_115369568535717_100001880229123_120334_7425913_n.jpg" width="50%" align="left">ಸಂಜೆ ಮೂರಕ್ಕೆ ಬೊಮ್ಮಸಂದ್ರ ತಲುಪಿದೆವು. ಬಂದ ತಕ್ಷಣ ಅವಳ ಒಂದು ವರ್ಷದ ತಮ್ಮ ಅಮೋಘನೊಂದಿಗೆ ಆಡಲು ಓಡಿದಳು. ಅವನನ್ನು ಅಪ್ಪಿ ಮುದ್ದಾಡಿದಳು. ಅಮ್ಮನಿಗೆ ಮುತ್ತುಕೊಟ್ಟಳು. ಚಿಕ್ಕಕ್ಕ ಮನೆಯಲ್ಲಿರಲಿಲ್ಲ.<br /><br />ಹಲವಾರು ಕಾರಣಗಳಿಗೆ ಈ ಪ್ರವಾಸ ನನಗೆ ಮುಖ್ಯ. ಈ 1900 ಕಿ.ಮೀ.ಗಳ ಪ್ರವಾಸದುದ್ದಕ್ಕೂ ನಾನು ಹಲವಾರು ವಿಷಯಗಳನ್ನು ಕಲಿಯುತ್ತ ನೋಡುತ್ತ ಹೋದೆ. ಅವೆಲ್ಲ ಮನಸ್ಸಿನಾಳದಲ್ಲಿ ಇವೆ. ಪೃಥ್ವಿ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಿದ್ದರು. ಚರ್ಚಿಸುತ್ತಿದ್ದೆವು. ಚಂಬೆ ತಮಾಷೆ ಮಾಡುತ್ತಲೆ ವಾಸ್ತವದ ಪರಿಚಯ ಮಾಡಿಕೊಡುತ್ತಿದ್ದರು. ಭೇಟಿಯಾದ ಅನೇಕ ಜನ ಮತ್ತು ಅವರೊಡನೆಯ ಮಾತು, ದಾರಿಯಲ್ಲಿನ ನಿಸರ್ಗ, ಕಂಡ ಜನ, ಇವೆಲ್ಲದರಿಂದ ಕಲಿತದ್ದು ನನ್ನ ಮುಂದಿನ ದಿನಗಳನ್ನು ಮತ್ತು ನನ್ನ ತೀರ್ಮಾನಗಳನ್ನು ತೀರ್ಮಾನಿಸಲಿವೆ.<br /><br />ಮತ್ತೆ, ಅಮೃತಳ ಉಪಸ್ಥಿತಿ. ಐಫೋನಿನಲ್ಲಿ ಅವಳ ಫೋಟೊ ತೆಗೆಯುವುದು, ಅದರಲ್ಲಿ ಉತ್ತಮವಾದದ್ದನ್ನು ಕೂಡಲೆ ಐಫೋನ್ app ಮೂಲಕ <a href="http://www.facebook.com/album.php?aid=17995&id=100001880229123&l=39ecfe5362">ಫೇಸ್ಬುಕ್ಗೆ ಹಾಕುವುದು</a> ಬಹುಶಃ ಹುಮ್ಮಸ್ಸಿನಿಂದ ಮಾಡಿದ ಇನ್ನೊಂದು ಕೆಲಸ.<br /><br />ಉತ್ತರ ಕರ್ನಾಟಕದ ಬಗ್ಗೆ ಇಲ್ಲೊಂದು ಟಿಪ್ಪಣಿ. ಹಿಂದೆ ನೋಡದ ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಈ ಸಾರಿ ನೋಡಿದೆ. ಉತ್ತರ ಕರ್ನಾಟಕದ ಬಡತನ ನಿಸರ್ಗ ನಿರ್ಮಿತವಲ್ಲ. ಅದು ಮನುಷ್ಯ ನಿರ್ಮಿತ. ನನ್ನ ಪ್ರಕಾರ ಪಾಳೆಯಗಾರಿಕೆ ಸಂಸ್ಕೃತಿ, ನೆಲ ಮತ್ತು ಜಲದ ಅಸಮಾನ ಹಂಚಿಕೆ, ಸಮುದಾಯದ ಅಜ್ಞಾನ, ಸ್ವಹಿತಾಸಕ್ತಿಯ ರಾಜಕಾರಣಿ ಮತ್ತು ಅಧಿಕಾರಿವರ್ಗ, ಇವೇ ಅಲ್ಲಿನ ಬಡತನ ಮತ್ತು ಹಿಂದುಳಿದಿರುವಿಕೆಗೆ ಕಾರಣ. ಭೂಹೀನರಿಗೆ ಭೂಹಂಚಿಕೆ, ಪಂಚಾಯತ್ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ನಾಗರಿಕ ಹಕ್ಕುಗಳ ರಕ್ಷಣೆ, ಮತ್ತು ವೈಜ್ಞಾನಿಕ ನೆಲೆಯಲ್ಲಿ ಜನಜಾಗೃತಿ ಮತ್ತು ತಿಳಿವಳಿಕೆ, ಇವು ಈ ಪ್ರದೇಶದ ಸುಧಾರಣೆಗೆ ಕರ್ನಾಟಕ ಮತ್ತು ಭಾರತ ಸರ್ಕಾರ ಮಾಡಬೇಕಾದ, ಜನರು ಒತ್ತಾಯಿಸಬೇಕಾದ ಕೆಲಸಗಳು.<br /><br />[<a href="http://www.facebook.com/album.php?aid=17995&id=100001880229123&l=39ecfe5362">ಫೇಸ್ಬುಕ್ನಲ್ಲಿರುವ ಈ ಪ್ರವಾಸದ ಅಮೃತಳ ಫೋಟೊ ಆಲ್ಬಮ್</a>]ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-44691200455381927732010-11-30T01:08:00.000-08:002010-11-30T01:34:48.847-08:00ಬೊಮ್ಮಸಂದ್ರದಿಂದ...ಈಗ ವಾಸ್ತವ್ಯ ಬದಲಾಗಿದೆ (ಪೂರ್ತಿ ಅಲ್ಲದಿದ್ದರೂ ಬಹುಪಾಲು.) ಇನ್ನೊಂದಷ್ಟು ದಿನಗಳಲ್ಲಿ ಇನ್ನೊಂದು ಜಾಗಕ್ಕೆ/ಮನೆಗೆ ಬದಲಾಯಿಸಬಹುದು. ಊರಿನಿಂದ ದೂರ ಏನಲ್ಲ.<br /><br />ನಿಧಾನಕ್ಕೆ ಕರ್ನಾಟಕದ ಮತ್ತು ಭಾರತದ ದೈನಂದಿನ ಜೀವನದ ಗೋಳು ತಟ್ಟುತ್ತಿದೆ. ಈಗ ತಾನೆ RTO ಕಛೇರಿಗೆ ಹೋಗಿ ಬಂದೆ. ಮುಗ್ದರು, ಅಮಾಯಕರು, ಪ್ರಾಮಾಣಿಕರು ಎಲ್ಲರೂ ಇಲ್ಲಿ ಅಸಹಾಯಕರು. ಅಂತಹ ಅಸಹಾಯಕರಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆ. ಮತ್ತು ಅವರಿಗೆ ನ್ಯಾಯ ದಕ್ಕುತ್ತಿಲ್ಲ.<br />ನಮ್ಮ ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರವನ್ನು ನೋಡಿ <a href="http://en.wikipedia.org/wiki/Henry_David_Thoreau">ಥೊರೋ</a> ಮತ್ತು ಗಾಂಧಿ ಮಾಡಿದ ಕಾನೂನು ಉಲ್ಲಂಘನೆಯೇ ಈಗಿನ ನಮ್ಮ ಸಂದರ್ಭದ ನಮ್ಮದೇ ಸ್ವತಂತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನೈತಿಕವಾಗಿಯೂ ಸರಿಯೇನೊ ಎನ್ನಿಸುತ್ತಿದೆ. ಥೊರೋ ತೆರಿಗೆ ಕಟ್ಟಬೇಕಾದ ಕಾನೂನು ಕಟ್ಟುಪಾಡನ್ನು ಉಲ್ಲಂಘಿಸಿದ. ನನಗೆ ತೆರಿಗೆ ಕಟ್ಟಲು ಅಭ್ಯಂತರವಿಲ್ಲ. ಆದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ಕಾನೂನು ಉಲ್ಲಂಘಿಸಿ ದಂಡ ಹಾಕಿಸಿಕೊಳ್ಳುವುದೇ ನೈತಿಕತೆ ಮತ್ತು ಮೌಲ್ಯವನ್ನು ಕಾಪಾಡುತ್ತದೆ ಎನ್ನಿಸಿತ್ತದೆ.<br /><br />ಜಾಗ ಬದಲಾವಣೆಯೊಂದಿಗೆ ಹಲವಾರು ಕೆಲಸಗಳು ಜವಾಬ್ದಾರಿಗಳು ಮುಂದಿವೆ. ಒಂದೊಂದನ್ನೇ ಮಾಡುತ್ತ ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಪ್ರಜಾಪ್ರಭುತ್ವವಾದಿ ವಿಷಯಗಳಿಗೆ ಸಕ್ರಿಯನಾಗುತ್ತೇನೆ. ನಾನು ತೊಡಗಿಸಿಕೊಳ್ಳಬಹುದಾದ ವಿಷಯಗಳಿದ್ದಲ್ಲಿ ಸ್ನೇಹಿತರು ಅದನ್ನು ನನ್ನ ಗಮನಕ್ಕೆ ತಂದರೆ ಅವರಿಗೆ ನಾನು ಆಭಾರಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)<br /><br />ನಮಸ್ಕಾರ,<br />ರವಿ...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-38563859200733523862010-10-10T20:36:00.000-07:002010-10-10T20:43:06.223-07:00ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ...ಈ ಕೆಳಗಿನದನ್ನು ಈಗ ಚಾಲ್ತಿಯಲ್ಲಿರುವ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬರೆದದ್ದು. ಈಗ ಮತ್ತೊಮ್ಮೆ ಸೂಕ್ತ ಎಂದು ಇಲ್ಲಿ ಹಾಕುತ್ತಿದ್ದೇನೆ.<br />ರವಿ...<br /><blockquote>ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.<br /><br />ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.<br /><br />ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.<br /><br />ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೦ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ ಇವರು ಖರ್ಚು ಮಾಡಲಿದ್ದಾರೆ ಮತ್ತು ಇನ್ನೂ ಹೆಚ್ಚಿಗೆ ಅದೇ ತರಹದ ಕೆಟ್ಟಹಣವನ್ನು ಸಂಪಾದಿಸುವ ಉದ್ದೇಶ ಹೊಂದಿದ್ದಾರೆ ಎನ್ನುವುದರ ಬಗ್ಗೆ ನೀವು ಯಾವುದೆ ಸಂಶಯ ಇಟ್ಟುಕೊಳ್ಳಬೇಡಿ. ಇದು ನ್ಯಾಯಯುತವಾದ ಚುನಾವಣೆಯಲ್ಲ. ಈ ವ್ಯವಸ್ಥೆಯಲ್ಲಿ, ಈ ಸಂದರ್ಭದಲ್ಲಿ, ಯಾವೊಬ್ಬ ಪ್ರಾಮಾಣಿಕ ಮನುಷ್ಯನೂ ಚುನಾವಣೆಗೆ ನಿಂತು ಗೆಲ್ಲಲಾರ.<br /><br />ಮಾನವ ಇತಿಹಾಸದಲ್ಲಿ ಸಮಾನತೆ ಮತ್ತು ಪ್ರಜಾರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿದ ಅತಿದೊಡ್ಡ ಮಹಾತ್ಮರಲ್ಲಿ ಒಬ್ಬನಾದ ಅಬ್ರಹಾಮ್ ಲಿಂಕನ್ ಒಮ್ಮೆ ಹೀಗೆ ಅಂದಿದ್ದಾನೆ: "ಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪ ಕೆಲಸವನ್ನು ಮಾಡುವ ಮನುಷ್ಯರು ಹೇಡಿಗಳು."<br /><br />ಈ ಸಂದರ್ಭದಲ್ಲಿ, ಭಾರತದ ನಾಗರಿಕರಾಗಿ, ನಮ್ಮ ಜವಾಬ್ದಾರಿಗಳು ತಾನೆ ಏನು? ಈ ಸವಾಲಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಕೇವಲ "ಬಾಯುಪಚಾರದ" ಮಾತುಗಳನ್ನು ಹೇಳುವ ಮೂಲಕವೆ? ಸಿನಿಕರಾಗಿ, ಸ್ವಾರ್ಥಿಗಳಾಗಿ ಇರುವುದರ ಮೂಲಕವೆ? ಅಥವ, ನಮ್ಮ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ತಿಳಿದುಕೊಂಡು, ಧರ್ಮಯುತವಾದ ಹಾದಿಯನ್ನು ತುಳಿಯುವುದರ ಮೂಲಕವೆ?<br /><br />ನಾವು ಕೇವಲ ಸುಮ್ಮನೆ, ಸಂಬಂಧವಿಲ್ಲದ ರೀತಿಯಲ್ಲಿ ಇದ್ದುಬಿಡಲು ಸಾಧ್ಯವಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ. ಈಗ ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೋದರೆ ಅದು ಬಹುದೊಡ್ಡ ಪಾಪಕಾರ್ಯ ಮತ್ತು ಅದು ನಾವು ಹುಟ್ಟಿಬೆಳೆದ, ನಾವು ದುಡಿದು ಜೀವನ ಸಾಗಿಸುತ್ತಿರುವ, ತೆರಿಗೆ ಕಟ್ಟುತ್ತಿರುವ, ನಮ್ಮ ಮಕ್ಕಳು ಬೆಳೆಯುತ್ತಿರುವ ಮತ್ತು ಅವರು ತಮ್ಮ ಜೀವನವನ್ನು ಕಳೆಯಲಿರುವ ಬೆಂಗಳೂರು ಮತ್ತು ಕರ್ನಾಟಕಕ್ಕೆ ಎಸಗುವ ದ್ರೋಹ ಎಂದು ನಾನು ಭಾವಿಸುತ್ತೇನೆ. ಕಳ್ಳರು, ಸುಳ್ಳರು, ಕ್ರಿಮಿನಲ್ಗಳು, ಸಮಾಜಘಾತುಕ ಶಕ್ತಿಗಳು, ಸಣ್ಣಮನಸ್ಸಿನ ಜನರೂ ನಮ್ಮ ಪ್ರತಿನಿಧಿಗಳಾಗುವುದನ್ನು ನಾವು ಭರಿಸಲು ಸಾಧ್ಯವೆ?</blockquote><hr>ಉಳಿದ ಲೇಖನ ಮತ್ತು ನನ್ನ ಆ ಸಮಯದ ಪ್ರಯತ್ನ/ಪ್ರಯೋಗಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವರು, ಇಲ್ಲಿ ನೋಡಬಹುದು.<br /><a href="http://www.ravikrishnareddy.com/kannada.html">http://www.ravikrishnareddy.com/kannada.html</a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-23252239743005249122010-10-10T20:09:00.000-07:002010-10-10T20:19:19.189-07:00ಸಹನಾಗರೀಕರೆ, ಬೇವು ಬಿತ್ತಿ ಮಾವು ಬೆಳೆಯಲಾಗದು...ಕರ್ನಾಟಕದ ರಾಜಕಾರಣದ ಬಗ್ಗೆ ಇಂತಹುದೊಂದು ಮಾತನ್ನು ಈಗಾಗಲೆ ಹಲವರು ಬಳಸಿರಬಹುದು. ಹಾಗೆಯೇ ಇದೂ ಸಹ ಕ್ಲೀಷೆ ಆಗಿಬಿಡಬಹುದು. ಅದು ದೇಶದ ದುರಂತ...<br /><br />ಯಾಕೆ ಹೀಗಾಯಿತು? ಕೇವಲ ಜನರೇ ಕಾರಣರೆ? ಅವರಿಗೆ ಆಯ್ಕೆಗಳೇ ಇರಲಿಲ್ಲವೇ? ನಾಯಕರು ಅವರಾಗಿಯೇ ಬರುತ್ತಾರಾ ಅಥವ ಜನ ಮುಂದಕ್ಕೆ ತರುತ್ತಾರಾ?<br /><br />ಪ್ರಜಾರಾಜ್ಯದಲ್ಲಿ ಯಥಾ ಪ್ರಜಾ ತಥಾ ಪ್ರತಿನಿಧಿ. ಅಲ್ಲವೇ?<br /><br />ಉತ್ತಮ ಸಮಾಜದ ಕನಸು ಕಾಣುವುದಕ್ಕೆ ಮತ್ತು ಕ್ರಿಯಾಶೀಲರಾಗುವುದಕ್ಕೆ ಸಮಯ ಬಂದಿದೆಯೇ?ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-80430370796738957362010-09-29T15:53:00.000-07:002010-09-29T15:57:33.906-07:00ಮಾಯವಾಗುವುದೆ ಗೋಮುಖ? ಗಂಗೆ ಮತ್ತು ಭವಿಷ್ಯದ ಬಗ್ಗೆ PBS ಡಾಕ್ಯುಮೆಂಟರಿ<object width = "512" height = "328" > <param name = "movie" value = "http://www-tc.pbs.org/video/media/swf/PBSPlayer.swf" > </param><param name="flashvars" value="video=1146684618&player=viral" /> <param name="allowFullScreen" value="true"></param > <param name = "allowscriptaccess" value = "always" > </param><param name="wmode" value="transparent"></param ><embed src="http://www-tc.pbs.org/video/media/swf/PBSPlayer.swf" flashvars="video=1146684618&player=viral" type="application/x-shockwave-flash" allowscriptaccess="always" wmode="transparent" allowfullscreen="true" width="512" height="328" bgcolor="#000000"></embed></object><p style="font-size:11px; font-family:Arial, Helvetica, sans-serif; color: #808080; margin-top: 5px; background: transparent; text-align: center; width: 512px;">Watch the <a style="text-decoration:none !important; font-weight:normal !important; height: 13px; color:#4eb2fe !important;" href="http://video.pbs.org/video/1146684618" target="_blank">full episode</a>. See more <a style="text-decoration:none !important; font-weight:normal !important; height: 13px; color:#4eb2fe !important;" href="http://www.pbs.org/now/index.html" target="_blank">NOW on PBS.</a></p>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-70870408936866265392010-09-07T08:07:00.000-07:002010-09-07T08:24:02.306-07:00ಕೈಗಾರಿಕೆಗಳಿಗೆ ಕೃಷಿಜಮೀನು ಕೊಟ್ಟ ಹಳ್ಳಿಯ ಆರಂಭದ ದಿನಗಳು...[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]<br /><br /><blockquote>ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, ಮಾಲೀಕರನ್ನು ಮತ್ತು ನೌಕರರನ್ನು ಅನುಕೂಲಕ್ಕೆ ತಕ್ಕಂತೆ ಹೆದರಿಸಿ, ಸುಲಿಗೆ ಮಾಡಿಕೊಂಡು ಓಡಾಡುತ್ತಿದ್ದ ಯುವಕರಲ್ಲಿ ಒಂದಿಬ್ಬರು ಆಗಾಗ ಬಾಡಿಗೆ ಮನೆಗಳಲ್ಲಿದ್ದ ಹೆಂಗಸರನ್ನು ಬಲಾತ್ಕಾರ ಮಾಡುವುದು ಗೊತ್ತೂ ಗೊತ್ತಾಗದಂತೆ ನಡೆಯುತ್ತಿತ್ತು. ಬಾಡಿಗೆ ಮನೆಗಳಲ್ಲಿದ್ದ ಅನೇಕ ಕಾರ್ಮಿಕರು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಹಲವರ ಮನೆಗಳಲ್ಲಿ ಗಂಡನಿಲ್ಲದ ರಾತ್ರಿಗಳನ್ನು ಹೆಂಗಸರು ಕಳೆಯಬೇಕಿತ್ತು. ಹಾಗಾಗಿ ಅವರನ್ನು ಬಲಾತ್ಕಾರ ಮಾಡುವುದು ಪಡ್ಡೆ ಹುಡುಗರಿಗೆ ಕಷ್ಟವೇನೂ ಆಗಿರಲಿಲ್ಲ. ಆ ರೀತಿಯ ಅತ್ಯಾಚಾರಗಳಿಗೆ ಒಳಗಾದವರು ತಮ್ಮ ಸ್ಥಿತಿಗತಿಗಳಿಗೆ ಅನುಗುಣವಾಗಿ ಊರು ಖಾಲಿ ಮಾಡಿಕೊಂಡು ಹೋಗುತ್ತಿದ್ದರು ಇಲ್ಲವೆ ಪರಿಸ್ಥಿತಿಗೆ ಹೊಂದಿಕೊಂಡು ಬಿಡುತ್ತಿದ್ದರು.<br /><br />ಬಾಡಿಗೆ ಮನೆಗಳಲ್ಲಿದ್ದ ಹೊರಊರಿನ ಹೆಣ್ಣುಮಕ್ಕಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಊರಿನ ಪುಂಡರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಸಮಯದಲ್ಲಿ ಊರಿನ ಕೆಲವು ಬಡವರ ಹೆಣ್ಣುಮಕ್ಕಳ ಸ್ಥಿತಿಯೂ ಅಷ್ಟೇನು ಚೆನ್ನಾಗಿರಲಿಲ್ಲ. ಇದ್ದ ಸಣ್ಣಪುಟ್ಟ ಜಮೀನು ಕಳೆದುಕೊಂಡ ಸಣ್ಣ ರೈತರು ಒಂದೆರಡು ಎಮ್ಮೆ ಮತ್ತು ಹಸುಗಳಿಂದ ಜೀವನ ಮಾಡಬೇಕಿತ್ತು. ಹೊಲಗದ್ದೆಗಳು ಇಲ್ಲದ್ದರಿಂದ ಅವರು ತಮ್ಮ ಹಸುಗಳಿಗೆ ಪ್ರತಿದಿನವೂ ಹುಲ್ಲನ್ನು ಹೊಂದಿಸಬೇಕಿತ್ತು. ಒಂದು ಕಾಲದಲ್ಲಿ ಅವರದಾಗಿದ್ದ, ಆದರೆ ಇಂದು ಅವರದಲ್ಲದ ಜಮೀನುಗಳಲ್ಲಿ ಮಾತ್ರ ಹುಲ್ಲು ಧಂಡಿಯಾಗಿ ಬೆಳೆಯುತ್ತಿತ್ತು. ಕಾರ್ಖಾನೆಗಳ ಖಾಲಿ ಪ್ರದೇಶಗಳಲ್ಲಿ ಮಳೆಗಾಲದಲ್ಲಂತೂ ಹುಲ್ಲು ಆಳೆತ್ತರ ಬೆಳೆಯುತ್ತಿತ್ತು. ಆದರೆ ಕಾರ್ಖಾನೆಗಳಿಗೆಲ್ಲ ಮುಳ್ಳುತಂತಿಯ ಬೇಲಿಗಳಿದ್ದವು ಮತ್ತು ಪ್ರತಿ ಕಾರ್ಖಾನೆಗೂ ವಾಚ್ಮನ್ಗಳೆಂದು ಕರೆಸಿಕೊಳ್ಳುತ್ತಿದ್ದ ಕಾವಲುಗಾರರು ಇದ್ದರು. ಮನೆಗಳಲ್ಲಿ ಹಸುಗಳಿದ್ದ ಹೆಣ್ಣುಮಕ್ಕಳು ಇಂತಹ ಕಾರ್ಖಾನೆಗಳಿಗೆ ಬೆಳಿಗ್ಗೆ ನಸುಕಿನಲ್ಲೆ ಹುಲ್ಲು ಕೊಯ್ದುಕೊಂಡು ಬರಲು ಕುಡುಗೋಲಿನ ಸಮೇತ ಹೋಗುತ್ತಿದ್ದರು. ಕೆಲವು ವಾಚ್ಮನ್ಗಳು ಒಳ್ಳೆಯವರಿದ್ದು ಹುಲ್ಲು ಕೊಯ್ದುಕೊಳ್ಳಲು ಬಿಡುತ್ತಿದ್ದರೆ ಮತ್ತೆ ಕೆಲವರು ಬಿಟ್ಟಿಯಾಗಿ ಬಿಡುತ್ತಿರಲಿಲ್ಲ. ಹೆಣ್ಣುಮಕ್ಕಳ ದೇಹವನ್ನು ಆಗಾಗ ಶುಲ್ಕವಾಗಿ ಪಡೆಯುತ್ತಿದ್ದರು. ಹಲವಾರು ಮನೆಗಳಲ್ಲಿ ಅಪ್ಪಂದಿರಿಗೆ ಇದು ಗೊತ್ತಿತ್ತು. ಕೆಲವರು ಹೀಗಾಗದಂತೆ ಹುಷಾರಾಗಿ ನೋಡಿಕೊಂಡರು. ಮತ್ತೆ ಕೆಲವರು ಕುರುಡರಾದರು. ಅಭಿವೃದ್ಧಿಯ ಕಡೆ ಮುಖ ಮಾಡಿ ಬದಲಾಗುತ್ತಿರುವ ಹೊಸ ಪ್ರಪಂಚದಲ್ಲಿ ಅವರ ಜೀವನ ಈ ತಾಪತ್ರಯಗಳನ್ನು ಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅನಾನುಕೂಲಿಗಳು ಮತ್ತು ಅಬಲರು ಎರಡೂ ಕಡೆ ಶೋಷಿಸಲ್ಪಡುತ್ತಿದ್ದರು. <br /><br />ಜಮೀನು ಕಳೆದುಕೊಂಡ ವಿಧವೆಯರದು ಇನ್ನೊಂದು ಕತೆ. ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದ ವಿಧವೆಯರಿಗೆ ಮತ್ತು ಇನ್ನೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ವಿಧವೆಯರಿಗೆ ಪರಿಹಾರ ಕೊಡಿಸಲು ಹಾಗು ಕೋರ್ಟು-ಬ್ಯಾಂಕಿಗೆ ಕರೆದುಕೊಂಡು ಹೋಗಲು ಮೂರ್ನಾಲ್ಕು ಗಂಡಸರು ಪೈಪೋಟಿಯಲ್ಲಿ ಮುಂದಕ್ಕೆ ಬಂದರು. ಒಂದಿಬ್ಬರು ತಮ್ಮ ಭಾವಂದಿರ ಮತ್ತು ರಕ್ತಸಂಬಂಧಿಕರ ಮಾತು ಕೇಳಿ ಬಚಾವಾದರು. ಒಂದಿಬ್ಬರು ಗೊತ್ತಾಗದೆ ದುಡ್ಡನ್ನೆಲ್ಲ ಈ ಮುಂಡಾಮೋಚು ಜನರಿಗೆ ಕಳೆದುಕೊಂಡರು. ಮತ್ತೊಂದಿಬ್ಬರು ಹಾಗೆ ಸಹಾಯ ಮಾಡಲು ಬಂದವರಿಗೆ ದೈಹಿಕವಾಗಿಯೂ ಒಪ್ಪಿಸಿಕೊಂಡು ಒಂದಿಷ್ಟು ದುಡ್ಡೂ ಉಳಿಸಿಕೊಂಡು ಏನೂ ಆಗಿಲ್ಲದಂತೆ ಜೀವನ ಮುಂದುವರೆಸಿದರು. ಕೆಲವರು ಇದ್ದಕ್ಕಿದ್ದಂತೆ ಮೈತುಂಬಿಕೊಂಡು, ಬಿರಿದ ಟೊಮೆಟೊ ಹಣ್ಣಿನಂತೆ ಸ್ಥೂಲಕಾಯರಾದರು.<br /><br />ಜಮೀನು ಕಿತ್ತುಕೊಂಡ ಸರ್ಕಾರ ಮತ್ತು ಅದರ ಸೀಮಿತ ದೃಷ್ಟಿಕೋನದ ದಡ್ಡ ಅಧಿಕಾರಿಗಳು ಪರಿಹಾರದ ಹಣ ಕೊಡುವುದರೊಂದಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡರು. ತಮ್ಮ ಪಾಲಿಗೆ ಬಂದ ದುಡ್ಡನ್ನು ಜನ ಬಳಸಬಹುದಾದ ರೀತಿಗಳನ್ನು ಮತ್ತು ಜೀವನೋಪಾಯಕ್ಕೆ ತೊಡಗಿಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು ಹಳ್ಳಿಯ ಮುಗ್ಧ ಜನತೆಗೆ ತಿಳಿಸುವ ಕಾರ್ಯವನ್ನು ಅವರು ಮಾಡಲಿಲ್ಲ.<br /><br />ಯಾವುದು ನ್ಯಾಯ, ಯಾವುದು ಮೌಲ್ಯ, ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತಡೆಯಬೇಕು, ಎನ್ನುವಂತಹ ಚಿಂತನೆ ಊರಿನ ಸಮಷ್ಟಿ ಮಾನಸದಲ್ಲಿ ಹುಟ್ಟಲಿಲ್ಲ. ಇದನ್ನೆಲ್ಲ ಯೋಚಿಸಿ ಮಾತನಾಡುವವರ ಮಾತಿಗೆ ಬೆಲೆ ಇಲ್ಲದ ಸಂದರ್ಭ ಅದು. ಊರಿನ ಅಧ:ಪತನವನ್ನು ಸಹಿಸಲಾಗದ ಹಲವು ಅನುಕೂಲಸ್ಥರು ತಮ್ಮ ಉಳಿದಿದ್ದ ಹೊಲದಲ್ಲಿ ಮನೆ ಮಾಡಿಕೊಂಡು ಊರಿನಿಂದ ಹೊರಗಾದರು.</blockquote>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-41568724211958706322010-09-01T08:45:00.000-07:002010-09-01T09:54:51.809-07:00ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ...ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ.<br /><br />ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: "ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. ಅವರಿಗೆ ಇಲ್ಲದಿದ್ದಾಗ ಹತ್ತಿರಕ್ಕೆ ಕರೆದು ನಮಗಿರುವುದರಲ್ಲೆ ಅವರಿಗೂ ಇಡಬೇಕಪ್ಪ." ಸಾಮಾಜಿಕ-ಆರ್ಥಿಕ-ಬೌದ್ಧಿಕ ಇತಿಮಿತಿಗಳೇನೇ ಇರಲಿ, ಕಲುಷಿತವಾಗಲೊಲ್ಲದ ಮನಸ್ಸುಗಳು.<br /><br />ಇತ್ತೀಚೆಗೆ ತಾನೆ ಬೆಂಗಳೂರಿನಲ್ಲಿ ಹಲವಾರು ನಿರಾಶ್ರಿತರು ಸಾವಿಗೀಡಾದರು....<br /><br /><object width="480" height="385"><param name="movie" value="http://www.youtube.com/v/G_5eH7nG67s?fs=1&hl=en_US"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/G_5eH7nG67s?fs=1&hl=en_US" type="application/x-shockwave-flash" allowscriptaccess="always" allowfullscreen="true" width="480" height="385"></embed></object><br /><br /><br /><object width="480" height="385"><param name="movie" value="http://www.youtube.com/v/xRGtL4qcf6A?fs=1&hl=en_US"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/xRGtL4qcf6A?fs=1&hl=en_US" type="application/x-shockwave-flash" allowscriptaccess="always" allowfullscreen="true" width="480" height="385"></embed></object><br /><br /><object width="480" height="385"><param name="movie" value="http://www.youtube.com/v/GezEyZfOl4c?fs=1&hl=en_US"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/GezEyZfOl4c?fs=1&hl=en_US" type="application/x-shockwave-flash" allowscriptaccess="always" allowfullscreen="true" width="480" height="385"></embed></object><br /><br /><object width="480" height="385"><param name="movie" value="http://www.youtube.com/v/FzlgUgKQvRc?fs=1&hl=en_US"></param><param name="allowFullScreen" value="true"></param><param name="allowscriptaccess" value="always"></param><embed src="http://www.youtube.com/v/FzlgUgKQvRc?fs=1&hl=en_US" type="application/x-shockwave-flash" allowscriptaccess="always" allowfullscreen="true" width="480" height="385"></embed></object>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-56451306109194524692010-08-30T17:40:00.000-07:002010-08-30T18:16:16.219-07:00ಗಾಂಜಾ ಬೆಳೆಯುವ ಲಿವರ್ಮೋರ್ ಮನೆಯ ಮೇಲೆ ದಾಳಿ[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]<br /><br />ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್ಲ್ಯಾಂಡ್ನಿಂದ ಲಿವರ್ಮೋರ್ಗೆ ಹೊರಟರು. ಕೊರಾನ್ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್ರೂಮ್ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ ಸದ್ದಿಲ್ಲದೆ ಮನೆಯನ್ನು ಬಳಸಿ ಹಿಂಬದಿಯ ಹಿತ್ತಿಲಿಗೆ ನುಸುಳಿದರು. ಕೊರಾನ್ ತುದಿಯಲ್ಲಿ ಚಪ್ಪಟೆಯಾಗಿ ಸ್ವಲ್ಪ ಬಾಗಿದ್ದ ಕಬ್ಬಿಣದ ಕಾಗೆಕೊಕ್ಕಿನ ಸರಳನ್ನು ಜೊತೆಗೆ ಒಯ್ದಿದ್ದ. ಹಿಂಬದಿಯ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯ ಅಂಚಿನಲ್ಲಿ ಆ ಸರಳನ್ನು ತೂರಿಸಿ ವಿರುದ್ಧ ದಿಕ್ಕಿನಲ್ಲಿ ಜೋರಾಗಿ ಎಳೆದ. ಕಿಟಕಿ ಬಾಗಿಲಿನ ಕೊಂಡಿ ಒಳಗೆ ಚಳ್ಪಳ್ ಎಂದು ಕಿತ್ತುಬಂತು. ಕೂಡಲೆ ಕಿಟಕಿಯನ್ನು ಪೂರ ಅಂಚಿಗೆ ಸರಿಸಿ ಮೂವರೂ ಒಳಗೆ ನುಗ್ಗಿದರು.<br /><br />ಒಳಗೆ ತನ್ನ ೨೫ ವರ್ಷದ ಬಿಳಿಯ ಗರ್ಲ್ಫ್ರೆಂಡ್ ಮಿಸ್ಟಿ ಜೊತೆ ಮಲಗಿದ್ದ ೩೫ ವರ್ಷದ ಬಿಳಿಯ ಸೊನೆಪಸುಟ್ಗೆ ಇವರು ಮಾಡಿದ ಸದ್ದು ಅರೆಬರೆ ನಿದ್ದೆಯಲ್ಲೂ ಗೊತ್ತಾಯಿತು. ಮದುವೆ ಆಗಿಲ್ಲದಿದ್ದರೂ ಆತನಿಗೆ ತನ್ನ ಗರ್ಲ್ಫ್ರೆಂಡ್ನಿಂದ ಇಬ್ಬರು ಪುಟ್ಟಮಕ್ಕಳಿದ್ದರು. ದೊಡ್ದವನಿಗೆ ಎರಡೂವರೆ ವರ್ಷ ಮತ್ತು ಚಿಕ್ಕ ಮಗುವಿಗೆ ಇನ್ನೂ ಎಂಟು ತಿಂಗಳಷ್ಟೇ ಆಗಿತ್ತು. ಆ ಚಿಕ್ಕಮಗು ಆಗಾಗ ರಾತ್ರಿ ಹೊತ್ತು ಡೈಪರ್ ಒದ್ದೆ ಮಾಡಿಕೊಂಡರೆ ಅಳುತ್ತಿದ್ದಿದ್ದರಿಂದ ಅವರಿಬ್ಬರಿಗೂ ನಿದ್ದೆಯಲ್ಲೂ ಏಳುವುದು ಅಭ್ಯಾಸವಾಗಿತ್ತು. ಆ ಮಕ್ಕಳಿಬ್ಬರೂ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಇನ್ನೆರಡು ಕೋಣೆಯಲ್ಲಿ ಕುಂಡಗಳಲ್ಲಿದ್ದ ಗಾಂಜಾ ಗಿಡಗಳು ತಮ್ಮ ನಿರಂತರ ಬೆಳವಣಿಗೆಯಲ್ಲಿ ತೊಡಗಿದ್ದವು.<br /><br />ಹೊರಗಿನ ಸದ್ದಿಗೆ ಎಚ್ಚರವಾಗಿ ಆ ಬಿಳಿಯ ಎದ್ದು ಹೊರಗೆ ಬಂದ. ಆತನ ಗರ್ಲ್ಫ್ರೆಂಡ್ಗೂ ಎಚ್ಚರವಾಗಿ ಅವಳೂ ಅವನ ಹಿಂದೆ ಬಂದಳು. ಇವರು ಲಿವಿಂಗ್ರೂಮಿಗೆ ಬರುವಷ್ಟರಲ್ಲಿ ಮೂವರು ಅಣ್ಣತಮ್ಮಂದಿರೂ ಅಲ್ಲಿದ್ದರು. ಅಷ್ಟೊತ್ತಿಗೆ ಮೂವರ ಕೈಯ್ಯಲ್ಲೂ ರಿವಲ್ವಾರ್ಗಳು ಸ್ಥಾಪಿತವಾಗಿದ್ದವು. ಅರೆಬರೆ ಬೆಳಕಿನಲ್ಲಿ ಇವರನ್ನು ಕಂಡ ಮನೆಯವರಿಬ್ಬರೂ ಸ್ಥಂಭಿತರಾಗಿ ನಿಂತುಬಿಟ್ಟರು. ದೊಡ್ದವ ಕಿಮ್ ಕಾಲ್ಸ್ಟನ್ ಅವರಿಗೆ ಮೊದಲ ಮಾತಿನಲ್ಲಿ ಎಚ್ಚರಿಕೆ ಕೊಟ್ಟ.<br />"ತಾಯ್ಗಂಡನೆ, ಕೈಮೇಲೆತ್ತು. ಏನೂ ತಂತ್ರ ಮಾಡ್ಬೇಡ. ನೀನೂ ಅಷ್ಟೆ, ಸೂಳೆ."<br />ಮನೆಯವಳಿಗೆ ಮಕ್ಕಳ ಯೋಗಕ್ಷೇಮದ ಭಯ ಆಯಿತು.<br />"ದಯವಿಟ್ಟು ಏನೂ ಮಾಡಬೇಡಿ. ಮಕ್ಕಳು ನಿದ್ದೆ ಮಾಡ್ತಿದ್ದಾವೆ."<br />"ಹಾಗಾದ್ರೆ ಕೇಳಿ. ಮನೇಲಿ ಎಷ್ಟು ಹಣ ಇದೆಯೋ ಎಲ್ಲಾ ತಂದುಕೊಡಿ. ಹಾಗೇನೆ ಮನೇಲಿರೋ ಗಾಂಜಾ ಕೂಡ."<br />ಬಿಳಿಯನಿಗೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಮನಸ್ಸಾಗಲಿಲ್ಲ.<br />"ಯಾವ ಗಾಂಜಾ? ನಿಮಗೆಲ್ಲೋ ತಪ್ಪು ಸಮಾಚಾರ ಸಿಕ್ಕಿದೆ."<br />ಅದನ್ನು ಕೇಳಿ ಕೊರಾನ್ಗೆ ಕೋಪಬಂತು. ಬಿಳಿಯನ ಬಳಿ ಹೋಗಿ ಅವನ ಮೂತಿಗೆ ಒಂದು ಗುದ್ದಿದ. "ಸೂಳೆಮಗನೆ, ಸುಳ್ಳು ಹೇಳ್ತೀಯಾ? ನಾನು ಹಿಂದೊಮ್ಮೆ ಇಲ್ಲಿಗೆ ಬಂದಿದ್ದೆ."<br />ಬಿಳಿಯನ ಮೂಗಿನಿಂದ ರಕ್ತ ಒಸರಲು ಆರಂಭವಾಯಿತು. ತನ್ನ ಗೆಳೆಯನ ಸ್ಥಿತಿ ನೋಡಿ ಆ ಬಿಳಿಯಳಿಗೆ ಭಯವಾಯಿತು. ಇವರು ಇನ್ನೇನು ಮಾಡುತ್ತಾರೋ ಎಂದು ಮಕ್ಕಳಿರುವ ಕೋಣೆಗೆ ಹೋಗಲು ಅತ್ತ ನುಗ್ಗಿದಳು. ಅದನ್ನು ನೋಡಿ ದೊಡ್ಡಣ್ಣ ಕಿಮ್ "ಸೂಳೆ, ಅಲ್ಲೇ ನಿಂತ್ಕೊ," ಎಂದ. ಆತನ ಪಕ್ಕದಲ್ಲಿದ್ದ ೧೫ ವರ್ಷದ ಕೀಲೊ ಅವಳು ನಿಲ್ಲದ್ದನ್ನು ಕಂಡು ರಿವಾಲ್ವರ್ನ ಟ್ರಿಗರ್ ಅನ್ನು ಅವಸರದಲ್ಲಿ ಒತ್ತಿದ.ಅದು ಹೋಗಿ ಅವಳ ತೊಡೆಗೆ ಬಡಿಯಿತು. ಓ ಮೈ ಗಾಡ್ ಎಂದು ಕಿರುಚಿಕೊಂಡು ಮುಗ್ಗರಿಸಿ ಮಕ್ಕಳ ರೂಮಿನ ಬಾಗಿಲ ಬಳಿ ಬಿದ್ದಳು.<br /><br />ಒಳಗೆ ಮಕ್ಕಳು ಇದ್ಯಾವುದರ ಪರಿವೆ ಇಲ್ಲದೆ ಇನ್ನೂ ಗಾಢನಿದ್ರೆಯಲ್ಲಿದ್ದರು.<br /><br />....ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-81370223763340526882010-07-09T13:15:00.000-07:002010-07-09T16:04:50.730-07:00ಲಿಂಗಾಯತ ಸಮಾವೇಶದಲ್ಲಿ ಆನು "ಹೊರಗಣವನು"ನನ್ನ ಇನ್ನಿತರೆ ವ್ಯವಹಾರಗಳಲ್ಲಿ ವ್ಯಸ್ತನಾಗುವುದಕ್ಕಿಂತ ಮುಂಚೆ ಇದನ್ನು ಇಲ್ಲಿ ದಾಖಲಿಸೋಣ ಎಂದು ಬರೆಯುತ್ತಿದ್ದೇನೆ.<br /><br />ಕಳೆದ ವಾರ (ಜುಲೈ 3-4, 2010) ಕೆನಡಾದ ಟೊರಾಂಟೋದಲ್ಲಿ <a href="http://vsnaconvention.com/guestspeakers.html">ಲಿಂಗಾಯತ (ಮತ್ತು/ಅಥವ ವೀರಶೈವ) ಸಮುದಾಯದ ಸಮಾವೇಶ</a> ನಡೆಯಿತು. "ಉತ್ತರ ಅಮೆರಿಕದ ವೀರಶೈವ ಸಮಾಜ" ವರ್ಷಕ್ಕೊಮ್ಮೆ ನಡೆಸುವ ಸಮಾವೇಶ ಅದು. ಯಾವುದೇ ಜಾತಿಯ ಸಮಾವೇಶ ಅಥವ ಸಭೆಗಳಲ್ಲಿ ಪಾಲ್ಗೊಳ್ಳುವುದು ಜಾತ್ಯತೀತ ಮತ್ತು ಪ್ರಗತಿಪರ ನಿಲುವಿನ ಮತ್ತು ಬದ್ಧತೆಯ ಯಾರೊಬ್ಬರಿಗೂ ಕಷ್ಟ. ಅದು ತಪ್ಪೂ ಕೂಡ. ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡುತ್ತ, 12ನೇ ಶತಮಾನದಲ್ಲಿಯೆ ಜಾತ್ಯತೀತವಾದ (casteless) ಸಮಾಜವೊಂದನ್ನು ಕಟ್ಟುತ್ತ ಬೆಳೆದ ಸಮುದಾಯದವರ ಈಗಿನ ತಲೆಮಾರಿನ ಜನರ ಸಮಾವೇಶದಲ್ಲಿ ಪಾಲ್ಗೊಳ್ಳಲು ಯಾವುದೇ ಹಿಂಜರಿಕೆ ಇರಕೂಡದು. ಆದರೆ ವಾಸ್ತವ ಹಾಗೆ ಇಲ್ಲ ಎಂದು ಎಲ್ಲರಿಗೂ ಗೊತ್ತು. ಲಿಂಗಾಯತ ಸಮುದಾಯ ಎನ್ನುವುದು ಬೇರೆಯದೇ ಮತವೋ ಅಥವ ಅದೂ ಒಂದು ಜಾತಿಯೋ ಎನ್ನುವುದೇ ಬಹುಸಂಖ್ಯಾತರಿಗೆ ಸ್ಪಷ್ಟವಾಗಿಲ್ಲ. ಬಸವಣ್ಣಾದಿ ಶರಣರ ಆದರ್ಶದ ಹಿನ್ನೆಲೆಯಿಂದ ನೋಡಿದರೆ ಅದು ಅವೆರಡೂ ಆಗಬಾರದು. ಅದೊಂದು ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಯ, ಆಚರಣೆಯಲ್ಲಿ ತೊಡಗಿಕೊಂಡ ಜನಸಮೂಹವಾಗಬೇಕು. ವಾಸ್ತವ ಮತ್ತೊಮ್ಮೆ ಎದುರು ನಿಲ್ಲುತ್ತದೆ. ಯಾರಿಗೆ ಅಲ್ಲದಿದ್ದರೂ ಕರ್ನಾಟಕದ ಜನತೆಗೆ ವೈಚಾರಿಕ ಮಾರ್ಗದರ್ಶನ ನೀಡಬಹುದಾಗಿದ್ದ ಸಮುದಾಯವೊಂದು ಅಂತಹ ಅವಕಾಶವನ್ನು ಕಳೆದುಕೊಂಡಿದ್ದು ಮತ್ತು ಜವಾಬ್ದಾರಿ ಮರೆತದ್ದು ಚಾರಿತ್ರಿಕ ವ್ಯಂಗ್ಯ. ವಿಶಾಲವಾಗಬೇಕಾಗಿದ್ದದ್ದು ಮನುಷ್ಯನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯ ಸಂಚಿಗೆ ಬಲಿಯಾಗಿ ಸಂಕುಚಿತವಾದದ್ದಂತೂ ಮೂಲಚಳವಳಿಗೆ ಮತ್ತು ಹಿರಿಯರಿಗೆ ಬಗೆದ ದ್ರೋಹ.<br /><br />ಹೀಗಿದ್ದರೂ, ಒಂದಿಷ್ಟು ಆಗ್ರಹ ಮತ್ತು ಪ್ರೀತಿಗೆ, ಈ ಸಮುದಾಯದ ಕೆಲವರನ್ನಾದರೂ ಅನುಸಂಧಾನದಲ್ಲಿ ತೊಡಗಿಸಿಕೊಳ್ಳಬಹುದಾದ ಅವಕಾಶಕ್ಕಾಗಿ ಈ ಸಮಾವೇಶಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ವಚನ ಸಾಹಿತ್ಯದ ವಿದ್ವಾಂಸರಲ್ಲೊಬ್ಬರಾದ ರಮ್ಜಾನ್ ದರ್ಗಾ ಮುಖ್ಯ ಭಾಷಣಕಾರರಾಗಿ ಬಂದಿದ್ದರು. ನಾಡಿನ ಕೆಲವೇ ಪ್ರಗತಿಪರ ಮಠಾಧೀಶರರಲ್ಲಿ ಒಬ್ಬರಾದ ಚಿತ್ರದುರ್ಗದ ಶಿವಮೂರ್ತಿ ಶರಣರಿದ್ದರು. ಪ್ರಸ್ತಾಪಿಸಲು ಅನೇಕ ವಿಷಯಗಳಿದ್ದವು. ಕೊಟ್ಟಿರುವ ಅವಧಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದ್ದಿದ್ದರಿಂದ ಒಂದು ಸಣ್ಣ ಲೇಖನವನ್ನು ಬರೆದುಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಸಮಯಾಭಾವ ಮತ್ತು ಅದರ ಹಿಂದಿನ ದಿನಗಳ ಜೆಟ್ ಲ್ಯಾಗ್ನಿಂದಾಗಿ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಒಂದೇ ವಿಷಯದ ಮೇಲೆ ಯಾವುದೆ ಸಂಕೋಚ ಮತ್ತು ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದ ಹಿಂಜರಿಕೆಗಳಿಲ್ಲದೆ ಮಾತನಾಡಿದೆ. ಯಾರೊಬ್ಬರ ಜಾತಿಅಹಂ ಅನ್ನು ತೃಪ್ತಿಪಡಿಸಲು ನಾನಲ್ಲಿ ಹೋಗಿರಲಿಲ್ಲ. ಹಾಗೇನಾದರೂ ಆಗಿದ್ದಲ್ಲಿ ನನ್ನನ್ನೇ ನಾನು ಕ್ಷಮಿಸಿಕೊಳ್ಳುವ ಹಾಗಿರಲಿಲ್ಲ. ನನ್ನ ಇತರೆ ಪ್ರಗತಿಪರ ಮಿತ್ರರಿಗೆ ನನ್ನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಅಗದ ಹಾಗೆ ನಡೆದುಕೊಂಡೆ ಎಂದು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುತ್ತದೆ ಎಂದು ಭಾವಿಸುತ್ತೇನೆ. ಒಂದೆರಡು ಸಲ ಸಣ್ಣಪುಟ್ಟ ವಿವರಣೆ ಮತ್ತು ಪ್ರತಿರೋಧ ಬಂದರೂ, ಒಟ್ಟಾರೆಯಾಗಿ ಬಹಳಷ್ಟು ಜನ ನನ್ನ ಮಾತಿನ ಅರ್ಥ ಮತ್ತು ವಾಸ್ತವವನ್ನು ಗಮನಿಸಿದ್ದು ಗೊತ್ತಾಯಿತು. ಹಲವಾರು ಅಂತರ್ಜಾತಿ, ಅಂತರ್ಮತೀಯ, ಅಂತರ್ಜನಾಂಗ ಮದುವೆಗಳಾಗಿದ್ದ ಜನ ಅಲ್ಲಿದ್ದರು. ಅವರಿಗೆ ಅಪಥ್ಯವಾಗುವಂತಹುದೇನನ್ನೂ ನಾನು ಹೇಳಲಿಲ್ಲ. (ಸಾಧ್ಯವಾದಾಗ ಅದರ ಆಡಿಯೊ ಹಾಕುತ್ತೇನೆ.)<br /><br />ಪ್ರಜಾವಾಣಿಯ ವರದಿಗಾರರಾಗಿದ್ದ ಮತ್ತು ಈಗ ಟೊರಾಂಟೋದಲ್ಲಿಯೇ ವಾಸವಾಗಿದ್ದು ಅಲ್ಲಿಂದಲೇ ಸ್ಥಳೀಯ ಭಾರತೀಯ ಸಮುದಾಯದವರಿಗಾಗಿ ಒಂದು ಪತ್ರಿಕೆಯನ್ನೂ ಹೊರತರುತ್ತಿರುವ ನಾಗರಾಜ್ ಈ ಸಮಾವೇಶದ ಆಯೋಜಕರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟರು. ಬಸವಾನುಯಾಯಿಗಳು ಎಂದು ಎದೆತಟ್ಟಿ ಹೇಳಿಕೊಳ್ಳುವವರಿಗೆ ಬಹಳ ಸೂಕ್ತವಾದ ಮತ್ತು ಅವರು ಮಾಡಲೇಬೇಕಾದ ಸಲಹೆಗಳವು. ಅದನ್ನು ಅನುಮೋದಿಸುತ್ತ ನಾನೂ ಒಂದು ಮಾತು ಸೇರಿಸಿದೆ: ಬಾಗಿಲು ತೆರೆದಿಡಿ; ಮುಚ್ಚಿಡಬೇಡಿ. ಈ ಸಮುದಾಯ ಸಂಸ್ಥೆಯ ಮುಂದಿನ ನಡೆಗಳು ಗಮನಿಸಲು ಅರ್ಹ.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com2tag:blogger.com,1999:blog-8209630531750448655.post-41544348981026338312010-06-02T20:37:00.000-07:002010-06-02T21:07:50.353-07:00ಎದೆಯ ಕೂಗನು ಮೀರಿ... ಬಿಡುಗಡೆಯ ಚಿತ್ರಗಳು<a href="https://blogger.googleusercontent.com/img/b/R29vZ2xl/AVvXsEgse_2BMg_vVKuS3TtRgSi5iXvTnHuP6rBXjIQU5SvkyOxqiaU4PzatxJ4USz7gSrO22TM-VO98cUpr20uxlOb8kHqj1wSLbbYLh2vfX1g0ahzVBv3LN1Fsjiqoz6AUACFnq-dGt31Zrcw/s1600/DSC06654.JPG"><img style="float:left; margin:0 10px 10px 0;cursor:pointer; cursor:hand;width: 320px; height: 180px;" src="https://blogger.googleusercontent.com/img/b/R29vZ2xl/AVvXsEgse_2BMg_vVKuS3TtRgSi5iXvTnHuP6rBXjIQU5SvkyOxqiaU4PzatxJ4USz7gSrO22TM-VO98cUpr20uxlOb8kHqj1wSLbbYLh2vfX1g0ahzVBv3LN1Fsjiqoz6AUACFnq-dGt31Zrcw/s320/DSC06654.JPG" border="0" alt=""id="BLOGGER_PHOTO_ID_5478386738378376770" /></a><br />ಒಂದಷ್ಟು ಸಂವಾದ, ಚರ್ಚೆ, ತಮಾಷೆ ಮತ್ತು ಖುಷಿಯ ನಡುವೆ "ಎದೆಯ ಕೂಗನು ಮೀರಿ" ಕಳೆದ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮ ನಡೆಸಲು ಸಹಾಯ ಮಾಡಿದ ಮತ್ತು ನಡೆಸಿಕೊಟ್ಟ ಗೆಳೆಯ ಪೃಥ್ವಿ, ಅವರ ಮನೆಯವರು, ಪೃಥ್ವಿಯ ಬಾಲ್ಯದ ಗೆಳೆಯ ರಾಮಚಂದ್ರ ಗಂಗ, ಅಸಿತ ಮತ್ತು ಪ್ರಭುಶಂಕರ್ರವರಿಗೆ ನನ್ನ ಕೃತಜ್ಞತೆಗಳು.<br /><br />ಅಂದ ಹಾಗೆ ಪುಸ್ತಕದ ಮುಖಪುಟ ವಿನ್ಯಾಸ ಬಸವರಾಜುರವರದು. ಬೆಂಗಳೂರಿನಲ್ಲಿಯ ಅವರ ಕೆಲಸದ ಒತ್ತಡದಿಂದ ಅವರಿಗೆ ಬರಲಾಗಿರಲಿಲ್ಲ. ಅವರಿಗೂ ನನ್ನ ಧನ್ಯವಾದಗಳು ಮತ್ತು ಕೃತಜ್ಞತೆಗಳು.<br /><br />ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ. ಇವನ್ನು ತೆಗೆದ ಸತೀಶ್ ಶಿಲೆ ಮತ್ತು ಮೃತ್ಯುಂಜಯರವರಿಗೆ ಮತ್ತೊಮ್ಮೆ ಧನ್ಯವಾದಗಳು.<br /><br /><a href="https://blogger.googleusercontent.com/img/b/R29vZ2xl/AVvXsEgiaz_HJbCJ3A1Qrj8TDCOcO2SDas5S0Tr-xo7ZK6m8DhopiUDE1AOLXP7mxWHQAPEd90-Ogmlhl9sTmp59AbXB7I0hOqJN73RnjM_6OPHwb1VJJW9tHT45TyVWtOKrrEz4RlHuxbsRrF0/s1600/DSC06670.JPG"><img style="float:left; margin:0 10px 10px 0;cursor:pointer; cursor:hand;width: 320px; height: 180px;" src="https://blogger.googleusercontent.com/img/b/R29vZ2xl/AVvXsEgiaz_HJbCJ3A1Qrj8TDCOcO2SDas5S0Tr-xo7ZK6m8DhopiUDE1AOLXP7mxWHQAPEd90-Ogmlhl9sTmp59AbXB7I0hOqJN73RnjM_6OPHwb1VJJW9tHT45TyVWtOKrrEz4RlHuxbsRrF0/s320/DSC06670.JPG" border="0" alt=""id="BLOGGER_PHOTO_ID_5478388352575315602" /></a><br /><br /><a href="https://blogger.googleusercontent.com/img/b/R29vZ2xl/AVvXsEiDoyp3XJbeJGrz0KcnvgEa_7BIgUtfgnzoAnhloZQ_Q40RmDx9oiZ88sNR3mXNdq0lUmVGDLFFLf4eij688TFuE-WQuP6e6i54sIsEH4oubO4n3gzJWgwIdma2cccIwsFhoBsQDIMbT9A/s1600/DSC06680.JPG"><img style="float:left; margin:0 10px 10px 0;cursor:pointer; cursor:hand;width: 320px; height: 180px;" src="https://blogger.googleusercontent.com/img/b/R29vZ2xl/AVvXsEiDoyp3XJbeJGrz0KcnvgEa_7BIgUtfgnzoAnhloZQ_Q40RmDx9oiZ88sNR3mXNdq0lUmVGDLFFLf4eij688TFuE-WQuP6e6i54sIsEH4oubO4n3gzJWgwIdma2cccIwsFhoBsQDIMbT9A/s320/DSC06680.JPG" border="0" alt=""id="BLOGGER_PHOTO_ID_5478388360166032258" /></a><br /><br /><a href="https://blogger.googleusercontent.com/img/b/R29vZ2xl/AVvXsEhdbP0RYvNfKBnQ7o1nDzFkr6K5lXjs9stiLAmTnJ2cCBeMwPCBWiGgwCMj7WFuw6Nn048KqlzxnWm0DT7AqSeKi5KB7McjwS1xI44LrHtAMyW6ebS3BY0vJqLO9HkZHK9oWz1Tsh-N5Cw/s1600/DSC06401.JPG"><img style="float:left; margin:0 10px 10px 0;cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEhdbP0RYvNfKBnQ7o1nDzFkr6K5lXjs9stiLAmTnJ2cCBeMwPCBWiGgwCMj7WFuw6Nn048KqlzxnWm0DT7AqSeKi5KB7McjwS1xI44LrHtAMyW6ebS3BY0vJqLO9HkZHK9oWz1Tsh-N5Cw/s320/DSC06401.JPG" border="0" alt=""id="BLOGGER_PHOTO_ID_5478388368833315314" /></a><br /><br /><br /><a href="https://blogger.googleusercontent.com/img/b/R29vZ2xl/AVvXsEgfU_v5Ygr2crDMT5Un1lwGfKXe4rZSiCdMGWm6nGTtEAQ_JmOP1ajwldZ0vfdFWAoKS6ucTsomZiHqswmvq7Sb0fimm5c8dE9CshCeaknVl1rimm15AegO1Cdo7IdY4ErAQf0tgKXAiKE/s1600/DSC06688.JPG"><img style="float:left; margin:0 10px 10px 0;cursor:pointer; cursor:hand;width: 320px; height: 180px;" src="https://blogger.googleusercontent.com/img/b/R29vZ2xl/AVvXsEgfU_v5Ygr2crDMT5Un1lwGfKXe4rZSiCdMGWm6nGTtEAQ_JmOP1ajwldZ0vfdFWAoKS6ucTsomZiHqswmvq7Sb0fimm5c8dE9CshCeaknVl1rimm15AegO1Cdo7IdY4ErAQf0tgKXAiKE/s320/DSC06688.JPG" border="0" alt=""id="BLOGGER_PHOTO_ID_5478389750218894770" /></a><br /><br /><a href="https://blogger.googleusercontent.com/img/b/R29vZ2xl/AVvXsEhHNnzTHukhFM5lB0ASzt0SqBhtCGw_ccuKgtjJb7SvKnNByJJy5NetHf98c7Irg-dx3Mh5S-qjFrSTFnr4DpORqowYyKErvg0QJ8KJpdVZ6Dd9QNLU5JuJSwN6y2ovC8xU_NPDzbs9P48/<br />600/DSC06695.JPG"><img style="float:left; margin:0 10px 10px 0;cursor:pointer; cursor:hand;width: 320px; height: 180px;" src="https://blogger.googleusercontent.com/img/b/R29vZ2xl/AVvXsEhHNnzTHukhFM5lB0ASzt0SqBhtCGw_ccuKgtjJb7SvKnNByJJy5NetHf98c7Irg-dx3Mh5S-qjFrSTFnr4DpORqowYyKErvg0QJ8KJpdVZ6Dd9QNLU5JuJSwN6y2ovC8xU_NPDzbs9P48/s320/DSC06695.JPG" border="0" alt=""id="BLOGGER_PHOTO_ID_5478388379538214322" /></a><br /><br /><a href="https://blogger.googleusercontent.com/img/b/R29vZ2xl/AVvXsEisghEZetFksgV6w7OhONFB_oRbxEFjg0tlI5GyZOMrVVP1d41Z9W2TTkHHw-57yKeGDZ_Ng0u7QIy4wLM8I-q6Wk80fhEfhXvOrZuBSn_Ye4H82_QQkfuzNM834IHwJOsUxNmti0oFKZg/s1600/DSC06405.JPG"><img style="cursor:pointer; cursor:hand;width: 320px; height: 240px;" src="https://blogger.googleusercontent.com/img/b/R29vZ2xl/AVvXsEisghEZetFksgV6w7OhONFB_oRbxEFjg0tlI5GyZOMrVVP1d41Z9W2TTkHHw-57yKeGDZ_Ng0u7QIy4wLM8I-q6Wk80fhEfhXvOrZuBSn_Ye4H82_QQkfuzNM834IHwJOsUxNmti0oFKZg/s320/DSC06405.JPG" border="0" alt=""id="BLOGGER_PHOTO_ID_5478388388318113218" /></a><br /><br /><br />ಇದು ಪ್ರಜಾವಾಣಿಯಲ್ಲಿ ಬಂದ ವರದಿ:<br /><br /><a href="https://blogger.googleusercontent.com/img/b/R29vZ2xl/AVvXsEgpci0CGq7hg7LnOUXDnV75zZxNdq0YyS47fe4XbUfso_3czg847bg5npg5Sq06wnYZ3FFSXnX-bHySO1_4nMf0lqTrIoeJ6hKuCukq4WHGrSMb5ieWSZRx930CsJWD50pUFD33ho3K8lw/s1600/prajavani.jpg"><img style="cursor:pointer; cursor:hand;width: 243px; height: 320px;" src="https://blogger.googleusercontent.com/img/b/R29vZ2xl/AVvXsEgpci0CGq7hg7LnOUXDnV75zZxNdq0YyS47fe4XbUfso_3czg847bg5npg5Sq06wnYZ3FFSXnX-bHySO1_4nMf0lqTrIoeJ6hKuCukq4WHGrSMb5ieWSZRx930CsJWD50pUFD33ho3K8lw/s320/prajavani.jpg" border="0" alt=""id="BLOGGER_PHOTO_ID_5478393611090587346" /></a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-41136315382257066112010-05-26T18:12:00.000-07:002010-05-27T06:48:29.703-07:00ಎದೆಯ ಕೂಗನು ಮೀರಿ...: ಮೈಸೂರಿನಲ್ಲಿ ಬಿಡುಗಡೆಸ್ನೇಹಿತರೆ,<br /><br />ಮೊದಲು <a href="http://thatskannada.oneindia.in/nri/novel/call_of_voice/index.html">ದಟ್ಸ್ಕನ್ನಡದಲ್ಲಿ ಧಾರಾವಾಹಿಯಾಗಿ</a> ಪ್ರಕಟಗೊಂಡು, ನಂತರ ವಿಕ್ರಾಂತ ಕರ್ನಾಟಕದಲ್ಲೂ ಧಾರಾವಾಹಿಯಾಗಿ ಪ್ರಕಟವಾಗಿದ್ದ ಅನುವಾದಿತ ಕಾದಂಬರಿ "ಎದೆಯ ಕೂಗನು ಮೀರಿ..." ಇದೇ ಭಾನುವಾರ ಸಂಜೆ ೫ ಗಂಟೆಗೆ ಮೈಸೂರಿನಲ್ಲಿ ಪುಸ್ತಕರೂಪದಲ್ಲಿ ಬಿಡುಗಡೆಯಾಗಲಿದೆ. ಕಾದಂಬರಿಯ ಮೂಲಕರ್ತೃ ಅಸಿತ ಪ್ರಭುಶಂಕರ ಸಹ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ವಿವರಗಳು ಹೀಗಿವೆ:<br /><br />ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ: <br />ಡಾ. ಇ. ರತಿರಾವ್ (ನಿವೃತ್ತ ವಿಜ್ಞಾನಿ)<br /><br />ಪುಸ್ತಕದ ಕುರಿತು:<br />ಡಾ. ಆರ್. ಇಂದಿರಾ (ಸಮಾಜಶಾಸ್ತ್ರಜ್ಞೆ)<br /><br />ಉಪಸ್ಥಿತಿ:<br /><a href="http://thatskannada.oneindia.in/literature/book/2006/160206ravireddy.html">ಅಸಿತ ಪ್ರಭುಶಂಕರ</a> (ಕಾದಂಬರಿಯ ಮೂಲಕರ್ತೃ)<br />ರವಿ ಕೃಷ್ಣಾ ರೆಡ್ಡಿ (ಅನುವಾದಕ)<br /><br />ಸ್ಥಳ: ಮನೆಯಂಗಳ, ಕಲಾಮಂದಿರ, ಮೈಸೂರು<br />ದಿನಾಂಕ: 30-5-2010, ಭಾನುವಾರ<br />ಸಮಯ: ಸಂಜೆ 5 ಗಂಟೆಗೆ<br /><br />ಪ್ರಕಾಶಕರು: ಮೌಲ್ಯಾಗ್ರಹ ಪ್ರಕಾಶನ, ಬೆಂಗಳೂರು - 99<br /><br />ಈ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ. <br /><br />ಹೆಚ್ಚಿನ ವಿವರಗಳು ಬೇಕಿದ್ದಲ್ಲಿ, ದಯವಿಟ್ಟು ಸಂಪರ್ಕಿಸಿ: ೯೬೮೬೦೮೦೦೦೫ (ಸದ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ; ಇದು ನನ್ನ ಮೊಬೈಲ್ ಸಂಖ್ಯೆ.)<br /><br /><a href="https://blogger.googleusercontent.com/img/b/R29vZ2xl/AVvXsEg7TCM9JFRiZdEEjc7EcKOINDeNjtspHsspeY1FsGW5SDuXKtxQPLWX6YcTyp47hcKUpEMPQFtH_iF8OTAufZf3_vZRx0limDnho6oWfiP6-qYIgcVTccGKm9djS0cJ0w5dw4H9c7sJj5k/s1600/edeyakoogu-release-invitation.jpg"><img style="float:left; margin:0 10px 10px 0;cursor:pointer; cursor:hand;width: 205px; height: 320px;" src="https://blogger.googleusercontent.com/img/b/R29vZ2xl/AVvXsEg7TCM9JFRiZdEEjc7EcKOINDeNjtspHsspeY1FsGW5SDuXKtxQPLWX6YcTyp47hcKUpEMPQFtH_iF8OTAufZf3_vZRx0limDnho6oWfiP6-qYIgcVTccGKm9djS0cJ0w5dw4H9c7sJj5k/s320/edeyakoogu-release-invitation.jpg" border="0" alt=""id="BLOGGER_PHOTO_ID_5475944824720458482" /></a>ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-18470283475364840942010-02-22T09:53:00.000-08:002010-02-22T10:24:26.010-08:00K.R. ಶ್ರೀಧರ್, ಬ್ಲೂಮ್ಬಾಕ್ಸ್, ಸಗಣಿ, ಹಳ್ಳಿಯಲ್ಲಿಯೆ ವಿದ್ಯುತ್...K.R. ಶ್ರೀಧರ್ ಮತ್ತು ಬ್ಲೂಮ್ಬಾಕ್ಸ್, ಈ ಎರಡು ಹೆಸರುಗಳು ಮುಂದಿನ ದಿನಗಳಲ್ಲಿ ನಿಮಗೆ ಆಗಾಗ ಕಿವಿಗೆ ಬೀಳಬಹುದು; Clean, Green, ಮತ್ತು Cheap Energy ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಒಂದಾಗಿದ್ದರೆ. ಕೆಳಗಿನ ವಿಡಿಯೊ ನೋಡಿ.<br /><br /><embed src='http://cnettv.cnet.com/av/video/cbsnews/atlantis2/player-dest.swf' FlashVars='linkUrl=http://www.cbsnews.com/video/watch/?id=6228923n&releaseURL=http://cnettv.cnet.com/av/video/cbsnews/atlantis2/player-dest.swf&videoId=50083943&partner=news&vert=News&si=254&autoPlayVid=false&name=cbsPlayer&allowScriptAccess=always&wmode=transparent&embedded=y&scale=noscale&rv=n&salign=tl' allowFullScreen='true' width='425' height='324' type='application/x-shockwave-flash' pluginspage='http://www.macromedia.com/go/getflashplayer'></embed><br /><br />ಈ ತಂತ್ರಜ್ಞಾನದ ಪರ-ವಿರುದ್ಧದ ವಾದಗಳನ್ನು ಓದಲು ಈ ಕೆಳಗಿನ ಲಿಂಕ್ನಲ್ಲಿರುವ ಕಾಮೆಂಟ್ಸ್ ವಿಭಾಗಕ್ಕೆ ಹೋಗಿ:<br /><a href="http://news.cnet.com/8301-11128_3-10457410-54.html">http://news.cnet.com/8301-11128_3-10457410-54.html</a><br /><br />ಈ ತಂತ್ರಜ್ಞಾನ ಮತ್ತಷ್ಟು mature ಆದಮೇಲೆ ಮತ್ತು mass production ಆರಂಭವಾದ ಮೇಲೆ ಈ generatorಗಳು ಇನ್ನೂ ಅಗ್ಗವಾಗಬಹುದು. ಬಹುಶಃ ಹತ್ತು-ಹದಿನೈದು ಲಕ್ಷಕ್ಕೆಲ್ಲ ನಮ್ಮ ಹಳ್ಳಿಗಳು ಗ್ರಿಡ್ನ ಸಹಾಯವಿಲ್ಲದೆ ತಮ್ಮದೆ ಊರಿನಲ್ಲಿ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. Biomass ಇಂಧನವನ್ನೂ ಬಳಸಬಹುದು ಎಂದು ಹೇಳುತ್ತಿರುವುದರಿಂದ ಸಗಣಿಯ ಗೋಬರ್ ಗ್ಯಾಸ್ ಯಾಕಾಗುವುದಿಲ್ಲ? ಹಾಗೇನಾದರೂ ಆದರೆ, ಹಳ್ಳಿಗಳು ವಿದ್ಯುತ್ನ ವಿಚಾರದಲ್ಲಿ ಪೂರ್ಣವಾಗಿ ಸ್ವಾವಲಂಬಿಯಾಗಬಹುದು (ಜನರೇಟರ್ನ ಹೊರತಾಗಿ). ಗೋಬರ್ ಗ್ಯಾಸ್ ಇಲ್ಲದ ಕಡೆ ಮತ್ತು ಪಟ್ಟಣಗಳಲ್ಲಿ CNG/LPG ಬಳಸಬಹುದು. ನಾನಂತೂ ಇದನ್ನು ನೋಡಿದ ಸಮಯದಿಂದ excite ಆಗಿದ್ದೇನೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇಂತಹುದೆ ಹೊಸಹೊಸ ತಂತ್ರಜ್ಞಾನಗಳನ್ನು ನಾವು ನೋಡಲಿದ್ದೇವೆ. ಕೊನೆಗೆ ಯಾವುದು ಯಶಸ್ವಿಯಾಗಲಿದೆಯೊ ನೋಡಬೇಕು.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-10982547522168361932010-02-10T10:50:00.000-08:002010-02-10T12:29:15.985-08:00ಬಿಟಿ ಬದನೆ - ಒಂದೆರಡು ಉತ್ತರಗಳು...ಪ್ರಜಾಪ್ರಭುತ್ವ. ಅದರ ಮುಂದೆ ನನಗೆ ಮಿಕ್ಕೆಲ್ಲವೂ ಚಿಕ್ಕದೆ. ಜೈರಾಮ್ ರಮೇಶ್ ಸದ್ಯಕ್ಕೆ ಭಾರತದಲ್ಲಿ ಬಿಟಿ ಬದನೆ ಇಲ್ಲ ಎಂದಿದ್ದಾರೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ಬಹುಸಂಖ್ಯಾತ ಜನರ ವಿರೋಧವಿದ್ದದ್ದೆ ಪ್ರಮುಖ ಕಾರಣ ಎಂದು ನನ್ನ ಭಾವನೆ. ಮಾತುಕತೆ ಮತ್ತು consensus ಇಲ್ಲದ ಪ್ರಜಾಪ್ರಭುತ್ವ ಒಳ್ಳೆಯದಲ್ಲ. ಹಾಗಾಗಿ ಬಿಟಿ ಬದನೆ ನಿಷೇಧದಿಂದ ನನಗೆ ತೀರ ಬೇಸರವೇನೂ ಇಲ್ಲ. ಮತ್ತು GE ಮತ್ತು ಜೈವಿಕ ಸಂಶೋಧನೆಗಳ ಬಾಗಿಲು ಇದರಿಂದೇನೂ ಮುಚ್ಚಿಲ್ಲ. ಜನ ಹೆಚ್ಚುಹೆಚ್ಚು ತಿಳಿದುಕೊಂಡಂತೆ ಅಕಾರಣ ಭಯಗಳೂ ಕಮ್ಮಿಯಾಗುತ್ತ ಹೋಗುತ್ತದೆ.<br /><br />ನನಗೆ ಅನ್ನಿಸಿದ ಹಾಗೆ ಬಹಳ ಜನ 200-300 ಪದಗಳ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡುಬಿಡುತ್ತಾರೆ. ಇಂತಹ ಸಣ್ಣ ಲೇಖನ-ವರದಿಗಳು ಸಂಪೂರ್ಣವಾದ ಮತ್ತು ವಸ್ತುನಿಷ್ಟವಾದ ಮಾಹಿತಿ ಹೊಂದಿರುವುದು ಅಪರೂಪ. ಅವು ಲೇಖನವಾಗಿ ಓದುಗರ ಗಮನ ಸೆಳೆಯಬೇಕಾದರೆ ಅವು ಸಾಕಷ್ಟು ಘೋಷಣಾತ್ಮಕವಾಗಿ, ಸಂವೇದನಾತ್ಮಕವಾಗಿ ಇರಬೇಕು. ಅಪಾಯ ಇರುವುದು ಅಲ್ಲಿಯೆ. ಅಷ್ಟರಿಂದಲೆ ರೂಪಿಸಿಕೊಳ್ಳುವ ಅಭಿಪ್ರಾಯ ಯಾರಿಗೂ ಒಳ್ಳೆಯದು ಮಾಡುವುದಿಲ್ಲ.<br /><br /><a href="http://amerikadimdaravi.blogspot.com/2010/02/genetic-engineering.html">ಬಿಟಿ ಬದನೆ ಬಗ್ಗೆ ಬರೆದ ಲೇಖನಕ್ಕೆ</a> ಇಲ್ಲಿ ಎರಡು ಪ್ರಶ್ನೆ-ಪ್ರತಿಕ್ರಿಯೆಗಳು ಬಂದಿವೆ. <a href="http://churumuri.wordpress.com/2010/02/07/is-the-bt-brinjal-debate-really-so-cut-and-dried/">churumuri.com</a> ಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಅಭಿಪ್ರಾಯಗಳು ಬಂದಿವೆ. ಇಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಮೂಲವಾಗಿಟ್ಟುಕೊಂಡು ಒಂದೆರಡು ಸೃಷ್ಟೀಕರಣ ಕೊಡುತ್ತೇನೆ.<br /><br /><a href="http://sallaap.blogspot.com">ಸಲ್ಲಾಪ</a> ಬ್ಲಾಗಿನ ಸುನಾಥ ಹೀಗೆ ಬರೆದಿದ್ದಾರೆ:<blockquote>ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದು ಕಾರಣವಿದೆ. ಅದು ಸಂಪೂರ್ಣವಾಗಿ ವ್ಯಾಪಾರೀ ಕಾರಣ. ಸಾಂಪ್ರದಾಯಕ ಬೆಳೆಗಳ ಬೀಜಗಳನ್ನು ನಮ್ಮವರೇ ಹಿಡಿದಿಟ್ಟುಕೊಳ್ಳಬಹುದು, ಆದರೆ ಬಿಟಿ ಬೆಳೆಗಳನ್ನು ಒಮ್ಮೆ ಬೆಳೆದರೆ ಸಾಕು, ನಿರಂತರವಾಗಿ ಈ ಬಿಟಿ ಕಂಪನಿಗಳನ್ನು ಬೀಜಗಳಿಗಾಗಿ ಅವಲಂಬಿಸಬೇಕಾಗುತ್ತದೆ. ಈ ಕಂಪನಿಗಳು ಕೆಲ ಕಾಲಾನಂತರ ಅಂದರೆ ನಮ್ಮ ಸಾಂಪ್ರದಾಯಕ ಕೃಷಿಯ ನಷ್ಟದ ನಂತರ ನಮ್ಮನ್ನು ಶೋಷಿಸಲು ಪ್ರಾರಂಭಿಸುವರು ಎಂದು ಹೇಳಲಾಗುತ್ತಿದೆ. ಇದು ಸರಿ ಇರಬಹುದೆ?</blockquote>ನನ್ನ ಪ್ರಕಾರ ಇದು ರೈತನಿಗೆ ಗಂಭೀರ ಸಮಸ್ಯೆಯೆ ಅಲ್ಲ. ನನ್ನ ಅನುಭವದ ಪ್ರಕಾರ, ಇಂದು ಬೆಳೆಯುವ ಬಹುಪಾಲು ಕಮರ್ಷಿಯಲ್ ಬೆಳೆಗಳನ್ನು ಬೆಳೆಯಲು ರೈತ ತನ್ನ ಬೀಜಗಳನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಆತ ಒಳ್ಳೆಯ ಗುಣಮಟ್ಟದ ಬೀಜಗಳನ್ನು ಮಾರುವ ಕಂಪನಿಗಳಿಂದ ಬೀಜಗಳ ಪಾಕೆಟ್/ಚೀಲಗಳನ್ನು ಕೊಳ್ಳುತ್ತಾನೆ. ಬೆರಕೆ ಆಗಿರದ, ಒಂದೆ ಗುಣಮಟ್ಟ ಇರುವ ಬೀಜಗಳಷ್ಟೆ ರೈತನಿಗೆ ಮುಖ್ಯ. ತಾನೆ ಬೀಜಗಳನ್ನು ಸಂಸ್ಕರಿಸಿಕೊಳ್ಳುವುದು ಸ್ವಲ್ಪ ತ್ರಾಸದಾಯಕ ಕೆಲಸ ಮತ್ತು ಅದು ಗುಣಮಟ್ಟದ ಖಾತ್ರಿ ಕೊಡುವುದಿಲ್ಲ. ತಾನೆ ಸಂಸ್ಕರಿಸಿಕೊಂಡ ಬೀಜಗಳಿಂದಾಗಿ ಇಳುವರಿ ಕಡಿಮೆ ಮಾಡಿಕೊಳ್ಳುವುದನ್ನು ಕಮರ್ಷಿಯಲ್ ಬೆಳೆಗಳ ಬೆಳೆಗಾರ ಇಷ್ಟಪಡುವುದಿಲ್ಲ.<br /><br />(ರಾಗಿ-ಜೋಳದಂತಹ ಕೆಲವೆ ಮಳೆಯಾಧಾರಿತ ಬೆಳೆಗಳಿಗೆ ರೈತ ತನ್ನಲ್ಲಿರುವ ಬೀಜಗಳನ್ನು ಉಪಯೋಗಿಸುತ್ತಾನೆ. ಈ ಬೆಳೆಗಳು ನೀರಾವರಿ ಬೆಳೆಗಳಲ್ಲ. ಮತ್ತು ಈ ಬೆಳೆಗಳಿಗೆ inputs ಸಹ ಕಡಿಮೆ.)<br /><br />ಇನ್ನು ಶೋಷಣೆಯ ಪ್ರಶ್ನೆ: ತನಗೆ ಬೇಕಾದದ್ದನ್ನು ಬೆಳೆಯಲು ರೈತ ಸ್ವತಂತ್ರ. ಇಂತಹ ಬೀಜ/ಬೆಳೆ ಬೆಳೆಯುವುದು ಬೇಡ ಎಂದು ಆತ ಅಂದುಕೊಂಡರೆ ಯಾರೂ ಆತನನ್ನು ಬಲಾತ್ಕರಿಸಲಾಗದು. ಇನ್ನು ಮೊನ್ಸಾಂಟೊದಂತಹ ಕಂಪನಿಗಳು ಬೆಲೆ ಹೆಚ್ಚಿಸುವುದೊ ಇನ್ನೆಂತಹುದೊ ಶೋಷಣೆ ಆರಂಭಿಸಿದರೆ ಸರ್ಕಾರ ಒಂದು ಕಾಯ್ದೆ/ತಿದ್ದುಪಡಿ ತಂದರೆ ಸಾಕು. ಇಂತಹ ಕಂಪನಿಗಳ ವಿರುದ್ಧ ಸರ್ಕಾರಕ್ಕಿಂತ, ನೆಲದ ಕಾನೂನಿಗಿಂತ ಬಲಶಾಲಿಯಾದ ಆಯುಧ ಇನ್ನೊಂದಿಲ್ಲ. ಸರ್ಕಾರ ಯಾರದು? ಜನರದ್ದೆ. (ಕನಿಷ್ಠ, ಜನರ ಪಾತ್ರವಿರುವ ಉತ್ತಮ ಪ್ರಜಾಪ್ರಭುತ್ವಗಳಲ್ಲಿ). ಹಿಂದೆ ಹಲವಾರು MNCಗಳನ್ನು ನಮ್ಮ ನೆಲದಿಂದ ಉಚ್ಚಾಟಿಸಲಾಗಿದೆ. ಕಂಪನಿಗಳು ಜನವಿರೋಧಿ ಕೆಲಸ ಮಾಡಿದರೆ ಸರ್ಕಾರವೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಹಾಗಾಗಿ, ಇವೆಲ್ಲ clerical ಹಂತದಲ್ಲಿಯೆ ನಿವಾರಿಸಬಹುದಾದ ಸಮಸ್ಯೆಗಳು. (ಅದು ಹೇಳಿದಷ್ಟು ಸುಲಭವಲ್ಲ ಎಂದು ಗೊತ್ತು. ಆದರೆ ಅಸಾಧ್ಯವಲ್ಲವಲ್ಲ.)<br /><br /><a href="http://hudugumana.blogspot.com">ಹುಡುಗುಮನ</a> ಬ್ಲಾಗಿನ ಶ್ರೀಹರ್ಷ ಸಾಲಿಮಠರ ಅಬಿಪ್ರಾಯ ಇದು:<blockquote>ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ಕೊಳ್ಳುವ ಅವಶ್ಯಕತೆಯಿಲ್ಲ. ಬದನೆಯ ಬೀಜಗಳ ಮರುಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. <br />ಇಲ್ಲಿ ಎರಡು ಮುಖ್ಯ ಅಂಶಗಳಿವೆ,<br />೧. ಒಮ್ಮೆ ಜೀನನ್ನು ಬದಲಾಯಿಸಿ ಪ್ರಕೃತಿಯಲ್ಲಿ ಬಿಟ್ಟರೆ ಅದು ಮುಂದೆ ಅನಿಯಂತ್ರಿತವಾಗುತ್ತದೆ. ರಸಾಯನಿಕ ಗೊಬ್ಬರವನ್ನು ಹಾಕುವುದು ನಿಲ್ಲಿಸಿದರೆ ರಸಾಯನಿಕ ಗೊಬ್ಬರದ ಹಾನಿಯನ್ನು ತಡೆಯಬಹುದು. ಜೀನ್ ಬದಲಾದರೆ ಅದು ಶಾಶ್ವತ! ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಎಲ್ಲೇ ಚಿಕ್ಕ ತಪ್ಪಾಗಿದ್ದರೂ ಅದನ್ನು ಸರಿಪಡಿಸುವ ಪ್ರಮೇಯವೇ ಇರುವುದಿಲ್ಲ. It's a permanent blunder!<br />೨. ಒಂದೇ ಜಾತಿಯ ಬೇರೆ ಬೇರೆ ತಳಿಯ ಗಿಡಗಳ ನಡುವೆ ಜೀನ್ ಬದಲಾವಣೆ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾ ಅಥವಾ ಪ್ರಾಣಿ ಸಸ್ಯಗಳ ನಡುವೆ ಜೀನ್ ಬದಲಾವಣೆ ಎಷ್ಟರ ಮಟ್ಟಿಗೆ ಸರಿ? Ethically how far it is correct? ಎಂಬುದೂ ಪ್ರಶ್ನೆ.</blockquote><br />ನಾನು ಇತ್ತೀಚೆಗೆ ಓದಿದ ಎರಡು ಪುಸ್ತಕಗಳನ್ನು ನೀವೂ ಓದಿದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಥವ ಇವು ಅನಗತ್ಯ ಭಯಗಳು ಎನಿಸಬಹುದು. ಮೇಲೆ ಹೇಳಿದಂತೆ ಸಣ್ಣಪುಟ್ಟ ಲೇಖನಗಳು ಅಥವ ನನ್ನ ಒಂದೆರಡು ಪ್ಯಾರಾದ ವಿವರಣೆಗಳು ವಿಷಯವನ್ನು ಸಮಗ್ರವಾಗಿ ತಿಳಿಸಲು ಸಹಾಯ ಮಾಡುವುದಿಲ್ಲ. ಮೊದಲ ಪುಸ್ತಕ, ರಿಚರ್ಡ್ ಡಾಕಿನ್ಸ್ನ <a href="http://www.amazon.com/Greatest-Show-Earth-Evidence-Evolution/dp/1416594787">"The Greatest Show on Earth: The Evidence for Evolution"</a>. ಎರಡನೆಯದು, ನಾನು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದ ಸ್ಟ್ಯುವರ್ಟ್ ಬ್ರಾಂಡ್ನ <a href="http://www.amazon.com/Whole-Earth-Discipline-Ecopragmatist-Manifesto/dp/0670021210">"Whole Earth Discipline: An Ecopragmatist Manifesto"</a>.<br /><br />ಬಿಟಿ ಬದನೆ ವಿಷಯ ಏನೇ ಇರಲಿ, GM/GE ಬೆಳೆಗಳಂತೂ ಹೆಚ್ಚಲಿವೆ. ನನ್ನ ಸಣ್ಣಪುಟ್ಟ ಓದಿನಿಂದ ಸದ್ಯಕ್ಕೆ ನನಗೆ ಕಾಣಿಸುತ್ತಿರುವುದು ಇದು. ಮುಂದಿನ ಐದು-ಹತ್ತು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಜನರ ಊಟದಲ್ಲಿ ಒಂದು ತರಕಾರಿ/ಬೇಳೆ/ಅಕ್ಕಿ/ಹಣ್ಣಾದರೂ GM ಮೂಲದ್ದಾಗಿರುತ್ತದೆ. ಇದೇ ಸರಿ ಎಂದಾಗಲಿ ಅಥವ ಆಗಿಯೇ ತೀರುತ್ತದೆ ಎಂದಾಗಲಿ ಘೋಷಿಸಲಾರೆ. ಮಿಕ್ಕ ವಿಷಯ/ಪುಸ್ತಕ/ಸಂದರ್ಭಗಳ ಸಂಪರ್ಕಕ್ಕೆ ಬಂದಾಗ ಈ ಅಭಿಪ್ರಾಯಗಳು ಬದಲಾಗಬಹುದು. ಸದ್ಯಕ್ಕಿಲ್ಲ.<br /><br />Stewart Brand ಎರಡು ದಿನಗಳ ಹಿಂದೆ ಬೇ ಏರಿಯಾದ KQED ರೇಡಿಯೋದ Forum ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಅದರ ಧ್ವನಿಮುದ್ರಿಕೆ ಕೇಳಲು ಇಲ್ಲಿ ಲಭ್ಯವಿದೆ. <a href="http://www.kqed.org/epArchive/R201002081000">http://www.kqed.org/epArchive/R201002081000</a>. ಆತ ವಂದನಾ ಶಿವ ಬಗ್ಗೆ ಸ್ವಲ್ಪ ತೀಕ್ಷ್ಣವಾದ ಕಾಮೆಂಟ್ ಮಾಡುತ್ತಾನೆ. "ಮಾತಿನ ಮಲ್ಲಿ/ವಾಚಾಳಿ (loquacious)," ಎನ್ನುತ್ತಾನೆ! ಮಾನವಹಕ್ಕುಗಳ ಪರ ಹೋರಾಡುವ ವಂದನಾ ಶಿವ ಬಗ್ಗೆ ನನಗೆ ಗೌರವವೆ ಇದೆ. ಆದರೆ ಆಕೆ ಎತ್ತುವ ಎಲ್ಲಾ ವಿಚಾರಗಳಿಗೂ ಸಮ್ಮತ ಇರಲೇಬೇಕು ಎಂದೇನೂ ಇಲ್ಲ. ಇದು ಅಂತಹುದೊಂದು ವಿಷಯ. ನಾವು ಜೀವಿಸುತ್ತಿರುವ ಅರ್ಥವ್ಯವಸ್ಥೆ ವಿಭಿನ್ನವಾದದ್ದು. ಹಕ್ಕುರಕ್ಷಣೆ ಮುಖ್ಯ. ಹಾಗೆಂದು ಆಚೆ ಹೋಗದ ಹಾಗೆ ಗೋಡೆ ಕಟ್ಟಿಕೊಳ್ಳಬೇಕಿಲ್ಲ. ಇದು ಜಂಗಮ ಪ್ರಪಂಚ.<br /><br /><a href="http://churumuri.wordpress.com/2010/02/07/is-the-bt-brinjal-debate-really-so-cut-and-dried/">ಚುರುಮುರಿಯಲ್ಲಿ</a> ಓದುಗರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದಾರೆ. (ಕೊನೆಯಲ್ಲಿ) ಸ್ವಲ್ಪ ಅತಿರೇಕದ ಮಾತು ಎನ್ನಿಸಿದರೂ ಗಮನಿಸಲು ಅರ್ಹವಾದ ವಿಡಿಯೊ: <object width="425" height="344"><param name="movie" value="http://www.youtube.com/v/tIvNopv9Pa8&color1=0xb1b1b1&color2=0xcfcfcf&hl=en_US&feature=player_embedded&fs=1"></param><param name="allowFullScreen" value="true"></param><param name="allowScriptAccess" value="always"></param><embed src="http://www.youtube.com/v/tIvNopv9Pa8&color1=0xb1b1b1&color2=0xcfcfcf&hl=en_US&feature=player_embedded&fs=1" type="application/x-shockwave-flash" allowfullscreen="true" allowScriptAccess="always" width="425" height="344"></embed></object><br /><br />ಹಾಗೆಯೆ, ಈ ವಿಚಾರದ ಬಗ್ಗೆ ಹಲವಾರು ಕಡೆ ಓದುಗರು Food Inc. ಡಾಕ್ಯುಮೆಂಟರಿಯನ್ನು ಉಲ್ಲೇಖಿಸುತ್ತಾರೆ. ನಾನು ಇದನ್ನು ಸುಮಾರು ಆರು ತಿಂಗಳ ಹಿಂದೆಯೆ ನೋಡಿದ್ದೆ. ಸಾವಯವ ತರಕಾರಿಗಳನ್ನು ಕೊಳ್ಳುವುದು ಹೆಚ್ಚುಮಾಡಿದ್ದೆ ನಾನು ಇದು ಮತ್ತು ಇಂತಹುದೆ ಹಲವಾರು ಡಾಕ್ಯುಮೆಂಟರಿಗಳನ್ನು ನೋಡಿದ ಮೇಲೆ. ಆದರೆ ಅಲ್ಲಿ ಬರುವ ಮೊನ್ಸಾಂಟೊ ಬಗ್ಗೆ ನನಗೆ ಭಯ ಇಲ್ಲ. MNC ಗಳು ಪ್ರಜಾಡಳಿತದ ಸರ್ಕಾರಗಳಿಗಿಂತ ಬಲಶಾಲಿಯಲ್ಲ. ಅಮೇರಿಕದ ರೈತರನ್ನು ಕೋರ್ಟಿಗೆಳೆದಂತೆ ಭಾರತದ ಸಣ್ಣಪುಟ್ಟ ರೈತರನ್ನು ಕೋರ್ಟಿಗೆಳೆಯುವುದು ಸುಲಭವಲ್ಲ. ಸಾಧ್ಯವೂ ಅಲ್ಲ.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-72046686280711395902010-02-05T14:21:00.000-08:002010-02-08T13:41:20.141-08:00BT brinjal : Why it shouldn't be banned?The debate for and against BT brinjal cultivation is on in full swing in Karnataka and also in some other parts of the country. With the Karnataka CM announcing that BT brinjal will not be allowed in the state and that it will be conveyed to the Centre, the opposing group has scored a big win. A good deal of people have joined this anti-BT bandwagon and are spreading everything that they can think of in the name of nature and farmers’ interests, without considering the scientific facts and environmental costs of conventional agriculture and its burden on farmers.<br /><br />By considering some key facts, this whole episode can be termed anti-democratic, anti-scientific, and ignorant blabbering. Even though it sounds like it is pro-farmers’, it is against the interest of farmers. Karnataka’s ryot leaders are opposing BT cultivation either because of their ideological opposition to globalization and corporatization of agriculture, or they falsely think it is against the interests of farming community. By doing so they are pushing the farmers to the same old labour intensive, pesticide and chemical fertilizer based, highly expensive, and lesser or no-profit occupation. Also, they may be least aware of the possibilities of this new knowledge field and its positive implications on farming. Today’s farmers are more informed and are exposed to choices. It is they who should decide what they want to plant and what not, depending on the supply-demand of modern economics, rather these self-proclaimed leaders making decisions based on their political and ideological compulsions. Any demand for banning certain crops is anti-democratic and stepping on the farmers’ freedom. <br /><br />While some environmentalists call GM crops as anti-nature and is against the ecosystem, in fact their opposition to Genetically Engineered (GE) crops can be termed as an act of support for the ongoing environmental degradation. They want global warming to be contained. But they have no pragmatic farming solutions for sufficiently feeding the today’s world population without greatly hurting the climate and sustain it.<br /><br />A section of our society opposes these new breeding methods in the name globalization and rich corporations controlling the lives of poor people. They do so in the name of pro-poor and economic equality. They seem to have genuine love for the downtrodden and poverty stricken people. So they should know GE can cure malnutrition among the poor in the third world countries, including India, without people changing their diet and the quantity of food they consume.<br /><br />Stewart Brand is an ecologist living near the silicon valley of America. His previous work, the ‘Whole Earth Catalog’, has helped promoting and popularizing organic farming in its own way in the beginning. To minimize the impact of his living on climate, he has been living with his wife in a 450 sqft tugboat in the bay for the last 25 years. He is 73 years old now and has written a new book, “Whole Earth Discipline – An Ecopragmatist Manifesto”. I suggest to the people who are opposing BT brinjal to read this book immediately. Stewart Brand is a lifelong environmentalist and a liberal and has genuine care and concern for the poor and disadvantaged. So, we can safely assume that this book is not written by a scientist or a spokesperson of a multinational company with some vested interest in the success of GM crops.<br /><br />According to Peter Raven, a botanist and environmentalist, who was also recognized as one of the “Heroes for the Planet” by TIME magazine, “Nothing has driven more species to extinction or caused more instability in the world’s ecological systems than the development of an agriculture sufficient to feed 6.3 billion people.” <br /><br />Today, 40 percent of all the land surface is used for food crops. And, soil holds more carbon in it than all living vegetation and the atmosphere combined. Tilling releases that carbon. Jim Cook, a plant pathologist and sustainable-agriculture evangelist says: “Carbon disappears faster if you stir the soil. If you chop the crop residue up, bury it, and stir it-which is what we call tillage-there’s a burst of biological activity, since you keep making new surface area to be attacked by the decomposers. You’re not sequestering carbon anymore, you’re basically burning up the whole season’s residue.” He also says, “The fact that at least 40 percent of the land surface is used for crops is hardly ever taken into account in our current approach to climate change. A self-regulating planet needs its ecosystems to stay in homeostasis. We cannot have both our crops and a steady comfortable climate.”<br /><br />Stewart Brand writes, plowed land is the source of gigatons of carbon dioxide in the atmosphere. Cultivated soil loses half of its organic carbon over decades of plowing. According to scientific studies, sustained no-till farming can bring the carbon content back to a level the equal of wildland soil, such as in tallgrass prairies. More and more of GE agriculture is shifting to no-till (to give an example, 80 percent of soybean acreage), because it saves the farmer time, money, and fuel. We now know the role of fossil fuel in global warming. According to experts, about 5 percent of all fossil fuel use is by agriculture and most of this goes on weed and pest control.<br /><br />And why is this weed and pest control important? About 40 percent of crop yield in the world is lost to weeds and pests every year. The main success of GE crops is in lowering these losses; herbicide tolerance and insect resistance. In 2007, Science magazine reported, “Over the past 11 years, biotech crop area has increased more than 60 fold, making GM crops one of the most quickly adopted farming technologies in modern history.” Supporting this view, Stewart Brand writes in his book, “Farmers want GE technology for their crops; nonfarmers want them not to want it… In 2006, when two hundred French anti-GE activists destroyed fifteen acres of GE corn near Toulouse, eight hundred local farmers marched in a nearby town to protest the attack and petition the government to support GE research. In 2000, GE soybeans were legal in Argentina but outlawed in Brazil. The difference in productivity was so obvious that Brazilian farmers smuggled the seeds across the border, until their government relented and legalized GE agriculture.” So we can safely assume that at least some of the protesters in Hyderabad who heckled Jairam Ramesh in favour of BT brinjal had farmers’ interest in their heart and were not in the payroll of any multinationals.<br /><br />Not only it helps to contain global warming, the new breakthroughs and advancements in Genetic Engineering is helping farmers and poor alike. According to World Health Organization, “An estimated 250,000 to 500,000 vitamin A-deficient children become blind every year, half of them dying within 12 months of losing their sight.” And, a report by UN Children’s Fund states, “Vitamin A deficiency is compromising the immune systems of approximately 40 percent of the developing world’s under-fives and leading to the early deaths of an estimated one million young children each year.” In his book, Stewart Brand writes about a new breed of rice, “golden rice”, which is being developed. Scientists added two genes from a daffodil and one gene from a bacteria creating this golden rice which is rich in Vitamin A. In July 2000, TIME magazine put Ingo Potrykus, the scientist behind this breakthrough, on its cover, with the headline, “This rice could save a million kids a year.” And this golden rice is not in the hands of any MNC. It has been managed by the Humanitarian Golden Rice Network, chaired by Potrykus. Any farmer making less than $10,000 a year could get the seeds for free and own the right to breed and sow them year after year. Field trials of this are being conducted in the Philippines by the International Rice Research Institute with the goal of freeing the GE rice for public use by 2011.<br /><br />In the October of last year, North Karnataka has seen the wrath of nature in the form of unruly floods. Thousands of acres of rice crop was lost to it. In India and Bangladesh alone, 4 million tons of rice a year is lost to flooding. And, that is enough to feed 3 crore (30 million) people. Using GE techniques, writes Stewart Brand, scientists introduced a single submergence tolerance gene into locally adapted high-yielding rice varieties where it makes the plants able to “hold their breath” for two whole weeks under water. The submersible rice has now been tested in farmers’ fields (the last stage before release for public use) in Bangladesh, India, and Laos.<br /><br />Before banning the cultivation of BT brinjal, the Indian government needs to consider all these facts. It is not BT brinjal that is at stake here. It is the possibilities of GE and its role in human welfare that is at stake. While China, USA, South American and some African nations are embracing it, we should not shut our doors on it by succumbing to pressure groups. Man needs to employ every available tool to fight the climate change and correct some of his past wrongdoings. Avoiding or stopping the progress of GE will only make the matter worse. Sensible and progressive people need to sit and think about feeding the world population without hurting the ecosystem, before venturing to protest GM crops. There is no discounting of the facts that there are some genuine issues like dependency on multinationals and monopoly of knowledge. But a decent effort is going on in the field to make GM and GE freer, like open-source software, and that should be least of our concerns.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-38972570238876496662010-02-05T10:05:00.000-08:002010-02-05T10:30:38.681-08:00ಬಿಟಿ ಬದನೆ/Genetic Engineering ಪರ ಒಂದು ವಾದ. ಅಭಿಪ್ರಾಯಗಳಿಗೆ ಆಹ್ವಾನ...ಮೊದಲಿಗೆ ಸ್ವಲ್ಪ ಸ್ವವಿವರ; ಗೊತ್ತಿಲ್ಲದವರಿಗೆ. ನಾನು ಹಳ್ಳಿಯಿಂದ, ರೈತ ಕುಟುಂಬದಿಂದ ಬಂದವನು. ಹೊಲ-ಗದ್ದೆ-ತೋಟಗಳ ಉತ್ತು-ಬಿತ್ತು-ಬೆಳೆ-ಮಾರಾಟಗಳಲ್ಲಿ ಪಾಲ್ಗೊಂಡವನು. ಒಳ್ಳೆಯ ಬೀಜ ಮತ್ತು ಹಸುಗಳಿಂದ ರೈತನಿಗೆ ಆಗುವ ಲಾಭ ಕಂಡವನು. ಹಾಗೆಯೆ ಆತನ ಜೀವನದ ಅನಿಶ್ಚತೆಯನ್ನು, ಜೀವನದಲ್ಲಿನ ಜೂಜನ್ನು ಸ್ವತಃ ಅನುಭವಿಸಿ ಕಂಡವನು. ಇಂಜಿನಿಯರಿಂಗ್ ಓದುವಾಗ, ಮನೆಯಲ್ಲಿ ಬೇರೆ ಆದಾಯ ಇದ್ದರೂ ನನ್ನ ಹಾಸ್ಟೆಲ್-ಊಟ-ಮತ್ತಿತರ ತಿಂಗಳ ಖರ್ಚುಗಳನ್ನು ನನ್ನ ತಾಯಿ ತಾನು ಸಾಕಿದ್ದ ಸೀಮೆಹಸುವಿನ ಹಾಲು ಮಾರಿ ಬಂದ ಹಣದಿಂದ ನೋಡಿಕೊಳ್ಳುತ್ತಿದ್ದಳು. (ಆಕೆಯ ತಾಯಿ ಇನ್ನೂ ಗಟ್ಟಿಗಿತ್ತಿ. ತನ್ನದೇ ಎಂಟು ಮಕ್ಕಳಿದ್ದರೂ, ಹಿರಿಯವನಾದ ತನ್ನ ಸವತಿಯ ಮಗನನ್ನು ಆಕೆ ಇಂಜಿನಿಯರಿಂಗ್ ಮಾಡಿಸಿದ್ದೂ ಬಹುಶಃ ಅದೇ ರೀತಿ. ) ಅಮೆರಿಕದಲ್ಲಿ ಕುರಿ-ಕೋಳಿ-ದನ ಮುಂತಾದ ಮಾಂಸೋತ್ಪಾದನೆ ಉದ್ಯಮ ಮತ್ತು ಅದು ಪರಿಸರದ ಮೇಲೆ ಉಂಟುಮಾಡುವ ಒತ್ತಡವನ್ನು ಗಮನಿಸಿ <a href="http://amerikadimdaravi.blogspot.com/2009/06/blog-post.html">ಸಸ್ಯಾಹಾರಿಯಾದವನು</a>. ಇಲ್ಲಿ ಆದಷ್ಟು Organic ಹಾಲನ್ನು ಮತ್ತು ಸಾವಯವ ತರಕಾರಿಗಳನ್ನು (ದುಪ್ಪಟ್ಟಾಗಿದ್ದರೂ) ಬಳಸಲು ಪ್ರಯತ್ನಿಸುವವನು. ಮತ್ತು, ನಾನು ಕೆಲಸ ಮಾಡುತ್ತಿರುವುದು ಸೆಮಿಕಂಡಕ್ಟರ್ ಕಂಪನಿಯಲ್ಲಿ. GM/GE ಬೆಳೆಗಳ ಯಶಸ್ಸಿನಿಂದ ನನಗೆ ಯಾವ ವೈಯಕ್ತಿಕ ಲಾಭವೂ ಇಲ್ಲ.<br /><br />ಇಷ್ಟು ಹೇಳಿ, ಬಿಟಿ ಬದನೆ ಬಗ್ಗೆ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದನ್ನು ವಾರದ ಹಿಂದೆಯೇ ಬರೆದಿದ್ದರೂ ಕಾರಣಾಂತರಗಳಿಂದ ಇಂದು ಹಾಕುತ್ತಿದ್ದೇನೆ. ಓದುಗರ ಅಭಿಪ್ರಾಯಗಳಿಗೆ ಸ್ವಾಗತ. ನಾನು ಅಂತರ್ಜಾಲದಲ್ಲಿನ ಚರ್ಚೆ/ಕಾಮೆಂಟುಗಳಿಗೆ ಸಾಮಾನ್ಯವಾಗಿ ಉತ್ತರಿಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಉತ್ತಮವಾದ ಮತ್ತು ಅರ್ಹವಾದ ಕಾಮೆಂಟುಗಳು ಬಂದರೆ ಉತ್ತರಿಸುವ ಮನಸ್ಸಿದೆ.<hr><br /><center><strong>ಬಿಟಿ ತಂತ್ರಜ್ಞಾನದ ಪರ ಒಂದು ವಾದ</strong></center><br /><br />ಬಿಟಿ ಬದನೆಯ ಬಗ್ಗೆ ನಾಡಿನಲ್ಲಿ ಇತ್ತೀಚೆಗೆ ಪರ-ವಿರೋಧ ಚರ್ಚೆ ಜೋರಾಗಿಯೆ ನಡೆಯುತ್ತಿದೆ. ಆ ಬೆಳೆಯನ್ನು ರಾಜ್ಯದಲ್ಲಿಯೂ ನಿಷೇಧಿಸುವ ಬಗ್ಗೆ ಸ್ವತಃ ಮುಖ್ಯಮಂತ್ರಿಯೆ ಆಶ್ವಾಸನೆ ಕೊಡುವುದರ ಮೂಲಕ ಸದ್ಯ ವಿರೋಧಿಗಳ ಪ್ರಭಾವವೆ ಕೆಲಸ ಮಾಡುತ್ತಿದೆ. ಅದೇ ಸಮಯದಲ್ಲಿ ರೈತರಲ್ಲದ ಜನರಲ್ಲಿ ಬಿಟಿ ಬೆಳೆಗಳ ಬಗ್ಗೆ ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಈ ಇಡೀ ಪ್ರಹಸನವೆ ಅಜ್ಞಾನ ಮತ್ತು ಅವೈಜ್ಞಾನಿಕ ಮನೋಭಾವನೆಯಿಂದ ಕೂಡಿರುವಂತಹುದು. ರೈತವಿರೋಧಿಯಾದದ್ದು. ಜಾಗತಿಕ ತಾಪಮಾನ ಮತ್ತಷ್ಟು ಏರಲು ಸಹಕರಿಸುವಂತಹುದು. ವರ್ತಮಾನ ಮತ್ತು ಭವಿಷ್ಯದ ಹಸಿವೆಯನ್ನು ತಡೆಗಟ್ಟಲು ಅಸಮರ್ಥವಾದದ್ದು. ಬಡವರು ಅಪೌಷ್ಠಿಕಾಂಶ ಆಹಾರ ಸೇವನೆಯಿಂದ ನರಳುವಂತೆ ಮಾಡುವಂತಹುದು. ಇಲ್ಲಿರುವ ಮೂಲಭೂತ ಪ್ರಶ್ನೆ ಇದಷ್ಟೆ ಆಗಲಿ, ಅಥವ ಬಿಟಿ ಬದನೆಯ ಪರ-ವಿರೋಧವಾಗಲಿ ಅಲ್ಲ. ಬದಲಿಗೆ ಜ್ಞಾನ ಮತ್ತು ವಿಜ್ಞಾನವನ್ನು ವಿರೋಧಿಸುವ ಮನೋಭಾವದ ಬಗ್ಗೆ. ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದು ತಂದೊಡ್ಡಲಿರುವ ಅಪಾಯಕಾರಿ ಪರಿಣಾಮಗಳ ಬಗ್ಗೆ.<br /> <br />ಬಿಟಿ ಬದನೆಯ ವಿರುದ್ಧ ಕರ್ನಾಟಕದಲ್ಲಿ ಧ್ವನಿಯೆತ್ತುತ್ತಿರುವವರಲ್ಲಿ ನಾವು ಒಂದು ಗಣನೀಯ ವಿಪರ್ಯಾಸ ನೋಡಬಹುದು. ಈ ಗುಂಪಿನವರಲ್ಲಿ ಒಂದಷ್ಟು ಜನ ಪರಿಸರವಾದಿಗಳಿದ್ದಾರೆ. ಸದ್ಯದ ರಾಸಾಯಾನಿಕ ಕೀಟನಾಶಕಗಳ ಕೃಷಿ ಪದ್ಧತಿ ಪರಿಸರಕ್ಕೆ ಹಾನಿಕಾರಕ ಎಂದು ಗೊತ್ತಿರುವವರು ಇವರು. ಬಿಟಿ ಬದನೆ, ಬಿಟಿ ಹತ್ತಿಯಂತಹ GM ಆಹಾರಬೆಳೆಗಳು ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸುತ್ತವೆ ಮತ್ತು ಆ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ತಡೆಯುತ್ತದೆ ಎನ್ನುವುದು ಇವರಿಗೆ ಮುಖ್ಯವಾಗುತ್ತಿಲ್ಲ. ಇದೇ ಗುಂಪಿನಲ್ಲಿ ದೀನ-ದಲಿತ-ಬಡವರ ಪರ ಮಾತನಾಡುವವರೂ, ಹಸಿವಿನ ನಿರ್ಮೂಲನಕ್ಕೆ ಕರೆಕೊಡುವವರೂ ಇದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ್ದು ಏನೆಂದರೆ GM ಬೆಳೆಗಳ ಹಿಂದಿರುವ ಜೈವಿಕ ತಂತ್ರಜ್ಞಾನ ಹಸಿವೆಯನ್ನಷ್ಟೆ ಅಲ್ಲ, ಅಪೌಷ್ಠಿಕತೆಯನ್ನೂ ನಿವಾರಿಸಬಲ್ಲ ತಾಕತ್ತನ್ನು ಹೊಂದಿದೆ ಎನ್ನುವುದು; ಅದು A-ಅನ್ನಾಂಗದ ಕೊರತೆಯಿಂದ ಉಂಟಾಗುವ ಕುರುಡನ್ನು ಸುಲಭವಾಗಿ ಇಲ್ಲವಾಗಿಸುವ ಸಾಧ್ಯತೆಗಳನ್ನು ಹೊಂದಿದೆ ಎನ್ನುವುದು. ಇನ್ನು ಬಿಟಿ ವಿರುದ್ಧ ಕೆಲವು ರೈತಮುಖಂಡರೂ ಧ್ವನಿಯೆತ್ತಿದ್ದಾರೆ. ಅವರ ವಿರೋಧಕ್ಕೆ ಹಿನ್ನೆಲೆಯಾಗಿ ಬಹುರಾಷ್ಟ್ರೀಯ ಕಂಪನಿಗೆಳನ್ನು ವಿರೋಧಿಸುವ ತಾತ್ವಿಕ ವಿರೋಧವಾದರೂ ಇದ್ದಿದ್ದರೆ ಅದು ನಮ್ಮ ಸಂದರ್ಭದಲ್ಲಿ ತಕ್ಕಮಟ್ಟಿಗೆ ಸಮರ್ಥನೀಯವಾಗಿರುತ್ತಿತ್ತು. ಆದರೆ, ಬಿಟಿ ಬದನೆಯನ್ನು ವಿರೋಧಿಸುವ ಮೂಲಕ ಕರ್ನಾಟಕದ ರೈತರನ್ನು ತಾವು ಮತ್ತದೇ ಹೆಚ್ಚಿನ ಮಾನವಶ್ರಮ-ರಸಗೊಬ್ಬರ-ಕೀಟನಾಶಕಗಳನ್ನು ಬೇಡುವ, ಕಡಿಮೆ ಲಾಭದ ಕೃಷಿಪದ್ಧತಿಗೆ ದೂಡುತ್ತಿದ್ದೇವೆ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಹಾಗೆಯೆ, ಅಕಾಲಿಕ ಪ್ರವಾಹದಿಂದಾಗಿ ಎರಡುವಾರಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಭತ್ತದ ಬೆಳೆ ನಾಶವಾಗದ ಒಂದು ಅಸಾಮಾನ್ಯ ಸಾಧ್ಯತೆ ಈ ಜೈವಿಕ ವಿಜ್ಞಾನದ ಅಭಿವೃದ್ಧಿಯಿಂದಾಗಿ ಸಾಧ್ಯ ಎನ್ನುವ ವಿಷಯ ಅವರಿಗೆ ಗೊತ್ತಾಗಿಲ್ಲ. ಕೊನೆಯದಾಗಿ, ಈ ಗುಂಪಿನಲ್ಲಿ ಕೆಲವು ಮತೀಯ ಮೂಲಭೂತವಾದಿಗಳೂ ಇದ್ದಾರೆ. ವಿಜ್ಞಾನ ಮತ್ತು ಜೀವವಿಕಾಸದ ಅರಿವೇ ಇಲ್ಲದ ಇವರು ಗರಿಷ್ಠ ಕ್ಷಮೆಗೆ ಅರ್ಹರು!<br /> <br /><img src="http://upload.wikimedia.org/wikipedia/commons/5/55/Stewart_Brand-200904.jpg" align="left" width="50%">ಅಮೆರಿಕದ ಸಿಲಿಕಾನ್ ಕಣಿವೆಯ ಕೊಲ್ಲಿ ಪ್ರದೇಶದಲ್ಲಿ ಒಬ್ಬ ಪರಿಸರವಾದಿ ಇದ್ದಾನೆ. ಆತ ಪರಿಸರವಿಜ್ಞಾನಿಯೂ ಹೌದು. ಅಮೆರಿಕದಲ್ಲಿ ಸಾವಯವ ಕೃಷಿ ಪದ್ಧತಿ ಜನಪ್ರಿಯವಾಗಲು ಆತನ ಕೊಡುಗೆಯೂ ಸ್ವಲ್ಪ ಇದೆ. ತಾನು ಬದುಕುವ ಬದುಕು ಪರಿಸರಹಾನಿಗೆ ಬಹಳ ಕಮ್ಮಿ ಕಾರಣವಾಗಬೇಕು ಎಂದು 73 ವರ್ಷದ ಈ ಹಿರಿಯ ಕಳೆದ 25 ವರ್ಷಗಳಿಂದ ಕೊಲ್ಲಿಯ ಸಮುದ್ರದಡದಲ್ಲಿ ಲಂಗರು ಹಾಕಿದ ಹಳೆಯ ಮೋಟಾರ್ದೋಣಿಯಲ್ಲಿ ವಾಸಿಸುತ್ತಿದ್ದಾನೆ. ಆತನ ಹೆಸರು ಸ್ಟ್ಯುವರ್ಟ್ ಬ್ರ್ಯಾಂಡ್. ಏರುತ್ತಿರುವ ಜಾಗತಿಕ ತಾಪಮಾನ, ಜಗತ್ತಿನ ಬಹುಸಂಖ್ಯಾತ ಬಡವರಿಗೆ ಲಭ್ಯವಿಲ್ಲದ ಆಹಾರ, ವಿದ್ಯುತ್ತು, ಸಮಾನತೆ, ಗೌರವಯುತ ಬದುಕುಗಳ ಬಗ್ಗೆ, ಹೆಚ್ಚಾಗುತ್ತಲೆ ಇರುವ ವಿಶ್ವದ ಜನ ಸಂಖ್ಯೆ ಮತ್ತು ಅದು ಪರಿಸರದ ಮೇಲೆ ಉಂಟುಮಾಡುತ್ತಿರುವ ಒತ್ತಡ, ಇವೆಲ್ಲವುಗಳ ಬಗ್ಗೆ ಈತ ಎಲ್ಲಾ ಉದಾರಶೀಲ ಪ್ರಜ್ಞಾವಂತರಂತೆ ತಲೆಕೆಡಿಸಿಕೊಂಡಿದ್ದಾನೆ. ಹಾಗೆಯೆ, ಈ ಎಲ್ಲಾ ಸಮಸ್ಯೆಗಳನ್ನು ಜಗತ್ತು ಹೇಗೆ ಪರಿಹರಿಸಿಕೊಳ್ಳಬಲ್ಲದು ಮತ್ತು ಪ್ರಗತಿಯ ಹಾದಿಯಲ್ಲಿ ಮಾನವ ಈ ಭೂಮಿಯನ್ನೂ ಹೇಗೆ ವಾಸಯೋಗ್ಯವಾಗಿಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಕೆಲವು ತಿಂಗಳ ಹಿಂದೆ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು <a href="http://www.amazon.com/Whole-Earth-Discipline-Ecopragmatist-Manifesto/dp/0670021210">"Whole Earth Discipline - ವಾಸ್ತವಪರಿಸರವಾದಿಯ ಪ್ರಣಾಳಿಕೆ."</a> ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಕುರಿತೇ ಆಗಿದೆ. ಬಿಟಿ ಬದನೆಯನ್ನು ವಿರೋಧಿಸುತ್ತಿರುವ ನಮ್ಮ ’ಪರಿಸರವಾದಿಗಳು’, ’ರೈತಪರ ಹೋರಾಟಗಾರರು’, ’ಸಮಾನತಾವಾದಿಗಳು’, ತತ್ಕ್ಷಣವೆ ಓದಬೇಕಾದ ಪುಸ್ತಕ ಇದ್ದರೆ ಅದು ಇದೇನೆ.<br /> <br />1960 ರಲ್ಲಿ ಈ ಭೂಮಿಯಲ್ಲಿಯ ಜನಸಂಖ್ಯೆ ಸುಮಾರು 300 ಕೋಟಿ ಇತ್ತು. ಇವತ್ತು ಅದು ಸುಮಾರು 670 ಕೋಟಿ. ಹಸಿರು ಕ್ರಾಂತಿ, ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಜೈವಿಕ ತಂತ್ರಜ್ಞಾನ, ವಿಸ್ತಾರವಾದ ಕೃಷಿಭೂಮಿ ಮತ್ತು ನೀರಾವರಿ ಪ್ರದೇಶಗಳು, ಉತ್ತಮಗೊಂಡ ರಸ್ತೆಗಳು ಮತ್ತು ಸರಕು ಸಾಗಾಣಿಕೆ, ಚಲನಶೀಲವಾದ ಆರ್ಥಿಕತೆ, ಮುಂತಾದವುಗಳಿಂದಾಗಿ ಎಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇಂದು ಮನುಷ್ಯ ಭೂಮಿಯ ಮೇಲಿನ ಎಲ್ಲರಿಗೂ ಸಾಕಾಗುವಷ್ಟು ಆಹಾರ ಬೆಳೆಯುತ್ತಿದ್ದಾನೆ. ಅದು ಎಲ್ಲರಿಗೂ ಲಭ್ಯವಿದೆಯೆ ಮತ್ತು ಸಾಕಷ್ಟು ಪೌಷ್ಠಿಕವಾದದ್ದೆ ಎನ್ನುವುದು ಬೇರೆ ವಿಷಯ. ಅದರೆ, ಇಷ್ಟು ಮಾತ್ರದ ಆಹಾರ ಉತ್ಪಾದನೆ ಭವಿಷ್ಯದಲ್ಲಿಯೂ ಸಾಧ್ಯವೆ ಎನ್ನುವುದು ಈಗ ಸದ್ಯ ವಿಶ್ವದ ಮುಂದಿರುವ ಒಂದು ಗಂಭೀರ ಪ್ರಶ್ನೆ. ಅದು ಸಾಧ್ಯವಾದರೂ ಅದು ಬೇಡುವ ಬೆಲೆ ಏನು, ಜೀವಜಗತ್ತಿನ ಮೇಲೆ ಅದರ ಪರಿಣಾಮ ಏನು ಎನ್ನುವುದು ಅದಕ್ಕಿಂತ ಗಂಭೀರ ಪ್ರಶ್ನೆ. <br /> <br />ಬಿಟಿ ಬದನೆಯ ಬಗ್ಗೆ ಭಯಪೀಡಿತರಾಗಿರುವ ನಮ್ಮ ಪರಿಸರವಾದಿಗಳಿಗೆ ಪೀಟರ್ ರ್ಯಾವೆನ್ ಎನ್ನುವ ಪ್ರಸಿದ್ಧ ಸಸ್ಯವಿಜ್ಞಾನಿ ಮತ್ತು ಪರಿಸರವಾದಿ ಗೊತ್ತಿರಬಹುದು. ಪ್ರಸಿದ್ಧ ಟೈಮ್ ಮ್ಯಾಗಜೈನ್ ಈ ವಿಜ್ಞಾನಿಯನ್ನು <a href="http://www.time.com/time/reports/environment/heroes/heroesgallery/0,2967,raven,00.html">"Hero for the Planet"</a> ಪಟ್ಟಿಯಲ್ಲಿ ಒಬ್ಬರನ್ನಾಗಿ ಗುರುತಿಸಿದೆ. ಈ ವಿಜ್ಞಾನಿ ಬರೆಯುತ್ತಾರೆ: "ಜಗತ್ತಿನ 630 ಕೋಟಿ ಜನರಿಗೆ ಉಣಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾದ ಕೃಷಿಪದ್ಧತಿಯ ಹೊರತಾಗಿ ಬೇರ್ಯಾವುದೂ ಜಗತ್ತಿನ ಅನೇಕ ಜೀವಸಂಕುಲಗಳ ನಿರ್ನಾಮಕ್ಕೆ ಮತ್ತು ಹೆಚ್ಚಾದ ಪರಿಸರದ ಅಸಮತೋಲನಕ್ಕೆ ಕಾರಣವಾಗಿಲ್ಲ." ಬಹುಪಾಲು ಜನರಿಗೆ ಗೊತ್ತಿಲ್ಲದ್ದು ಏನೆಂದರೆ ಭೂಮಿಯ ಶೇ.40ರಷ್ಟು ನೆಲವನ್ನು ಆಹಾರ ಬೆಳೆಯಲು ಉಪಯೋಗಿಸಲಾಗುತ್ತದೆ ಎನ್ನುವುದು. ಬರಲಿರುವ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ. ಮತ್ತು, ಸಹಜವಾಗಿಯೆ, ಜಾಗತಿಕ ತಾಪಮಾನ ಏರಿಕೆಗೆ ಇದರ ಪಾಲೂ ಹೆಚ್ಚಾಗಲಿದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ ಮತ್ತು ವಾತಾವರಣಕ್ಕೆ ಇಂಗಾಲ ಹೊರಚೆಲ್ಲುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದುಕೊಳ್ಳುವ ರೈತರ ಮೊದಲ ಕೆಲಸವೆ ನೆಲದಲ್ಲಿ ಹುದುಗಿರುವ ಇಂಗಾಲವನ್ನು ವಾತಾವರಣಕ್ಕೆ ಬಿಡುವುದು. ಸಸ್ಯಗಳಲ್ಲಿರುವ ಮತ್ತು ವಾತಾವರಣದಲ್ಲಿರುವ ಒಟ್ಟು ಇಂಗಾಲಕ್ಕಿಂತ ಹೆಚ್ಚಿನ ಇಂಗಾಲ ನೆಲದಲ್ಲಿದೆ. ರೈತ ನೆಲವನ್ನು ಉತ್ತಾಗಲೆಲ್ಲ ಇಂಗಾಲ ಹೊರಬರುತ್ತದೆ. ಉಳುಮೆ ಕಡಿಮೆ ಮಾಡಿದಷ್ಟೂ ಅಷ್ಟು ಮಾತ್ರದ ಇಂಗಾಲ ಹೊರಚೆಲ್ಲುವಿಕೆ ಕಮ್ಮಿಯಾಗುತ್ತದೆ. ಮತ್ತು, ಜಗತ್ತಿನ ಶೇ.40 ರಷ್ಟು ಬೆಳೆ ಹೊಲಗದ್ದೆಗಳಲ್ಲಿನ ಕಳೆ ಮತ್ತು ಕೀಟಗಳಿಗೆ ಬಲಿಯಾಗುತ್ತದೆ. ಮತ್ತೂ ಇನ್ನೊಂದು ವಿಷಯ: ಜಗತ್ತಿನ ಶೇ.5 ರಷ್ಟು ತೈಲ ಕೃಷಿಗೆ ಬಳಕೆಯಾಗುತ್ತದೆ. ಅದರ ಬಹುಪಾಲು ಕಳೆ ಮತ್ತು ಕೀಟನಾಶಕಗಳ ತಯಾರಿಕೆಗೆ ಬಳಕೆಯಾಗುತ್ತದೆ. ಬಿಟಿ ಬದನೆಯಂತಹ GM ಬೆಳೆಗಳ ಹೆಚ್ಚುಗಾರಿಕೆ ಇರುವುದೆ ಅವುಗಳ ಕೀಟನಿರೋಧ ಮತ್ತು ಕಳೆನಿರೋಧದಲ್ಲಿ. ಇದು ಪರಿಸರವಾದಿಗಳು ಗಮನಿಸಬೇಕಾದ ಪ್ರಮುಖ ಅಂಶ.<br /> <br />ಕೃಷಿ ಬಹಳ ಕಷ್ಟದಾಯಕವಾದ, ಬೆನ್ನೆಲುಬು ಮುರಿದುಹೋಗುವ ಕೆಲಸ. ಈ ಕ್ಷೇತ್ರದಲ್ಲಿ ತೊಡಗಿಕೊಂಡವರ ಬಡತನ ನಿವಾರಣೆ ಆಗುವುದು ಬಹಳ ಅಪರೂಪ. ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಕಮ್ಮಿ ಕೂಲಿ ಕ್ಷೇತ್ರದ ಕೂಲಿಕಾರ್ಮಿಕರಿಗೆ ದೊರೆಯುತ್ತದೆ. ಮನುಷ್ಯನ ನಾಗರಿಕತೆಯುದ್ದಕ್ಕೂ ಹಳ್ಳಿಯಲ್ಲಿನ ಯುವಜನಾಂಗ ನಗರದತ್ತ ಒಂದು ಕಣ್ಣಿಟ್ಟೇ ನಡೆದುಬಂದ ಇತಿಹಾಸ ಇದೆ. ಹೀಗಿರುವಾಗ, ತಮ್ಮ ಪರಿಸರದಲ್ಲಿಯೇ ತಮ್ಮ ಜೀವನವನ್ನು ಉತ್ತಮಗೊಳಿಸಬಲ್ಲ ಸಾಧ್ಯತೆ ಇರುವ ಬಿಟಿ ತಂತ್ರಜ್ಜಾನವನ್ನು ಪ್ರಪಂಚದ ಅನೇಕ ಕಡೆಯ ರೈತರು ವಿರೋಧಿಸುತ್ತಿಲ್ಲ. ವಿರೋಧಿಸುತ್ತಿರುವವರಲ್ಲಿರುವ ಬಹುಪಾಲು ಜನ ಕೃಷಿಕ್ಷೇತ್ರದಿಂದ ಹೊರಗಿರುವವರೆ. ಅದಕ್ಕಿಲ್ಲಿದೆ ಎರಡು ಉದಾಹರಣೆಗಳು. 2000 ದ ಸಮಯದಲ್ಲಿ ಬಿಟಿ ಸೋಯಾಅವರೆ ಬೆಳೆಯುವುದು ಬ್ರೆಜಿಲ್ ದೇಶದಲ್ಲಿ ನಿಷಿದ್ಧವಾಗಿತ್ತು. ಆದರೆ ಪಕ್ಕದ ಅರ್ಜೆಂಟಿನಾದಲ್ಲಿ ಯಾವುದೆ ನಿಷೇಧ ಇರಲಿಲ್ಲ. ಅರ್ಜೆಂಟಿನಾದ ರೈತರು ತಮಗಿಂತ ಕಮ್ಮಿ ಖರ್ಚು ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿರುವುದನ್ನು ಕಂಡ ಬ್ರೆಜಿಲ್ ರೈತರು ಗಡಿಯಾಚೆಯಿಂದ ಬಿಟಿ ಅವರೆ ಬೀಜವನ್ನು ಕಳ್ಳಸಾಗಾಣಿಕೆ ಮಾಡಲು ಆರಂಭಿಸಿಬಿಟ್ಟರು. ಇದರಿಂದ ಎಚ್ಚೆತ್ತ ಬ್ರೆಜಿಲ್ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡಿತು. 2006 ರಲ್ಲಿ ಫ್ರಾನ್ಸ್ ದೇಶದ ಟೌಲೌಸ್ ಎಂಬ ಊರಿನ ಬಳಿ ಸುಮಾರು 200 ಜನ ಬಿಟಿ ವಿರೋಧಿ ಚಳವಳಿಕಾರರು ಸುಮಾರು 15 ಎಕರೆಯಲ್ಲಿ ಬೆಳೆದಿದ್ದ ಬಿಟಿ ಜೋಳವನ್ನು ನಾಶಮಾಡಿದರು. ಆದರೆ ಅದಕ್ಕೆ ಉತ್ತರವಾಗಿ 800 ರೈತರು ಮೆರವಣಿಗೆ ತೆಗೆದದ್ದೆ ಅಲ್ಲದೆ ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ಬೆಂಬಲಿಸಲು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದರು. ನಮ್ಮ ನಾಡಿನ ರೈತನಾಯಕರು ಇದನ್ನು ಗಮನಿಸಬೇಕು.<br /> <br />ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಅಸಾಮಾನ್ಯವಾದ ಸಂಶೋಧನೆಗಳು ಆಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾರ್ಷಿಕ ಎರಡೂವರೆ ಲಕ್ಷದಿಂದ ಐದು ಲಕ್ಷದಷ್ಟು ಮಕ್ಕಳು A ಅನ್ನಾಂಗದ ಕೊರತೆಯಿಂದ ಅಂಧರಾಗುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ಮಕ್ಕಳು ದೃಷ್ಟಿ ಕಳೆದುಕೊಂಡ ವರ್ಷದೊಳಗೇ ಸಾವನ್ನಪ್ಪುತ್ತಾರೆ. ಈಗ ಫಿಲಿಫ್ಫೀನ್ಸ್ನಲ್ಲಿ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ’ಬಂಗಾರದ ಅಕ್ಕಿ’ಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ’ಬಂಗಾರದ ಅಕ್ಕಿ’ಯ ಸೇವನೆ ದೈನಂದಿನ A ಅನ್ನಾಂಗದ ಕೊರತೆಯನ್ನು ನೀಗಲಿದೆ. ಇದು ಸಾಧ್ಯವಾಗಿರುವುದು ಹಳದಿಬಣ್ಣದ ಡ್ಯಾಫೊಡಿಲ್ ಹೂವಿನ ಎರಡು ಜೀನ್ ಮತ್ತು ಬ್ಯಾಕ್ಟೀರಿಯಾ ಒಂದರ ಒಂದು ಜೀನ್ ಅನ್ನು ಭತ್ತಕ್ಕೆ ಸೇರಿಸುವುದರ ಮೂಲಕ. ಇನ್ನೊಂದೆರಡು ವರ್ಷದಲ್ಲಿ ಎಲ್ಲರ ಬಳಕೆಗೆ ಲಭ್ಯವಾಗಲಿರುವ ಈ ಅಕ್ಕಿ ಕೇವಲ ಅನ್ನವನ್ನು ಮಾತ್ರ ಉಣ್ಣಲು ಸಾಧ್ಯವಿರುವ ತೃತೀಯ ಜಗತ್ತಿನ ಅನೇಕ ದೇಶಗಳ ಮಕ್ಕಳಿಗೆ ನೆರವಾಗಲಿದೆ. ಕೇವಲ ಒಂದೇ ಒಂದು ಜೀನ್ ಒಂದರ ಸಂಕರದಿಂದಾಗಿ ಎರಡು ವಾರಗಳ ಕಾಲ ನೀರಿನಲ್ಲಿ ಮುಳುಗಿದರೂ ಕೊಳೆಯದ ಭತ್ತದ ಬೆಳೆಯೊಂದರ ಅಭಿವೃದ್ಧಿ ಮತ್ತು ಪರೀಕ್ಷೆ ಭಾರತ, ಭಾಂಗ್ಲಾ, ಮತ್ತು ಲಾವೋಸ್ ದೇಶಗಳಲ್ಲಿ ನಡೆಯುತ್ತಿದೆ. ಮೂರ್ನಾಲ್ಕು ತಿಂಗಳುಗಳ ಹಿಂದೆ ಅಕಾಲಿಕ ಪ್ರವಾಹಕ್ಕೆ ತುತ್ತಾಗಿ ಸಾವಿರಾರು ಎಕರೆಗಳಲ್ಲಿನ ತಮ್ಮ ಭತ್ತದ ಬೆಳೆಯನ್ನು ಕಳೆದುಕೊಂಡ ಉತ್ತರಕರ್ನಾಟಕದ ರೈತರು ಇಂತಹ ಭತ್ತದ ತಳಿಯೊಂದನ್ನು ಯಾಕಾದರೂ ವಿರೋಧಿಸಿಯಾರು? ರೈತನಾಯಕರ ಮತ್ತು ದೀನದಲಿತರ ಪರ ಮಾತನಾಡುವ ಸಮಾನತವಾದಿಗಳ ಬೆಂಬಲ ಇರಬೇಕಾದದ್ದು ಇಂತಹ ವೈಜ್ಞಾನಿಕ ವಿಚಾರಗಳಿಗೆ.<br /> <br />ಇತ್ತೀಚೆಗೆ ಬಲ ಪಡೆದುಕೊಳ್ಳುತ್ತಿರುವ ಸಾವಯವ ಕೃಷಿ ನಾಡಿನ ಎಲ್ಲಾ ಜನತೆಗೂ ಆಹಾರ ನೀಡಬಲ್ಲ ಬಲ ಪಡೆದುಕೊಳ್ಳಬೇಕಾದರೆ ಅದು ಬಿಟಿ ತಂತ್ರಜ್ಞಾವನ್ನು ಬಳಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲವೆಂದರೆ ಅದು ಹೆಚ್ಚು ದುಡ್ಡು ತೆರಬಲ್ಲ ಶ್ರೀಮಂತರ ಆಹಾರವಾಗಿ, ನಾಡಿನ ಬಡಜನತೆ ಹಸಿವಿನಲ್ಲಿ ಬಳಲಬೇಕಾಗುತ್ತದೆ. ರೈತರು ನೆಲವನ್ನು ಮತ್ತೆಮತ್ತೆ ಕೆರೆಯುತ್ತ, ಕೀಟನಾಶಕ-ಕಳೆನಾಶಕ ಸಿಂಪಡಿಸುತ್ತ, ಬೆಳೆ ನಾಶವಾದಾಗ ಮತ್ತು ಬೆಲೆ ಇಲ್ಲವಾದಾಗ ನೇಣು ಹಾಕಿಕೊಳ್ಳುತ್ತ ಇರಬೇಕಾಗುತ್ತದೆ. ಇಂತಹ ಎಲ್ಲಾ ವಿಚಾರಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸರ್ಕಾರವೊಂದು ಬಿಟಿ ಬದನೆಯಂತಹ ಬೆಳೆಯನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು ಒತ್ತಡಗುಂಪುಗಳ ಒತ್ತಡಗಳಿಗೆ ಮಣಿದು ಅಲ್ಲ. "ಅಭಿವೃದ್ಧಿ"ಯ ಮಂತ್ರ ಜಪಿಸುವ ಸರ್ಕಾರಗಳು ಕೇವಲ ರಸ್ತೆ-ಕಟ್ಟಡಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಬಾರದು. ಅದು ಇಂತಹ ವಿಷಯಗಳಲ್ಲಿ ತನ್ನದೇ ಆದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗಬೇಕಾಗುತ್ತದೆ.<br /> <br />ರವಿ ಕೃಷ್ಣಾ ರೆಡ್ಡಿ<br />(ಜನವರಿ 28, 2010)ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com4tag:blogger.com,1999:blog-8209630531750448655.post-35241095047745102642010-01-29T18:02:00.000-08:002010-01-29T19:02:04.047-08:00ಹಂಪಿ ವಿವಿ ತಂಡದಿಂದ ಪ್ರವಾಹೋತ್ತರ ವಿದ್ಯಮಾನಗಳ ವರದಿ....ಕಳೆದ ವರ್ಷದ ಅಕ್ಟೋಬರ್ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು.<br /><br />ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಕೈಗೊಳ್ಳಲಾದ ಅಧ್ಯಯನದ ವರದಿ ಇತ್ತೀಚಿಗೆ ಕಣ್ಣಿಗೆ ಬಿತ್ತು. ಹೀಗೆಯೆ ಕನ್ನಡದ ಬ್ಲಾಗುಗಳನ್ನು ನೋಡುತ್ತಿದ್ದಾಗ ಕಾಣಿಸಿದ <a href="http://hulimurthygyaana.blogspot.com">"ನೀಲಿಗ್ಯಾನ" (http://hulimurthygyaana.blogspot.com)</a> ಎಂಬ ಬ್ಲಾಗಿನಲ್ಲಿ ಆ ವರದಿ ಲಭ್ಯವಿದೆ.<br /><br />ಕಳೆದ ವರ್ಷದ ಮಾರ್ಚ್ನಲ್ಲಿ ಹಂಪಿಯ ವಿಶ್ವವಿದ್ಯಾಲಯಲಕ್ಕೆ ಹೋಗಿದ್ದಾಗ ಅಲ್ಲಿನ ಕುಲಪತಿಗಳಾದಿಯಾಗಿ ಅಲ್ಲಿಯ ಹಲವು ಅಧ್ಯಾಪಕರಿಗೆ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು, ಥೀಸೀಸ್ಗಳನ್ನು, ಅಧ್ಯಯನ ವರದಿಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿ ಎಂದು ಕೋರಿದ್ದೆ. ಕೋರಿದ್ದೆ ಎನ್ನುವುದಕ್ಕಿಂತ ಒತ್ತಾಯಪಡಿಸಿದ್ದೆ ಮತ್ತು ಅದರ ಪರವಾಗಿ ವಾದ ಮಂಡಿಸಿದ್ದೆ ಎನ್ನುವುದೆ ಸೂಕ್ತ. ವಿಶ್ವವಿದ್ಯಾಲಯವೊಂದು ಇಂತಹ ವೆಬ್ಸೈಟ್ ನಡೆಸಲು ಏನೇನೂ ಖರ್ಚು ಬರುವುದಿಲ್ಲ. ಅವರಲ್ಲಿ ಈಗ ಲಭ್ಯವಿರುವ ಸೌಲಭ್ಯವನ್ನೆ ಬಳಸಿಕೊಂಡು Drupal, Wordpress ನಂತಹ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಒಂದೆರಡು ವಾರದಲ್ಲಿ ನಿರ್ಮಿಸಬಹುದು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಇಂಟರ್ನೆಟ್ ಸೌಲಭ್ಯವೂ, ಮತ್ತು ಕಂಪ್ಯೂಟರ್ಗಳ ಲಭ್ಯತೆಯೂ ಸಾಕಷ್ಟು ಉತ್ತಮವಾಗಿಯೆ ಇದೆ. ಅದರೆ, ಆ ವಿಶ್ವವಿದ್ಯಾಲಯ ಅಂತರ್ಜಾಲದಲ್ಲೂ ಇಂತಹುದೊಂದು ಕನ್ನಡದ ಕೆಲಸ ಮಾಡಲು ಎಂದು ಸಾಧ್ಯವೊ ಗೊತ್ತಿಲ್ಲ.<br /><br />ಈಗ ಅದೇ ವಿವಿಯ ಅಧ್ಯಯನ ತಂಡವೊಂದರ ವರದಿ ಓದಿ ಮತ್ತೆ ಅದನ್ನೆಲ್ಲ ನೆನಸಿಕೊಂಡು ಬೇಸರವಾಗುತ್ತಿದೆ. ನೀಲಿಗ್ಯಾನ ಬ್ಲಾಗಿನ ಹುಲಿಕುಂಟೆ ಮೂರ್ತಿ ಎನ್ನುವವರು ಇಂತಹ ವರದಿಯೊಂದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದಕ್ಕಾಗಿಯೆ ವಿಶೇಷ ಅಭಿನಂದನೆಗಳಿಗೆ ಅರ್ಹರು.(ಅವರನ್ನು ಅಭಿನಂದಿಸುತ್ತಲೆ ಆ ಬ್ಲಾಗ್ಪೋಸ್ಟಿನ ತಾಂತ್ರಿಕ ಅಡಚಣೆಯ ಬಗ್ಗೆ ಒಂದು ಮಾತು. ಆ ವರದಿಯ ಪೋಸ್ಟ್ ಬರಹ ಫಾಂಟ್ನಲ್ಲಿದೆ. ತಮ್ಮ ಕಂಪ್ಯೂಟರ್ನಲ್ಲಿ ಬರಹ ಇಲ್ಲದ ಜನ ಅದನ್ನು ಓದಲಾರರು. ಬಹುಶಃ ಮೂರ್ತಿಯವರಿಗೆ ಇದು ಗೊತ್ತಿಲ್ಲದೆ ಇರಬಹುದು. ಗೊತ್ತಿದ್ದರೂ ಅದನ್ನು ಯೂನಿಕೋಡ್ಗೆ ಕನ್ವರ್ಟ್ ಮಾಡುವ ರೀತಿ ಗೊತ್ತಿಲ್ಲದೆ ಇರಬಹುದು. ಹೇಗಾದರೂ ಮಾಡಿ ಅದನ್ನು ಗೊತ್ತುಮಾಡಿಕೊಂಡು ಅವರು ಆ ವರದಿಯನ್ನು ಯೂನಿಕೋಡ್ಗೆ ಬದಲಾಯಿಸಲು ಈ ಮೂಲಕ ಒತ್ತಾಯಿಸುತ್ತೇನೆ. ಬರಹ ಕನ್ವರ್ಟ್ ನಲ್ಲಿ ಅದು ಅರ್ಧ ನಿಮಿಷದ ಕೆಲಸ.)<br /><br />ಬರಹ ಫಾಂಟ್ಸ್ ಇರುವ ಓದುಗರು ಆ ವರದಿಯನ್ನು ಇಲ್ಲಿ ಓದಬಹುದು:<br /><a href="http://hulimurthygyaana.blogspot.com/2010/01/ege-aa-ajuaaa-aavaau-ajaga-czsaaaiaaa.html">http://hulimurthygyaana.blogspot.com/2010/01/ege-aa-ajuaaa-aavaau-ajaga-czsaaaiaaa.html</a><br /><br />ಬಹಳ ಗಂಭೀರವಾದ ಮತ್ತು ಮೌಲಿಕವಾದ ಅಧ್ಯಯನ. ವರದಿ ಅಕಾಡೆಮಿಕ್ ಪರಿಭಾಷೆಯಲ್ಲಿದ್ದರೂ ಓದಲು ಸರಳವಾಗಿಯೆ ಇದೆ. ಇಂತಹುದೊಂದು ಕ್ಷೇತ್ರಕಾರ್ಯವನ್ನು ಮಾಡಿದ ಮತ್ತು ಅದನ್ನು ದಾಖಲಿಸಿದ ತಂಡ ಅಭಿನಂದನಾರ್ಹ. ಆದರೆ, ಇಂತಹುದೊಂದು ಕೆಲಸ ವಿವಿಗಳು ಮಾಡುತ್ತವೆ ಎನ್ನುವುದೆ ಎಷ್ಟೋ ಜನಕ್ಕೆ, ಬರಹಗಾರರಿಗೆ, ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ, ಗೊತ್ತಾಗುವುದಿಲ್ಲ. ಅವರಿಗೆ ಗೊತ್ತಾಗದಿದ್ದರೆ ಇಂತಹ ವರದಿಗಳ ಪ್ರಯೋಜನವಾದರೂ ಏನು? ಇಂತಹ ವಿಷಯ ಮತ್ತು ಅಂಕಿಅಂಶಗಳು ವಿವಿ ವಿಭಾಗಗಳ ಖಾಸಗಿ ಪ್ರಚಾರಕ್ಕಷ್ಟೇ ಸೀಮಿತವಾಗಿಬಿಡಬಾರದು. ಇದನ್ನು ಗಮನದಲ್ಲಿಟ್ಟುಕೊಂಡೆ ನಾನು ಅಲ್ಲಿಯ ಕುಲಪತಿಗಳಿಗೆ ಮತ್ತು ಅಧ್ಯಾಪಕರಿಗೆ ಅವರ ಅಧ್ಯಯನ ಮತ್ತು ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಕೋರಿದ್ದು. ಆದರೆ....<br /><br />ನನಗೆ ಈ ಹುಲಿಕುಂಟೆ ಮೂರ್ತಿಯವರ ಪರಿಚಯ ಇಲ್ಲ. ಆದರೆ ಅವರ ಬ್ಲಾಗಿನಲ್ಲಿ ಒಂದಷ್ಟು ಪದ್ಯಗಳು, ಒಳ್ಳೆಯ ಲೇಖನಗಳೂ ಇವೆ. ಮೇಲಿನ ವರದಿಯೊಂದಿಗೆ ಅವನ್ನೂ ಗಮನಿಸಿ. ಹಲವಾರು ಬರಹಗಳು ಯೂನಿಕೊಡ್ನಲ್ಲಿಯೆ ಇವೆ.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0tag:blogger.com,1999:blog-8209630531750448655.post-18539849945038715352010-01-19T10:36:00.000-08:002010-01-19T11:58:52.982-08:00ಕನ್ನಡ ಚಿತ್ರರಂಗ 75 - ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ.<br /><br />ಲೇಖಕ ಕೆ. ಪುಟ್ಟಸ್ವಾಮಿಯವರು "<a href="http://www.vikrantakarnataka.com">ವಿಕ್ರಾಂತ ಕರ್ನಾಟಕ</a>"ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (<a href="http://www.vikrantakarnataka.com/magazine/pdf/VikrantaKarnataka_04-18-08.pdf">ಏಪ್ರಿಲ್ 18, 2008</a> ರ ಸಂಚಿಕೆಯಿಂದ <a href="http://www.vikrantakarnataka.com/magazine/pdf/VikrantaKarnataka_07_31_09.pdf">ಜುಲೈ 31,2009</a> ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ ಚಿತ್ರರಂಗದ ಇತಿಹಾಸವನ್ನು ಅಭ್ಯಸಿಸುವವರಿಗೆ ಇನ್ನು ಮುಂದಕ್ಕೆ ಎಲ್ಲಾ ರೀತಿಯಿಂದಲೂ ಆಕರ ಮೂಲವಾಗುವ ಬರಹಗಳು ಅವು. ಇತ್ತೀಚೆಗೆ ತಾನೆ ಈ ಲೇಖನಗಳು "ಸಿನಿಮಾ ಯಾನ (ಕನ್ನಡ ಚಿತ್ರರಂಗ 75 : ಒಂದು ಫ್ಲಾಷ್ಬ್ಯಾಕ್)" ಎಂಬ ಪುಸ್ತಕ ರೂಪದಲ್ಲಿ ಬಂದಿದೆ.<br /><br /><img src="http://avadhi.files.wordpress.com/2010/01/cinema-cover1.jpg" width="100%"><br /><br /><br />ಈ ಪುಸ್ತಕಕ್ಕೆ ಎನ್.ಎಸ್. ಶಂಕರ್ <a href="http://avadhi.wordpress.com/2010/01/06/%e0%b2%aa%e0%b3%81%e0%b2%9f%e0%b3%8d%e0%b2%9f%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf-%e0%b2%a6%e0%b3%8a%e0%b2%a1%e0%b3%8d%e0%b2%a1-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be/">ಬರೆದಿರುವ ಮುನ್ನುಡಿ ಇಲ್ಲಿದೆ</a>.<br /><br />"ಸಿನೆಮಾ ಯಾನ" ಬಿಡುಗಡೆಯ <a href="http://odubazar.wordpress.com/2010/01/12/%e0%b2%aa%e0%b3%81%e0%b2%9f%e0%b3%8d%e0%b2%9f%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf-%e0%b2%9c%e0%b3%8a%e0%b2%a4%e0%b3%86-%e0%b2%92%e0%b2%82%e0%b2%a6%e0%b3%81-%e0%b2%b8%e0%b2%bf/">ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.</a><br /><br />ಈ ಪುಸ್ತಕದ ಹಿನ್ನೆಲೆಯಲ್ಲಿ, ಪುಟ್ಟಸ್ವಾಮಿಯವರೊಂದಿಗೆ ನೇರಪ್ರಸಾರದ ಸಂದರ್ಶನ ಮತ್ತು ಮಾತುಕತೆಯನ್ನು ಮಧುಕಾಂತ್ ತಮ್ಮ ನಾಳೆಯ ರೇಡಿಯೊ ಕಾರ್ಯಕ್ರಮದಲ್ಲಿ ನಡೆಸಿಕೊಡುತ್ತಿದ್ದಾರೆ. ಬೇ ಏರಿಯಾದಲ್ಲಿರುವ ಕೇಳುಗರು ಈ ಕಾರ್ಯಕ್ರಮವನ್ನು 90.1 FM ತರಂಗಾಂತರದಲ್ಲಿ ಕೇಳಬಹುದು. ಜೊತೆಗೆ, ಇಂಟರ್ನೆಟ್ ಸೌಲಭ್ಯ ಇರುವ ಎಲ್ಲರೂ ಎಲ್ಲಿಂದಲಾದರೂ ತಮ್ಮ ಕಂಪ್ಯೂಟರ್ ಮೂಲಕ ಆಲಿಸಬಹುದು. ತಮ್ಮ ಅಭಿಪ್ರಾಯಗಳನ್ನೂ ಈ ನೇರಪ್ರಸಾರದಲ್ಲಿ ಹಂಚಿಕೊಳ್ಳಬಹುದು.<br />ದಿನಾಂಕ: ಜನವರಿ 20, 2010 - ಬುಧವಾರ<br />ಸಮಯ: 7.30 AM to 8.30 AM (PST) / ರಾತ್ರಿ 9 ರಿಂದ 10 (ಭಾರತೀಯ ಕಾಲಮಾನ)<br /><br />ಹೆಚ್ಚಿನ ವಿವರಗಳು <a href="http://rasikararajya.blogspot.com/2010/01/dear-friends-i-am-doing-radio-program.html">ಮಧುಕಾಂತ್ರ ಬ್ಲಾಗ್ನಲ್ಲಿ</a> ಇವೆ.<br /><br />ಅಂದ ಹಾಗೆ, ಇಲ್ಲಿಯವರೆಗೆ ಇಂತಹ 19 ಕನ್ನಡ ಕಾರ್ಯಕ್ರಮಗಳನ್ನು ಕೊಟ್ಟಿರುವ ಮಧುಕಾಂತರಿಗೆ ಇದು 20 ನೇ ಕಾರ್ಯಕ್ರಮ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳೂ ಈ ಕೆಳಗಿನ ಕೊಂಡಿಯಲ್ಲಿ ಕೇಳಲು ಲಭ್ಯವಿದೆ.<br /><a href="http://www.itsdiff.com/Kannada.html">http://www.itsdiff.com/Kannada.html</a><br /><br />ತಮ್ಮದೆ ನೆಲೆಯಲ್ಲಿ ಒಂದು ಒಳ್ಳೆಯ ಆರೋಗ್ಯವಂತ ಸಾಂಸ್ಕತಿಕ ಸಂದರ್ಭವನ್ನು ಸೃಷ್ಟಿಸಿಕೊಳ್ಳಲು ತವಕಿಸುವ ಮಧುಕಾಂತರಂತಹ ಪ್ರಯತ್ನಗಳು ಗಮನಾರ್ಹ ಮತ್ತು ಪ್ರಶಂಸನೀಯ.ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.com0