tag:blogger.com,1999:blog-8209630531750448655.post3283544150110087165..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್ನಲ್ಲಿಯ ಬುಲೆಟ್ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger1125tag:blogger.com,1999:blog-8209630531750448655.post-64924762785837394412008-05-30T02:02:00.000-07:002008-05-30T02:02:00.000-07:00ರವಿ ಕೃಷ್ಣ ರೆಡ್ಡಿಯವರೆ,ನೀವು ಪ್ರಕಟಿಸುತ್ತಾ ಬಂದಿರುವ ವಿಚ...ರವಿ ಕೃಷ್ಣ ರೆಡ್ಡಿಯವರೆ,<BR/><BR/>ನೀವು ಪ್ರಕಟಿಸುತ್ತಾ ಬಂದಿರುವ ವಿಚಾರಗಳನ್ನು ನಾನು ಓದುತ್ತಾ ಬಂದಿರುವೆ.<BR/>ನಿಮ್ಮ ನ್ಯಾಯಪರವಾದ ಬರಹಗಳು, ದೇಶದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ.<BR/>ಇಂದು ನಿಮ್ಮ ಬಹರವನ್ನು "ನನ್ನ ತಲೆಮಾರಿನ ತಲ್ಲಣಗಳು ಮತ್ತು ರಿವಾಲ್ವರ್ನಲ್ಲಿಯ ಬುಲೆಟ್" ಓದುವಾಗ ನನಗೆ ಅನಿಸಿದ ಕೆಲವು ವಿಚಾರಗಳನ್ನ ಪ್ರತಿಕ್ರಿಯಸುತ್ತಿದ್ದೇನೆ. ನೀವು ಚುನಾವಣೆ ಆಯೋಗ ಮಾಡಿದ ಕಾನೂನು ಮತ್ತು ಅದರ ಆಡಳಿತ ದಕ್ಷತೆಯ ಬಗ್ಗೆ ಬರೆದಿರುವಿರಿ. ಇದಕ್ಕೆ ನನ್ನ ನಿಲುವು ಸ್ಪಷ್ಟವಾಗಿ ನಿಮ್ಮ ಮುಂದಿರಿಸುವೆ. ನನ್ನ ಬುದ್ಧಿ ಬೆಳದಾಗಿನಿಂದ , ಕಾನೂನು, ಸರಕಾರ, ಆಡಳಿತದ ಬಗ್ಗೆ ತಿಳುವಳಿಕೆ ಮೂಡಿದಾಗಿನಿಂದ ಸಿಕ್ಕ ಅನುಭವ ನನಗೆ ಒಂದು ವಿಚಿತ್ರ ಜಿಜ್ಞಾಸೆ ಹುಟ್ಟಿಸಿದೆ. ಈಗ ಭಾರತ ದೇಶ ನಡೆಸಿಕೊಂಡು ಹೋಗುತ್ತಿರುವ ಪ್ರಜಾತಂತ್ರ ಬರಿ ಹೆಸರಿಗೆ ಮಾತ್ರ ಪ್ರಜಾತಂತ್ರ. ನಾನು ಈ ಭಾರತಾಂಬೆಯ ಮೇಲೆ ಆಣೇ ಮಾಡಿ ಹೇಳುತ್ತೇನೆ ಈ ಪ್ರಜಾತಂತ್ರ ವ್ಯವಸ್ತೆಯಲ್ಲಿ ಯಾವತ್ತೂ ಯಾರಿಗೂ ನ್ಯಾಯ ಸಿಕ್ಕುವುದಿಲ್ಲ. ಯಾವ ಬಡವರಪರವಾಗಿ ಯಾವತ್ತು ಕೆಲಸ ಹಾಗುವುದಿಲ್ಲ. ಬರಿ ಲೆಕ್ಕ ಪತ್ರದಲ್ಲಿ, ಆಧುನಿಕ ಬಡಿವಾರದಲ್ಲಿ ತೋರಿಸಿ ಎಲ್ಲರನ್ನೂ ಮೋಸಹೋಗುವಂತೆ ಮಾಡುವ ಸುವ್ಯಸ್ತಿತವಾದ ಕುತಂತ್ರ. ಇದರಲ್ಲಿ ಆಡಳಿತ ಶಾಹಿ, ಅಧಿಕಾರ ಶಾಯಿಯ ಆಳವಾದ ವಿಷ ಬೇರುಗಳು ಹಬ್ಬಿವೆ. ಒಬ್ಬ ಹಳ್ಳಿಯ ಅಕೌಟೆಂಟ್ ನಿಂದ ಹಿಡಿದು ದಿಲ್ಲಿಯಲ್ಲಿ ಕೂತು ಆರ್ಥಿಕ ಹಾಗು ಆಡಳಿತಾತ್ಮಕ ರೂಪರೇಷೆಗಳನ್ನು ರಚಿಸುವ ಕಾರ್ಯದರ್ಶಿಗಳವರೆಗು ಅಧಿಕಾರ ವಿವಿದ ಹಂತದಲ್ಲಿ ಹಂಚಿಹೋಗಿದೆ. ಸಾಮಾನ್ಯ ಜನರಿಗೆ ಈ ಕಾನೂನು ಜಾಲದಿಂತ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ. ಅಷ್ಟು ವ್ಯವರಾತ್ಮಕವಾಗಿ ಈ ಕಾನೂನಿನ ಜಾಲ ನೇಯಲಾಗಿದೆ.<BR/><BR/>ಸಾಮಾನ್ಯ ಒಬ್ಬ ಪ್ರಜೆಗೂ ನ್ಯಾಯ ಸಿಗಬೇಕು ಅನ್ನುವ ಕಾನೂನೇನೋ ಇದೆ. ಆದರೆ ಸಾಮಾನ್ಯ ಮನುಷ್ಯ ಆ ನ್ಯಾಯದ ದಾರಿಯಲ್ಲಿ ಹೊರಟರೆ ಅವನಿಗೆ ಈ ನ್ಯಾಯಕ್ಕಿಂತ ತಾನು ಬಂದ ಕಷ್ಟವನ್ನು ಅನುಭವಿಸುವೆ ಲೇಸೆನ್ನುವಷ್ಟು ಕಾನೂನು ತೊಡಕುಗಳು ನಮ್ಮ ಪ್ರಜಾತಂತ್ರದಲ್ಲಿವೆ.<BR/>ಇದ್ದಕ್ಕೆ ಕಾರಣವೇನು? ನನ್ನ ಸ್ಪಷ್ಟ ಉತ್ತರ, ಬ್ರಿಟಿಷರಿಂದ ನಾನು ಬಳುವಳಿಯಾಗಿ ಪಡೆದ ಪ್ರಜಾತಂತ್ರ, ನ್ಯಾಯವ್ಯವಸ್ಥೆ, ಆರ್ಥಿಕ ನೀತಿ. <BR/>ಒಂದು ಸಣ್ಣ ಅಲ್ಪವಿರಾಮವನ್ನು ಬಿಡದೇ ನಾವು ಅವರ ಪ್ರಜಾತಂತ್ರ ವ್ಯವಸ್ಥೆಯನ್ನು ನಕಲು ಮಾಡಿ ಉಪಯೋಗಿಸುವುದೇ ಕಾರಣ. ಬ್ರಿಟೀಷರು ಮಾಡಿದ್ದ ಕಾನೂನು ವ್ಯವಸ್ಥೆ, ಪ್ರಜೆಗಳನ್ನು ಗುಲಾಮರನ್ನಾಗಿ ಇಟ್ಟುಕೊಳ್ಳಲಿಕ್ಕೆ ಅನುಕೂಲವಾದ ವ್ಯವಸ್ಥೆ. ತೆರಿಗೆ ಸುಲಿಯಲು ಅನುಕೂಲವಾದ ವ್ಯವಸ್ಥೆ. ಅಧಿಕಾರಿಗಳ ನಿಷ್ಠೆ ಸರಕಾರದ ಪರವಾಗಲು ಮಾಡಿದ ವ್ಯವಸ್ಥೆ. ಇದನ್ನು ಸರಿಪಡಿಸದೇ ವರೆತು ನಾವು ಭಾರತವನ್ನು ಬದಲಾಯಿಸುತ್ತೇವೆ ಎನ್ನುವುದು ನನಗೆ ಹಗಲು ಕನಸೇ ಅನ್ನಿಸುತ್ತಿದೆ. ಈಗಿರುವ ಕಾನೂನು ನಮ್ಮ ಭಾವನೆ, ಭೌಗೋಳಿಕ, ಪರಿಸರ, ಸಾಮಾಜಿಕ ಧಾರ್ಮಿಕ ವ್ಯವಸಸ್ಥೆಗೆ ಪೂರಕವಾಗಿಲ್ಲ. ಈಗಿರುವ ಕಾನೂನುಗಳೆಲ್ಲ ನಮ್ಮ ನಂಬಿಕೆಯ ವಿರುದ್ದವಾಗಿವೆ. ಹಾಗಾಗಿ ನಾಗರಿಕ ಸರಿಯಾಗಿ ಸ್ಪಂದಿಸಿ ಸಮಾಜ, ದೇಶಕಟ್ಟುವ ಕಾರ್ಯದಲ್ಲಿ ಭಾಗಿಯಾಗಲಾರ. ಪ್ರಜೆಯ ಉನ್ನತಿಯಾದೆ ಹೊರೆತು ದೇಶ ಉನ್ನತಿಯ ಕಲ್ಪನೆ ಬರಿ ಬೊಗಳೆ. ನಾವು ನಿಜವಾಗಲು ನಮ್ಮ ದೇಶವನ್ನು ಮೇಲೆತ್ತುವ ಪಣತೊಟ್ಟರೆ ಮೊದಲು ನಮ್ಮ ಕಾರ್ಯ ಈ ಪ್ರಜಾತಂತ್ರ ಬೇರು ಸಮೇತ ಕಿತ್ತಾಕುವುದರಿಂದ ಪ್ರಾರಂಬವಾಗಬೇಕು. ಭಾರತಕ್ಕೆ ಪೂರಕವಾದ ಪ್ರಜಾತಂತ್ರ ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಈ ವಿಷಯವಾಗಿ ಗಾಂಧಿಜಿಯವರು ತಮ್ಮ ಹಿಂದೂ ಸ್ವಾರಾಜ್ ಪುಸ್ತಕದಲ್ಲಿ ಸೂಕ್ಮವಾಗಿ ಮತ್ತು ಕೂಲಂಕುಷವಾಗಿ ವಿವರಿಸಿದ್ದಾರೆ. ಅಲ್ಲದೆ ಗಾಂಧಿಜಿ ಈಗಿರು ನಮ್ಮ ಪ್ರಜಾತಂತ್ರ ಆಡಳಿತ ಸೂತ್ರದ ಕಡು ವಿರೋಧಿಯಾಗಿದ್ದರು. ನೀವು ಗಾಂಧಿಜಿಯ ವಿಚಾರಧಾರೆಯನ್ನು ಮುಂದಿಟ್ಟು ನಡೆಯುವುದಾದರೆ ಈ ವಿಷಯವಾಗಿ ಒಮ್ಮೆ ನಿಮ್ಮ ಜಿಜ್ಞಾಸುವನ್ನು ಪರಮಾರ್ಶಿಸಿ ಕೊಳ್ಳಿ. ಈ ಪ್ರಜತಂತ್ರ ವ್ಯವಸ್ಥೆಯಲ್ಲಿ ಯಂತ ಧಕ್ಷ ಅಧಿಕಾರಿ, ನಿಷ್ಠೆಯುಳ್ಳ ನಾಗರಿಕರಿದಲೂ ಒಳ್ಳೆಯ ಆಡಳಿತ ನಿಡಲು ಸಾದ್ಯವೇ ಇಲ್ಲ. ಇದು ವಾಸ್ತವ ಸತ್ಯ. ಅಂತಹದರಲ್ಲಿ ಈ ಚುನಾವಣೆ ಅಧಿಕಾರಿಗಳು ಯಾವಲೆಕ್ಕ? ನಿಮ್ಮ ಅವರ ವಿರುದ್ದದ್ದ ಹೋರಾಟ ಬರಿ ತಾತ್ಕಾಲಿಕ ಆತ್ಮಸಂತೃಪ್ತಿ ತಂದು ಕೊಡಬಹುದೇ ವಿನಹ ನಿಜವಾದ ಜಯ ಸಿಕ್ಕದು. <BR/>ಅಲ್ಲದೆ ಭಾರತದ ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಹೋರಾಟಕ್ಕೆ ಮುನ್ನುಗ್ಗುವ ಸಾಮಾನ್ಯನ್ನು ನಿಮ್ಮ ಈ ಹೋರಾಟದಿಂದ ಹಾದಿತಪ್ಪಿದಂತಾಗುತ್ತದೆ. ಈ ತಪ್ಪು ಆಗದೆ ನಮ್ಮ ದೇಶಕ್ಕೆ ಜನ್ನಕ್ಕೆ ಒಳಿತನ್ನು ಉಂಟುಮಾಡುವ ದಾರಿಯಲ್ಲಿ ನಿಮ್ಮ ಹೋರಾಟ ನಡೆದರೆ ಮತ್ತೆ ಭಾರತ ವಿಶ್ವಮಾನ್ಯವಾಗುವುದು.<BR/><BR/>ವಂದೇಮಾತರಂ<BR/>ಜೈಹಿಂದು<BR/><BR/>ಕುಮಾರಸ್ವಾಮಿ. ಕಡಾಕೊಳ್ಳ<BR/>ಪುಣೆ.<BR/>30/05/08ಕುಕೂಊ..https://www.blogger.com/profile/07314137566666903061noreply@blogger.com