tag:blogger.com,1999:blog-8209630531750448655.post5110074130257375866..comments2023-06-08T05:04:15.308-07:00Comments on ಕುವೆಂಪು ನಗರದಿಂದ...: ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ "ಹಿಂದುಳಿದವರು", ಒಳಮೀಸಲಾತಿ, "ಅನಂತ ನಿಷ್ಠ" ಭಟ್...ರವಿ ಕೃಷ್ಣಾ ರೆಡ್ಡಿhttp://www.blogger.com/profile/16025853365574866510noreply@blogger.comBlogger2125tag:blogger.com,1999:blog-8209630531750448655.post-38940390537057753392009-03-14T04:32:00.000-07:002009-03-14T04:32:00.000-07:00Hello Ravivery good article. u took that courage t...Hello Ravi<BR/>very good article. u took that courage to tell.<BR/>i like read ur articles . was observing the discussion about slomdog... in sampada. also took part. <BR/>i like ur way of thinking , <BR/>as a young man i like ur way of thinking without any isms. i think all isms have good things and drawbacks. u think beyond these<BR/><BR/>Regards<BR/>Manjunath kulkarniAnonymousnoreply@blogger.comtag:blogger.com,1999:blog-8209630531750448655.post-9610497251994065732009-03-11T23:33:00.000-07:002009-03-11T23:33:00.000-07:00ರವಿಯವರೆ,ನೀವು ಗುರುತಿಸಿರುವ ಅಂಶಗಳು ಕರ್ನಾಟಕದ ಇವತ್ತಿನ ಕ...ರವಿಯವರೆ,<BR/>ನೀವು ಗುರುತಿಸಿರುವ ಅಂಶಗಳು ಕರ್ನಾಟಕದ ಇವತ್ತಿನ ಕ್ರೂರ ಜಾತಿ ರಾಜಕಾರಣದ ಪ್ರತಿಬಿಂಬ.<BR/>ಎಲ್.ಜಿ. ಹಾವನೂರು ನೇತೃತ್ವದ ಆಯೋಗವನ್ನು ಮೊದಲ್ಗೊಂಡು, ಇವತ್ತಿನ ಡಾ.ಸಿ.ಎಸ್.ದ್ವಾರಕಾನಾಥ್ ಆಯೋಗದವರೆಗೆ ಯಾವುದೇ ಆಯೋಗ ಒಕ್ಕಲಿಗರನ್ನು, ಲಿಂಗಾಯಿತರನ್ನು ಹಿಂದುಳಿದ ವರ್ಗಗಳೆಂದು ಗುರುತಿಸಿಲ್ಲ. ಆದರೆ ಎರಡೂ ಸಮುದಾಯಗಳು ಮೀಸಲಾತಿಯನ್ನು ಅನುಭವಿಸುತ್ತ ಬಂದಿವೆ. ಈ ಮೀಸಲಾತಿಗೆ ಅಡಚಣೆಯಾಗುವ ಸಂದರ್ಭ ಬಂದಾಗ (ವೆಂಕಟಸ್ವಾಮಿ ಆಯೋಗದ ವರದಿ ಹಿನ್ನೆಲೆಯಲ್ಲಿ) ಒಕ್ಕಲಿಗರು ತಮ್ಮ ವಿರಾಟ್ ಶಕ್ತಿ ಪ್ರದರ್ಶಿಸಿ, ಮೀಸಲಾತಿಯನ್ನು ಉಳಿಸಿಕೊಂಡಿದ್ದೂ ಇತಿಹಾಸ.<BR/>ಹೀಗೆ ಹಿಂದುಳಿದವರಿಗೆ ಸಲ್ಲಬೇಕಾದ ಮೀಸಲಾತಿಯನ್ನು ಪಡೆಯುವುದು ಹೇಸಿಗೆ ಎಂದು ಯಾಕೆ ಯಾರಿಗೂ ಅನಿಸುತ್ತಿಲ್ಲ ಎಂಬ ನಿಮ್ಮ ಪ್ರಶ್ನೆ ಸಹಜವಾದದ್ದೇ. ಆದರೆ ಇದನ್ನು ಯಾರೂ ಪ್ರಶ್ನಿಸಲು ಪ್ರಯತ್ನಿಸುತ್ತಲೂ ಇಲ್ಲ. ಪ್ರಗತಿಪರ ಚಳವಳಿಗಳ ಮುಂಚೂಣಿಯಲ್ಲಿರುವ ಒಕ್ಕಲಿಗ-ಲಿಂಗಾಯಿತ ಮುಖಂಡರಿಗೂ ಇದನ್ನು ಒಂದು ಇಶ್ಯೂ ಮಾಡುವ ಧೈರ್ಯ ಇಲ್ಲ.<BR/>ಜಾತಿವಾರು ಜನಗಣತಿಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ಸರ್ಕಾರದ ನಿರ್ಧಾರ ವಿರೋಧಿಸಿ (ನಂತರ ಸರ್ಕಾರ ಈ ಆದೇಶ ಹಿಂದಕ್ಕೆ ಪಡೆಯಿತು.) ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ, ಪ್ರಗತಿಪರ ಚಳವಳಿಗಾರರೊಬ್ಬರು ನನ್ನೊಂದಿಗೆ ಮಾತನಾಡುತ್ತ, ಇದು ತುಂಬ ಸೆನ್ಸಿಟಿವ್ ಇಶ್ಯೂ, ನಿಮ್ಮ ಜತೆ ಗುರುತಿಸಿಕೊಳ್ಳಲು ಕಷ್ಟವಾಗುತ್ತೆ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಒಂದು ವೇಳೆ ಜನಗಣತಿ ಸಂಪೂರ್ಣಗೊಂಡು ಎಲ್ಲ ಜಾತಿಗಳ ಸಂಪೂರ್ಣ ಜಾತಕ ಬಯಲಾದರೆ, ಎಲ್ಲಿ ತಾವು ಪ್ರತಿನಿಧಿಸುವ ಸಮಾಜ ಮೀಸಲಾತಿ ಕಳೆದುಕೊಳ್ಳುತ್ತದೋ? ಅದರ ಪರಿಣಾಮವಾಗಿ ತಮ್ಮ ಸಮುದಾಯ ಎಲ್ಲಿ ತಮ್ಮ ವಿರುದ್ಧ ನಿಲ್ಲುತ್ತದೋ ಎಂಬ ಆತಂಕ ಅವರದಾಗಿತ್ತು.<BR/>ಜಾತಿ ವ್ಯವಸ್ಥೆಯ ಒಳಗೆ ಎಲ್ಲರೂ ಆತ್ಮವಂಚಕರಾಗುತ್ತಿದ್ದಾರೆ. ಇದಕ್ಕೆ ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಪ್ರಬಲ ಸಮುದಾಯಗಳ ಸಾಕಷ್ಟು ಪ್ರಗತಿಪರೂ ಇದಕ್ಕೆ ಹೊರತಾಗಿಲ್ಲ. ಲಿಂಗಾಯಿತ-ಒಕ್ಕಲಿಗ ಪ್ರಗತಿಪರರ ಪೈಕಿ ಬಹಳಷ್ಟು ಮಂದಿ ಬ್ರಾಹ್ಮಣರನ್ನು ಎದುರಿಸುವ, ವಿರೋಧಿಸುವ ಮಟ್ಟಿಗೆ ಮಾತ್ರ ಪ್ರಗತಿಪರರು. ಮಿಕ್ಕಂತೆ ಅವರು ಒಳಗಿಂದೊಳಗೆ ಜಾತಿವಾದಿಗಳು.<BR/>ಇಂಥ ಸಂದರ್ಭದಲ್ಲಿ ನೀವು ಈ ವಿಷಯ ಕುರಿತು ಬರೆದಿರುವುದು ನಿಜಕ್ಕೂ ಸಂತೋಷವೆನಿಸಿತು. ನೀವು ಕಡೆಯಲ್ಲಿ ಸೂಚಿಸಿರುವ ಸಲಹೆಗಳು ಅರ್ಥಪೂರ್ಣ ಹಾಗು ಆಗಲೇಬೇಕಾಗಿರುವುದು. ಆ ನಿಟ್ಟಿನಲ್ಲಿ ಮೊದಲು ಮೇಲ್ವರ್ಗದ ಮಾನವಂತರೇ ಕ್ರಿಯಾಶೀಲರಾಗಬೇಕು. ಇಲ್ಲವಾದಲ್ಲಿ ಸಾಮಾಜಿಕ ಅಸಮತೋಲನ ನಿವಾರಣೆಯ ಕನಸು ಎಂದೆಂದಿಗೂ ನನಸಾಗದು.<BR/>ದೇವರಾಜ ಅರಸು ಅವರು ಉಳುವವನಿಗೆ ಭೂಮಿ ನೀತಿಯನ್ನು ಜಾರಿಗೆ ತರುವ ಕೆಲ ದಿನಗಳ ಮೊದಲು ತಮಗೆ ತೀರಾ ಆತ್ಮೀಯರಾಗಿದ್ದ ಉತ್ತರ ಕರ್ನಾಟಕದ ಲಿಂಗಾಯಿತ ಶಾಸಕರೊಬ್ಬರಿಗೆ ಈ ವಿಷಯವನ್ನು ತಿಳಿಸಿದರಂತೆ. ಉಳುವವನಿಗೆ ಭೂಮಿ ನೀತಿ ಜಾರಿಗೆ ಬಂದರೆ ನಿಮ್ಮ ಜಮೀನು ಕಳೆದುಕೊಳ್ಳುತ್ತೀರಿ. ಸಾಧ್ಯವಾದರೆ ಒಂದಷ್ಟನ್ನು ಮಾರಲು ಸಾಧ್ಯವಾದರೆ ಮಾರಿಕೊಂಡುಬಿಡಿ ಎಂದು ಅವರಿಗೆ ಹೇಳಿದರಂತೆ. ಆಗ ಆ ಶಾಸಕರು, ಇಲ್ಲ ನಾನು ನನ್ನ ಜಮೀನು ಮಾರುವುದಿಲ್ಲ. ಹೋಗುವುದಿದ್ದರೆ ನನ್ನ ಜಮೀನು ಕೂಡ ಹೋಗಲಿ. ನಾನು ಎಲ್ಲರಿಗೂ ಹೊರತಾಗುವುದೇಕೆ? ನನ್ನ ಜಮೀನೂ ಬಡವರ ಪಾಲಾಗುವುದಾದರೆ ಆಗಲಿ ಎಂದು ಹೇಳಿದರಂತೆ.<BR/>ಇಂಥ ನಾಯಕರು ಇವತ್ತಿನ ಕಾಲದಲ್ಲಿ ಯಾರಾದರೂ ಇದ್ದಾರೆಯೆ?desimaatuhttps://www.blogger.com/profile/14925784040436074789noreply@blogger.com