Sep 1, 2010

ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ...

ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್‌ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ.

ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: "ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. ಅವರಿಗೆ ಇಲ್ಲದಿದ್ದಾಗ ಹತ್ತಿರಕ್ಕೆ ಕರೆದು ನಮಗಿರುವುದರಲ್ಲೆ ಅವರಿಗೂ ಇಡಬೇಕಪ್ಪ." ಸಾಮಾಜಿಕ-ಆರ್ಥಿಕ-ಬೌದ್ಧಿಕ ಇತಿಮಿತಿಗಳೇನೇ ಇರಲಿ, ಕಲುಷಿತವಾಗಲೊಲ್ಲದ ಮನಸ್ಸುಗಳು.

ಇತ್ತೀಚೆಗೆ ತಾನೆ ಬೆಂಗಳೂರಿನಲ್ಲಿ ಹಲವಾರು ನಿರಾಶ್ರಿತರು ಸಾವಿಗೀಡಾದರು....








No comments: